ಧಾರವಾಡ : ಕೊರೊನಾ ವೈರಸ್ ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿಸರಕಾರ ವಿಧಿಸಿರುವ ನಿರ್ಬಂಧವನ್ನು ತಾಲೂಕಿನ ನರೇಂದ್ರ ಗ್ರಾಮಸ್ಥರು ಪಾಲಿಸಿದರು.
ವೈರಸ್ ಹರಡುವಿಕೆ ತಡೆಯುವ ಸಲುವಾಗಿ ಗ್ರಾಮಕ್ಕೆ ಯಾವುದೇ ವಾಹನಗಳ ಆಗಮನ ಮತ್ತು ನಿರ್ಗಮನಕ್ಕೆ ಬ್ರೇಕ್ ಹಾಕಲಾಯಿತು. ಗ್ರಾಮದಲ್ಲಿಯಾರೊಬ್ಬರೂ ಸಂಚರಿಸದೇ ತಮ್ಮ ಮನೆಗಳಲ್ಲಿಉಳಿದಿದ್ದು, ಗ್ರಾಮದ ಎಲ್ಲರಸ್ತೆಗಳು ಖಾಲಿಯಾಗಿದ್ದವು.
ಸ್ವಯಂ ಪ್ರೇರಣೆಯಿಂದ ಸಂಪೂರ್ಣ ಬಂದ್ ಘೋಷಿಸಿದ್ದ ಕಾರಣ ಮಳೆಪ್ಪಜ್ಜನ ಮಠದ ಅಭಿವೃದ್ಧಿ ಟ್ರಸ್ಟ್ ಕಮಿಟಿ ತೀರ್ಮಾನದಂತೆ ಮಳೆಪ್ಪಜ್ಜನ ಮಠದಲ್ಲಿಪ್ರತಿ ಅಮಾವಾಸ್ಯೆಯಂದು ನಡೆಯುತ್ತಿದ್ದ ಸಾಮೂಹಿಕ ಪ್ರಸಾದ ವಿತರಣೆಯನ್ನು ಕೂಡ ರದ್ದು ಮಾಡಲಾಗಿತ್ತು.
ಗ್ರಾಮ ಪಂಚಾಯಿತಿ ವತಿಯಿಂದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನರು ಸ್ವಚ್ಛತೆ ಕಾಯ್ದುಕೊಳ್ಳುವಂತೆ ಮನವಿ ಮಾಡಲಾಗಿದೆ.
ವೈರಸ್ ಹರಡುವಿಕೆ ತಡೆಯುವ ಸಲುವಾಗಿ ಗ್ರಾಮಕ್ಕೆ ಯಾವುದೇ ವಾಹನಗಳ ಆಗಮನ ಮತ್ತು ನಿರ್ಗಮನಕ್ಕೆ ಬ್ರೇಕ್ ಹಾಕಲಾಯಿತು. ಗ್ರಾಮದಲ್ಲಿಯಾರೊಬ್ಬರೂ ಸಂಚರಿಸದೇ ತಮ್ಮ ಮನೆಗಳಲ್ಲಿಉಳಿದಿದ್ದು, ಗ್ರಾಮದ ಎಲ್ಲರಸ್ತೆಗಳು ಖಾಲಿಯಾಗಿದ್ದವು.
ಸ್ವಯಂ ಪ್ರೇರಣೆಯಿಂದ ಸಂಪೂರ್ಣ ಬಂದ್ ಘೋಷಿಸಿದ್ದ ಕಾರಣ ಮಳೆಪ್ಪಜ್ಜನ ಮಠದ ಅಭಿವೃದ್ಧಿ ಟ್ರಸ್ಟ್ ಕಮಿಟಿ ತೀರ್ಮಾನದಂತೆ ಮಳೆಪ್ಪಜ್ಜನ ಮಠದಲ್ಲಿಪ್ರತಿ ಅಮಾವಾಸ್ಯೆಯಂದು ನಡೆಯುತ್ತಿದ್ದ ಸಾಮೂಹಿಕ ಪ್ರಸಾದ ವಿತರಣೆಯನ್ನು ಕೂಡ ರದ್ದು ಮಾಡಲಾಗಿತ್ತು.
ಗ್ರಾಮ ಪಂಚಾಯಿತಿ ವತಿಯಿಂದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನರು ಸ್ವಚ್ಛತೆ ಕಾಯ್ದುಕೊಳ್ಳುವಂತೆ ಮನವಿ ಮಾಡಲಾಗಿದೆ.