ಆ್ಯಪ್ನಗರ

ಶಾಲಾ ಕಾಲೇಜ್‌ಗಳಲ್ಲಿ ಗಣರಾಜ್ಯೋತ್ಸವ

ಧಾರವಾಡ: ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿಭಾನುವಾರ ಗಣರಾಜೋತ್ಸವ ವಿಜೃಂಭಣೆಯಿಂದ ನಡೆಯಿತು. ಐಸಿಎಸ್‌ ಮಹೇಶ ಪದವಿ ಪೂರ್ವ ಕಾಲೇಜು: ಇಲ್ಲಿನ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಭಾನುವಾರ 71ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಾಚಾರ್ಯ ಉಮೇಶ ಪುರೋಹಿತ ಧ್ವಜಾರೋಹಣ ನೆರವೇರಿಸಿದರು.

Vijaya Karnataka 27 Jan 2020, 5:00 am
ಧಾರವಾಡ: ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿಭಾನುವಾರ ಗಣರಾಜೋತ್ಸವ ವಿಜೃಂಭಣೆಯಿಂದ ನಡೆಯಿತು. ಐಸಿಎಸ್‌ ಮಹೇಶ ಪದವಿ ಪೂರ್ವ ಕಾಲೇಜು: ಇಲ್ಲಿನ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಭಾನುವಾರ 71ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಾಚಾರ್ಯ ಉಮೇಶ ಪುರೋಹಿತ ಧ್ವಜಾರೋಹಣ ನೆರವೇರಿಸಿದರು.
Vijaya Karnataka Web 26MAILAR06_21


ಕಾರ್ಯಕ್ರಮದಲ್ಲಿಉಪಪ್ರಾಚಾರ್ಯ ಮಹಾಲಿಂಗ ಕಮತಗಿ, ಸಕಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೃಷ್ಟಿ ಯಲಿಗಾರ ಸ್ವಾಗತಿಸಿ ನಿರೂಪಿಸಿದರು. ಕೀರ್ತಿ ಕಡಕೋಳ ದೇಶಭಕ್ತಿಗೀತೆ ಸಾದರ ಪಡಿಸಿದರು. ಬಿಂದು ಹಾಗೂ ತಂಡ ಸ್ವಾತಂತ್ರ್ಯಗೀತೆ ಪ್ರಸ್ತುತ ಪಡಿಸಿದರು. ದಾನೇಶ್ವರಿ ಪಟ್ಟಣಶೆಟ್ಟಿ ವಂದಿಸಿದರು.

ಶ್ರೀಸಾಯಿ ಪದವಿ ಪೂರ್ವ ಕಾಲೇಜ್‌ :
ನಗರದ ತಹಸೀಲ್ದಾರ ಕಚೇರಿ ಬಳಿಯ ಶ್ರೀಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ71ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ನಿರ್ದೇಶಕ ಪ್ರೊ. ನಾಗರಾಜ್‌ ಶಿರೂರ, ಪ್ರೊ. ಬಿ. ವಿ. ಮೊರಂಕರ, ಪ್ರೊ. ಕಿರಣ್‌ ಕರ್ಜಗಿ, ಪ್ರೊ. ನಿಕೇತ್‌ ಹೊನಕುಪ್ಪಿ, ಕೆ.ಬಿ.ಮೇಟಿ, ಗೀತಾ ಬಡಿಗೇರ, ವಿಜಯ ಹರಿಜನ ಉಪಸ್ಥಿತರಿದ್ದರು. ಪ್ರೊ. ಮೌನೇಶ್ವರ್‌ ಸ್ವಾಗತಿಸಿದರು. ಪ್ರೊ. ಎಸ್‌. ಎಂ. ತಾರಿಹಾಳ ನಿರೂಪಿಸಿದರು.

ಕೆಸಿಡಿ ಕಾಲೇಜು:
ಕರ್ನಾಟಕ ಕಲಾ ಕಾಲೇಜಿನಲ್ಲಿಪ್ರಾಚಾರ್ಯ ಡಾ. ಬಿ.ಎಫ್‌.ಚಾಕಲಬ್ಬಿ ಧ್ವಜಾರೋಹಣ ನೆರವೇರಿಸಿದರು.

ಕೆಸಿಡಿಯ ಎನ್‌ಸಿಸಿ ಮತ್ತು ಎನ್‌.ಎಸ್‌.ಎಸ್‌ ಕೆಡೆಟ್‌ಗಳು ಗೌರವ ವಂದನೆ ಸಲ್ಲಿಸಿದರು. ಎನ್‌ಸಿಸಿ ಅಧಿಕಾರಿ ಡಾ.ಯಶವಂತ ರಾವುತ್‌, ಎನ್‌ಎಸ್‌ಎಸ್‌ ಅಧಿಕಾರಿ ಡಾ. ಬಿ.ಎಸ್‌. ಭಜಂತ್ರಿ ಡಾ. ಅರುಣಾ ಹಳ್ಳಿಕೇರಿ, ಡಾ.ವಿ.ಶಾರದಾ, ಡಾ.ಅಶೋಕ ಐನಾಪೂರ, ಡಾ. ಸುರೇಶ್‌ ಹುಲ್ಲಣ್ಣವರ, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ:
ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಹುರಕಡ್ಲಿಅಜ್ಜ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಾಚಾರ್ಯ ಡಾ. ಎಸ್‌. ಜಿ. ಹಿರೇಮಠ ಮಾತನಾಡಿದರು.

ಎಸ್‌ಜೆಎಂವಿ ಮಹಾಂತ ಕಾಲೇಜಿನಲ್ಲಿ:
ನಗರದ ರಾಯಾಪುರದ ಎಸ್‌ಜೆಎಂವಿ ಮಹಾಂತ ಮಹಾವಿದ್ಯಾಯದಲ್ಲಿಪ್ರಾಚಾರ್ಯ ಡಾ. ಸಿ.ಎಂ.ಕಡಕೊಳ ಧ್ವಜಾರೊಹಣ ನೆರವೇರಿಸಿದರು. ಪ್ರೊ.ಜಯಲಕ್ಷಿತ್ರ್ಮೕ ಯಂಡಿಗೇರಿ, ಡಾ. ಕೆ.ಎಸ್‌.ಶಾಂತಯ್ಯ ಇದ್ದರು. ಕಾವೇರಿ ಸುಳ್ಳದ, ಭರತ ಮುತ್ತಗಿ, ಬಸಿರಾ ಸಾವಂತ, ಲಕ್ಷಿತ್ರ್ಮೕ ಪಾಟೀಲ, ಮೀನಾಕ್ಷಿ ದೇಶ ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಕೆ.ಎಸ್‌.ಮೇಲ್ಮಾಳಗಿ, ಸಿ.ಕೆ.ಹುಬ್ಬಳ್ಳಿ, ಎ.ಬಿ.ಶಿರಿಯಣ್ಣವರ, ಡಿ ನಾಗರಾಜಪ್ಪ, ಕಾವೇರಿ ಸೂರ‍್ಯವಂಶಿ, ಸಹನಾ ಹಿರೇಮಠ, ಚೈತ್ರಾ ಬದಾಮಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ