ಆ್ಯಪ್ನಗರ

ನಿವೃತ್ತ ಡಿವೈಎಸ್‌ಪಿ ಲಿಂಗದಾಳಗೆ ಜೈಲು ಶಿಕ್ಷೆ

ಧಾರವಾಡ: ನಿವೃತ್ತ ಡಿವೈಎಸ್‌ಪಿ ಬಸವರೆಡ್ಡಿ ವಿ.ಲಿಂಗದಾಳ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಅಪರಾಧಿ ಲಿಂಗದಾಳಗೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಿ ಆದೇಶ ಮಾಡಿದೆ.

Vijaya Karnataka 20 Feb 2020, 5:00 am
ಧಾರವಾಡ: ನಿವೃತ್ತ ಡಿವೈಎಸ್‌ಪಿ ಬಸವರೆಡ್ಡಿ ವಿ.ಲಿಂಗದಾಳ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಅಪರಾಧಿ ಲಿಂಗದಾಳಗೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಿ ಆದೇಶ ಮಾಡಿದೆ.
Vijaya Karnataka Web retired dysp lingadala jailed
ನಿವೃತ್ತ ಡಿವೈಎಸ್‌ಪಿ ಲಿಂಗದಾಳಗೆ ಜೈಲು ಶಿಕ್ಷೆ


2009ರಲ್ಲಿಬೆಳಗಾವಿ ಜಿಲ್ಲೆಕಿತ್ತೂರು ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಆಗಿದ್ದ ಬಸವರೆಡ್ಡಿ ವೆಂಕರೆಡ್ಡಿ ಲಿಂಗದಾಳ ಅವರು ಆದಾಯಕ್ಕಿಂತ ಹೆಚ್ಚು ಅಕ್ರಮವಾಗಿ ಆಸ್ತಿ, ಹಣ ಸಂಪಾದನೆ ಮಾಡಿದ್ದಾರೆ ಎಂದು ಧಾರವಾಡ ಲೋಕಾಯುಕ್ತರಿಗೆ ದೂರು ಬಂದಿತ್ತು. ಅದರಂತೆ ಲೋಕಾಯುಕ್ತರು ಮೇ 25ರಂದು ಧಾರವಾಡ ಸಂಪಿಗೆನಗರದ ಹಾಗೂ ಗಾಂಧಿನಗರದಲ್ಲಿನ ಲಿಂಗದಾಳ ಅವರ ಮನೆಯ ಮೇಲೆ ದಾಳಿ ನಡೆಸಿ ಆಸ್ತಿಯ ದಾಖಲೆಗಳನ್ನು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಬಿ.ವಿ.ಲಿಂಗದಾಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಲೋಕಾಯುಕ್ತರು ದೂರು ದಾಲಿಸಿಕೊಂಡಿದ್ದರು. ಅದರಂತೆ ತನಿಖೆ ಮಾಡಿದ್ದ ಲೋಕಾಯುಕ್ತರು, ನ್ಯಾಯಾಲಯಕ್ಕೆ 2013ರಲ್ಲಿದೋಷಾರೋಪ ಪಟ್ಟಿಯನ್ನು ಸಲ್ಲಿಸಿ, ಲಿಂಗದಾಳ ಅವರ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿಸಿ 1,10,75,375 ರೂ. ಇದೆ. ಇದರಲ್ಲಿ78,80,733 ರೂ. ಮೊತ್ತದ ಆಸ್ತಿಯನ್ನು ತಮ್ಮ ಆದಾಯಕ್ಕಿಂತ ಹೆಚ್ಚಿಗೆ ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿಇರುವಾಗಲೇ ಲಿಂಗದಾಳ ಅವರು ವೃತ್ತಿಯಲ್ಲಿಬಡ್ತಿ ಪಡೆದುಕೊಂಡು, ಡಿವೈಎಸ್‌ಪಿ ಆಗಿ 2014ರ ಜು. 31ರಂದು ನಿವೃತ್ತಿ ಹೊಂದಿದ್ದರು.

ವಿಚಾರಣೆ ಮಾಡಿದ 3ನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ.ಎಚ್‌.ಸಿ.ಶ್ಯಾಮಪ್ರಸಾದ್‌ ಅವರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಆರೋಪಿ ಬಿ.ವಿ.ಲಿಂಗದಾಳ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟು, ಅಪರಾಧಿ ಲಿಂಗದಾಳಗೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಹಾಗೂ ದಂಡ ಪಾವತಿ ತಪ್ಪಿದರೆ ಹೆಚ್ಚುವರಿಯಾಗಿ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಅಲ್ಲದೇ ಅಪರಾಧಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಿದ್ದರೆ 44,06,882 ರೂ. ಮೌಲ್ಯದ ಆಸ್ತಿಯನ್ನು ಸರಕಾರ ಜಪ್ತಿ ಮಾಡಬಹುದು ಎಂದು ಆದೇಶ ಹೊರಡಿಸಿದರು. ಲೋಕಾಯುಕ್ತರ ಪರವಾಗಿ ವಕೀಲ ಎಸ್‌.ಎಸ್‌. ಶಿವಳ್ಳಿ ವಾದ ಮಂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ