ಆ್ಯಪ್ನಗರ

ಹೇಳಿಕೆ ವಾಪಸ್‌ ಪಡೆಯಲು ಆಗ್ರಹ

ಹುಬ್ಬಳ್ಳಿ : ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಮುದ್ದೇಬಿಹಾಳದಲ್ಲಿ ಅರ್ಚಕರು, ಪುರೋಹಿತರು ದಲ್ಲಾಳಿಗಳು ಎಂದು ಕರೆದಿದ್ದಾರೆ. 24 ಗಂಟೆಯಲ್ಲಿ ಸ್ವಾಮೀಜಿ ಈ ಹೇಳಿಕೆ ಹಿಂಪಡೆದು ಬಹಿರಂಗ ಕ್ಷ ಮೆಯಾಚಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹುಬ್ಬಳ್ಳಿ ಋುಗ್ವೇದ ಪುರೋಹಿತ ಸೇವಾ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಎಚ್ಚರಿಕೆ ನೀಡಿದರು.

Vijaya Karnataka 22 Aug 2019, 5:00 am
ಹುಬ್ಬಳ್ಳಿ : ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಮುದ್ದೇಬಿಹಾಳದಲ್ಲಿ ಅರ್ಚಕರು, ಪುರೋಹಿತರು ದಲ್ಲಾಳಿಗಳು ಎಂದು ಕರೆದಿದ್ದಾರೆ. 24 ಗಂಟೆಯಲ್ಲಿ ಸ್ವಾಮೀಜಿ ಈ ಹೇಳಿಕೆ ಹಿಂಪಡೆದು ಬಹಿರಂಗ ಕ್ಷ ಮೆಯಾಚಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹುಬ್ಬಳ್ಳಿ ಋುಗ್ವೇದ ಪುರೋಹಿತ ಸೇವಾ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಎಚ್ಚರಿಕೆ ನೀಡಿದರು.
Vijaya Karnataka Web request to return statement
ಹೇಳಿಕೆ ವಾಪಸ್‌ ಪಡೆಯಲು ಆಗ್ರಹ


ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಸಮಾಜವನ್ನು ಗುರಿಯಾಗಿಟ್ಟುಕೊಂಡು ಸ್ವಾಮೀಜಿಗಳು ಪದೇ ಪದೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸ್ವಾಮಿಗಳಾದವರು ಸಮಾಜದಲ್ಲಿ ದ್ವಂದ್ವಗಳನ್ನು ಸೃಷ್ಟಿ ಮಾಡಬಾರದು. ಶಾಂತಿ ಸಾಮರಸ್ಯ ಬೆಳೆಸುವ ಕಾರ್ಯ ಮಾಡಬೇಕು. ಅಸಂಬದ್ಧ ಹೇಳಿಕೆ ನೀಡುವುದಕ್ಕೂ ಮುನ್ನ ತಮ್ಮ ಸ್ಥಾನದ ಘನತೆ ಬಗ್ಗೆ ಅರಿಯಬೇಕು ಎಂದರು. ಸಿದ್ದಬಸಯ್ಯಶಾಸ್ತ್ರಿ , ರಾಜಶೇಖರ ಸಾಲಿಮಠ, ಪ್ರವೀಣ ಶಾಸ್ತ್ರಿ, ಚನ್ನಬಸಯ್ಯ ಶಾಸ್ತ್ರಿ, ಜಗದೀಶ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ