ಆ್ಯಪ್ನಗರ

ಮನೆ ತೆರವಿಗೆ ನಿವಾಸಿಗಳ ವಿರೋಧ

ಧಾರವಾಡ : ಡಾ.ಅಂಬೇಡ್ಕರ್‌ ಕಾಲೋನಿಯಲ್ಲಿನ ಮನೆಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿ ನಗರದ ವಿದ್ಯಾರಣ್ಯ ಕಾಲೇಜು ಬಳಿಯ ಅಂಬೇಡ್ಕರ್‌ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

Vijaya Karnataka 23 Jul 2019, 5:00 am
ಧಾರವಾಡ : ಡಾ.ಅಂಬೇಡ್ಕರ್‌ ಕಾಲೋನಿಯಲ್ಲಿನ ಮನೆಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿ ನಗರದ ವಿದ್ಯಾರಣ್ಯ ಕಾಲೇಜು ಬಳಿಯ ಅಂಬೇಡ್ಕರ್‌ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿದರು.
Vijaya Karnataka Web residents opposition to the move
ಮನೆ ತೆರವಿಗೆ ನಿವಾಸಿಗಳ ವಿರೋಧ


ಡಾ. ಅಂಬೇಡ್ಕರ್‌ ಕಾಲೋನಿಯ ಜಾಗೆ ಈ ಮೊದಲು ದೈವಜ್ಞ ಹೌಸಿಂಗ್‌ ಸೊಸೈಯಿಟಿಗೆ ಸೇರಿತು ಎಂದು ಹೇಳಲಾಗುತ್ತಿದೆ. ಕೋರ್ಟ್‌ ಕೂಡ ಈ ಸ್ಥಳವನ್ನು ದೈವಜ್ಞ ಹೌಸಿಂಗ್‌ ಸೊಸೈಯಿಟಿಗೆ ನೀಡಬೇಕೆಂದು ಕಳೆದ ಗುರುವಾರ (ಜು.18)ಆದೇಶ ನೀಡಿದೆ. ಅದೇ ಆದೇಶದ ಪ್ರತಿ ಹಿಡಿದಕೊಂಡು ಜೆಸಿಬಿ ಜತೆಗೆ ಅಂಬೇಡ್ಕರ್‌ ಕಾಲೋನಿಗೆ ಆಗಮಿಸಿದ ಕೋರ್ಟ್‌ ಬಿಲೀಫ್‌ಗಳು ಕೋರ್ಟ್‌ ಆದೇಶದ ಕುರಿತು ಸ್ವವಿವರವಾಗಿ ನಿವಾಸಿಗಳಿಗೆ ತಿಳಿಸಿದರು. ನಂತರ ಕಾಲೋನಿಯಲ್ಲಿನ ಸುಮಾರು 24 ಮನೆಗಳನ್ನು ತೆರವುಗೊಳಿಸಲು ಮುಂದಾದರು.

ಈ ವೇಳೆ ನಿವಾಸಿಗಳು ಯಾವುದೇ ಕಾರಣಕ್ಕೂ ಮನೆಗಳನ್ನು ತೆರವುಗೊಳಿಸಲು ಅನುವು ಮಾಡಿಕೊಡುವುದಿಲ್ಲ. ನಾವು 25 ರಿಂದ 30 ವರ್ಷದಿಂದ ಈ ಸ್ಥಳದಲ್ಲಿ ಜೀವನ ನಡೆಸುತ್ತಿದ್ದೇವೆ. ಈಗ ಏಕಾಏಕಿ ಆಗಮಿಸಿ ನೋಟಿಸ್‌ ನೀಡದೇ ಮನೆ ತೆರವುÜ ಮಾಡಬೇಕು ಎಂದರೆ ಹೇಗೆ? ಮಕ್ಕಳು ಸೇರಿದಂತೆ ನಮ್ಮ ಬದುಕು ಬೀದಿ ಪಾಲಾಗಲಿದೆ. ಮಕ್ಕಳ ಮುಂದಿನ ಭವಿಷ್ಯ ಜೀವನ ಗತಿ ಏನು?, ಎಂದ ಅವರು, 40 ವರ್ಷಗಳ ಹಿಂದೆ ದೇಸಾಯಿ ದೇಶಪಾಂಡೆ ಎಂಬುವವರು ನಂಬಿಕೆಯ ಆಧಾರದ ಮೇಲೆ ಈ ಜಾಗೆಯನ್ನು ದಲಿತರಿಗೆ ತಮ್ಮ ಸ್ವಂತ ಜಮೀನಿನಲ್ಲಿ ಈ ಭೂಮಿ ನೀಡಿದ್ದಾರೆ. ಆದರೆ, ಈಗಿಂದೀಗಲೇ ಮನೆ ತೆರವುಗೊಳಿಸಿ ಎಂದರೆ ಮುಂದೆ ಜೀವನ ನಡೆಸುವುದು ಕಷ್ಟವಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಆದರೆ, ಇದಕ್ಕೆ ಜಗ್ಗದ ಕೋರ್ಟ್‌ ಬಿಲೀಫ್‌ಗಳು, ಕೋರ್ಟ್‌ ಆದೇಶವನ್ನು ಎಲ್ಲರೂ ಪಾಲಿಸಬೇಕು. ಮನೆಗಳಲ್ಲಿನ ವಸ್ತುಗಳನ್ನು ತೆಗೆದುಕೊಳ್ಳಲು ಒಂದು ಗಂಟೆ ಅವಕಾಶ ನೀಡಲಾಗುವುದು. ನಂತರ ತೆರವುಗೊಳಸುತ್ತೇವೆ ಎಂದಾಗ ರೊಚ್ಚಿಗೆದ್ದ ನಿವಾಸಿಗಳು ಕೋರ್ಟ್‌ ಬಿಲೀಫ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಈ ಹೊತ್ತಿನಲ್ಲಿ ಬಿಗುವಿನ ವಾತವರಣ ಕೂಡ ನಿರ್ಮಾಣವಾಯಿತು. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್‌ರು, ರಕ್ಷ ಣೆ ಇಲ್ಲದೇ ಕಾರ್ಯಚರಣೆಗೆ ಮುಂದಾಗಬೇಡಿ. ಇದರಿಂದ ಅನಾಹುತಗಳು ನಡೆಯುವ ಸಂಭವವಿರುತ್ತದೆ ಹೀಗಾಗಿ ಪೊಲೀಸ್‌ರ ರಕ್ಷ ಣೆಯೊಂದಿಗೆ ಕಾರ್ಯಚರಣೆ ಆರಂಭಿಸಿ ಎಂದು ಸಲಹೆ ನೀಡಿದರು. ಆ ಬಳಿಕ ಪೊಲೀಸ್‌ರ ಸಲಹೆ ನಿವಾಸಿಗಳ ಆಗ್ರಹದಿಂದ ತೆರವು ಕಾರ್ಯಚರಣೆ ಮುಂದೂಡಲಾಯಿತು. ಅಲ್ಲದೇ ತೆರವು ಕಾರ್ಯಚರಣೆಗೆ ಪೊಲೀಸರ್‌ ರಕ್ಷ ಣೆ ಒದಗಿಸುವ ಕುರಿತು ಕೋರ್ಟ್‌ ಜು.24ರ ಆದೇಶ ನೀಡಬಹುದು. ಅಲ್ಲಿಯವರೆಗೆ ನಿವಾಸಿಗಳು ಸ್ಥಳಾಂತರಗೊಳ್ಳಬೇಕು ಎಂದು ಕೋರ್ಟ್‌ ಬಿಲೀಫ್‌ಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ