ಆ್ಯಪ್ನಗರ

ಕೆಸಿಡಿ ಗೋಪುರ ಗಡಿಯಾರಕ್ಕೆ ಮರುಜೀವ !

ಧಾರವಾಡ: ದಕ್ಷಿಣ ಮಹಾರಾಷ್ಟ್ರ ರೈಲ್ವೆ ಕೇಂದ್ರ ಕಚೇರಿ ಆಗಿದ್ದ ಈಗಿನ ಧಾರವಾಡ ಕರ್ನಾಟಕ ಕಾಲೇಜು ಪಾರಂಪರಿಕ ಕಟ್ಟಡದ 2 ಗೋಪುರ ಗಡಿಯಾರಗಳನ್ನು ನೈರುತ್ಯ ರೈಲ್ವೆ ಅಧಿಕಾರಿಗಳು ವಿಶೇಷ ಆಸ್ಥೆ ವಹಿಸಿ ಪುನರ್‌ಸ್ಥಾಪಿಸಿದ್ದಾರೆ. ಈಗದು ಪ್ರಾಯೋಗಿಕ ಹಾಗೂ ಪರಿಶೀಲನೆ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿಗೋಪುರ ಗಡಿಯಾರ ಮತ್ತೆ ಸದ್ದು ಮಾಡಲಿದೆ.

Vijaya Karnataka 12 Sep 2020, 5:09 pm
ಧಾರವಾಡ: ದಕ್ಷಿಣ ಮಹಾರಾಷ್ಟ್ರ ರೈಲ್ವೆ ಕೇಂದ್ರ ಕಚೇರಿ ಆಗಿದ್ದ ಈಗಿನ ಧಾರವಾಡ ಕರ್ನಾಟಕ ಕಾಲೇಜು ಪಾರಂಪರಿಕ ಕಟ್ಟಡದ 2 ಗೋಪುರ ಗಡಿಯಾರಗಳನ್ನು ನೈರುತ್ಯ ರೈಲ್ವೆ ಅಧಿಕಾರಿಗಳು ವಿಶೇಷ ಆಸ್ಥೆ ವಹಿಸಿ ಪುನರ್‌ಸ್ಥಾಪಿಸಿದ್ದಾರೆ. ಈಗದು ಪ್ರಾಯೋಗಿಕ ಹಾಗೂ ಪರಿಶೀಲನೆ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿಗೋಪುರ ಗಡಿಯಾರ ಮತ್ತೆ ಸದ್ದು ಮಾಡಲಿದೆ.
Vijaya Karnataka Web 11NIJAGUNI10_21
ಧಾರವಾಡ ಕರ್ನಾಟಕ ಕಾಲೇಜಿನ ಗೋಪುರ ಗಡಿಯಾರ ಹಾಗೂ ಗಡಿಯಾರದ ಬಿಡಿಭಾಗಗಳು.


1883-84ರಲ್ಲಿರೈಲ್ವೆ ಕೇಂದ್ರ ಕಚೇರಿಯನ್ನು ಧಾರವಾಡದಲ್ಲಿಆರಂಭಿಸಲು ನಿರ್ಧರಿಸಲಾಗಿತ್ತು. ಆಗ ಈಸ್ಟ್‌ ಇಂಡಿಯಾ ಕಂಪನಿಯ ಚೀಫ್‌ ಎಂಜನಿಯರ್‌ಆಗಿದ್ದ ಕರ್ನಲ್‌ ಜೇಮ್ಸ… ಗಾವಿನ್‌ ಲಿಂಡ್ಸೆ ಮೇಲ್ವಿಚಾರಣೆಯಲ್ಲಿಈಗಿನ ಕೆಸಿಡಿ ಕಟ್ಟಡ ಹಾಗೂ ಗೋಪುರ ನಿರ್ಮಾಣ ಆರಂಭಗೊಂಡು 1890ರಲ್ಲಿಪೂರ್ಣಗೊಂಡಿತ್ತು. ಆದರೆ, ಮದ್ರಾಸ್‌ ರೈಲ್ವೆಯೊಂದಿಗೆ ದಕ್ಷಿಣ ಮಹಾರಾಷ್ಟೖ ರೈಲ್ವೆ ವಿಲೀನಗೊಂಡಿತ್ತು. ಆಗ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ 1920ರಲ್ಲಿಈ ಕಟ್ಟಡದಲ್ಲಿಯೇ ಕರ್ನಾಟಕ ಕಾಲೇಜು ಆರಂಭಿಸಲಾಗಿತ್ತು.

3 ಕಿ.ಮೀವರೆಗೆ ಸದ್ದು
ಅಂದಿನಿಂದ ಈ ಕಟ್ಟಡದ ಎರಡೂ ಬದಿಯಲ್ಲಿದ್ದ ಗೋಪುರಗಳಲ್ಲಿನ ಗಡಿಯಾರದ ಸದ್ದು ಸುತ್ತಲಿನ 3 ಕಿ.ಮೀ. ವರೆಗೂ ಕಂಪಿಸುತ್ತಲೇ ಇತ್ತು. ಇದಕ್ಕೆ ಲಂಡನ್‌ನಿಂದ ಗಡಿಯಾರ ತರಿಸಿಕೊಳ್ಳಲಾಗಿತ್ತು. ಇದರಲ್ಲಿಸುಂದರವಾದ ಹಿತ್ತಾಳೆ ಗಂಟೆ ಅಳವಡಿಸಲಾಗಿದೆ. ಗಂಟೆಯ ಸೂಜಿ 1.9 ಡಯಾಮೀಟರ್‌ಇದೆ. ತಾಪಮಾನ ಸರಿದೂಗಿಸುವ ಲೋಲಕದ ಮೂಲಕ ಸಮಯ ಹೊಂದಾಣಿಕೆಯ ವಿಧಾನ ಇದರಲ್ಲಿದೆ. ಆದರೆ, 2010ರಿಂದ ಈ ಗಡಿಯಾರ ಬಂದ್‌ ಆಗಿತ್ತು. ಈಗ ಅದು ಮತ್ತೆ ಸದ್ದು ಮಾಡಲು ಸಿದ್ಧಗೊಂಡಿರುವುದು ಸಂತಸ ತಂದಿದೆ ಎನ್ನುತ್ತಾರೆ ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ. ಎಸ್‌.ಆರ್‌. ಗಣಿ.

ಪಾರಂಪರಿಕ ಕಟ್ಟಡ ವೀಕ್ಷಣೆಗೆ ಭೇಟಿ ನೀಡಿದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಅವರು, ಗಡಿಯಾರ ಪುನರ್‌ಸ್ಥಾಪಿಸುವ ಭರವಸೆ ನೀಡಿದ್ದರು. ಎಚ್‌ಎಂಟಿ ಕಾರ್ಖಾನೆಯನ್ನೂ ಸಂಪರ್ಕಿಸಲಾಗಿತ್ತು. ಆದರೆ ಸಾಧ್ಯ ಆಗಿರಲಿಲ್ಲ. ಗಡಿಯಾರದ ಘಟಕಗಳು ಸವೆದು ಹೋಗಿದ್ದವು. ಹೀಗಾಗಿ ಮೂಲ ಗಡಿಯಾರದ ಮುರಿದ, ತಪ್ಪಿದ ಭಾಗಗಳನ್ನು ಸಂಗ್ರಹಿಸಿ ದುರಸ್ತಿ ಮಾಡಿಸಲಾಗಿದೆ. 120 ವರ್ಷಗಳಿಂದ ಮಳೆ- ಗಾಳಿಯಲ್ಲೂಸದ್ದು ಮಾಡುತ್ತಿದ್ದ ಗಡಿಯಾರ ಈಗ ಮತ್ತೆ ಜೀವಂತವಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ