ಆ್ಯಪ್ನಗರ

ಹುಬ್ಬಳ್ಳಿ-ಧಾರವಾಡದಲ್ಲಿ ಕಸ ಸಂಗ್ರಹ ವ್ಯವಸ್ಥೆ ಆಗಿಲ್ಲ `ಸ್ಮಾರ್ಟ್'; ಆರ್​ಎಫ್​ಐಡಿ ಟ್ಯಾಗ್ ನಿಜಕ್ಕೂ `ವೇಸ್ಟ್'!

ಅವಳಿ ನಗರ ಹುಬ್ಬಳ್ಳಿ- ಧಾರವಾಡಗಳಲ್ಲಿ ಕಸ ಸಂಗ್ರಹದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಸ ಸಂಗ್ರಕ್ಕೆ ಡಿಜಿಟಲ್ ರೂಪ ಕೊಡಬೇಕೆಂಬ ದೃಷಟಿಯಿಂದ ಸ್ಮಾರ್ಟ್ ಸಿಟಿ ಅನುದಾನದಡಿ ಪ್ರತಿ ಮನೆಗೂ ಆರ್ ಎಫ್ ಐಡಿ ಟ್ಯಾಗ್ ಅನ್ನು ಅಳವಡಿಸಲಾಗಿದೆ. ಕಳೆದ ವರ್ಷ 4 ವಾರ್ಡ್ ಗಳ 10 ಸಾವಿರ ಮನೆಗೆ ಅಳವಡಿಸಿದ ಬಳಿಕ ಈಗ ಎಲ್ಲ ವಾರ್ಡ್ ಗಳಿಗೂ ಅಳವಡಿಸಲಾಗಿತ್ತು. ಕೆಲ ಸಮಯ ಸರಿಯಾಗಿದ್ದ ಈ ಟ್ಯಾಗ್ ಇಗೀಗ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಹೈಲೈಟ್ಸ್‌:

  • ಹುಬ್ಬಳ್ಳಿ ಧಾರವಾಡದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದ ಆರ್ ಎಫ್ ಐಡಿ ಟ್ಯಾಗ್
  • ಇದರಿಂದ ಸರಿಯಾದ ರೀತಿಯಲ್ಲಿ ಕಸ ತ್ಯಾಜ್ಯ ಸಂಗ್ರಹ ಸಹ ಆಗುತ್ತಿಲ್ಲ ಎನ್ನಲಾಗಿದೆ
  • ಹೀಗಾಗಿ ಅವಳಿ ನಗರದಲ್ಲಿ ಬೇಕಾಬಿಟ್ಟಿ ಕಸ ತ್ಯಾಜ್ಯ ಬೀಳುತ್ತಿದ್ದು ಸಮಸ್ಯೆಯಾಗಿದೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web RFID
ಕಾರ್ಯ ನಿರ್ವಹಿಸದ ಆರ್ ಎಫ್ಐಡಿ ಟ್ಯಾಗ್.
ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಕಸ ಸಂಗ್ರಹ ವ್ಯವಸ್ಥೆ ಡಿಜಿಟಲ್ ರೂಪ ಕೊಟ್ಟು ಇನ್ನಷ್ಟು ಹೈಟೆಕ್ ಮಾಡಲು ಹೊರಟ ಮಹಾನಗರ ಪಾಲಿಕೆ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಸ್ಮಾರ್ಟ್ ಸಿಟಿ ಅನುದಾನದಡಿ ಪ್ರತಿ ಮನೆಗೆ ಆರ್ಎಫ್ಐಡಿ (ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಡಿವೈಸ್) ಟ್ಯಾಗ್ ಈಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಇನ್ನು ಇದರ ಗೋಜಿಗೆ ಬಹುತೇಕ ಪೌರ ಕಾರ್ಮಿಕರು ಹಾಗೂ ಅಧಿಕಾರಿಗಳು ಸಹ ಹೋಗುತ್ತಿಲ್ಲ. ಎರಡು
ವರ್ಷದ ಹಿಂದೆ ಪ್ರಾಯೋಗಿಕವಾಗಿ 4 ವಾರ್ಡ್ಗಳ ಸುಮಾರು 10 ಸಾವಿರ ಮನೆಗಳಿಗೆ ಆರ್ಎಫ್ಐಡಿ ಟ್ಯಾಗ್ ಅಳವಡಿಸಲಾಗಿತ್ತು ಈಗ ಎಲ್ಲ ವಾರ್ಡ್ ಗಳಿಗೂ ಅಳವಡಿಕೆ ಮಾಡಿ ಈಗ ಕೇಲ ಸಮಯ ಸರಿಯಾಗಿಯೇ ಇತ್ತು ಈಗ ಮಾತ್ರ ಇಲ್ಲ. ಕಾರ್ಯನಿರ್ವಹಣೆಯನ್ನು ಸಹ ಸರಿಯಾಗಿ ಆಗುತ್ತಿಲ್ಲ.

ಕೋಲಾರ: ತುಕ್ಕುಹಿಡಿದ ಕಸ ಸಂಗ್ರಹ ವಾಹನಗಳು! 5 ವರ್ಷಕ್ಕೇ ಗುಜರಿ ಸೇರುವಂತಾಗಿದೆ ಟಿಪ್ಪರ್‌, ಟ್ರ್ಯಾಕ್ಟರ್‌
67 ವಾರ್ಡ್ ಗಳಲ್ಲಿ ಅಳವಡಿಕೆ
ಹುಬ್ಬಳ್ಳಿ-ಧಾರವಾಡ ದಲ್ಲಿ 82 ವಾರ್ಡ್ ಗಳ ಪೈಕಿ 67 ವಾರ್ಡ್ಗಳಿಗೆ ಅಳವಡಿಕೆ ಮಾಡಲಾಗಿದ್ದು ಉಳಿದ ವಾರ್ಡ್ ಗಳಿ ಅಳವಡಿಕೆ ಮಾಡಿಲ್ಲ ಏಕೆಂದರೆ ಇತ್ತೀಚಿನ ದಿನಗಳಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡಲಾಯಿತು ‌ ವಸತಿ, ವಾಣಿಜ್ಯ, ಉದ್ಯಮ, ಎಲ್ಲ ಮಾದರಿಯ ಕಟ್ಟಡಗಳು ಸೇರಿ 2.78 ಲಕ್ಷ ಆಸ್ತಿಗಳಿವೆ ಎಂದು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಾಹಿತಿ ನೀಡಿದೆ.ಪ್ರತಿ ಪಿಐಡಿ (ಆಸ್ತಿ ಗುರುತಿನ ಸಂಖ್ಯೆ) ಸಂಖ್ಯೆಗೆ ಒಂದರಂತೆ ಪ್ರತಿ ಮನೆಯ ಗೋಡೆ ಅಥವಾ ಕಂಪೌಂಡ್ಗೆ ಟ್ಯಾಗ್ ಅಳವಡಿಸಲಾಗುತ್ತಿದೆ. ಟ್ಯಾಗ್ ಅಳವಡಿಕೆ ಹಾಗೂ ರೀಡಿಂಗ್ ದಾಖಲಿಸಿಕೊಳ್ಳುವ ಕೆಲಸವನ್ನು ಪೌರ ಕಾರ್ವಿುಕರು ನಿರ್ವಹಣೆ ಮಾಡಬೇಕು.

ಕಸ ಸಂಗ್ರಹಕ್ಕೆ ಮನೆ ಮನೆಗೆ ಬರುವ ಪೌರ ಕಾರ್ವಿುಕರಲ್ಲಿ ಒಬ್ಬರು ರೀಡರ್ ಅನ್ನು ಆರ್ಐಫ್ಐಡಿ ಟ್ಯಾಗ್ ಸನಿಹಕ್ಕೆ ಹಿಡಿದು ದಾಖಲಿಸಿಕೊಳ್ಳುತ್ತಾರೆ. ಇದರಿಂದ ಆಯಾ ಮನೆಯಿಂದ ಕಸ ಸಂಗ್ರಹಿಸಿರುವುದು ಖಾತರಿಯಾಗುತ್ತದೆ. ಕ್ಷಣಾರ್ಧದಲ್ಲಿ ಡಿಜಿಟಲ್ ರಿಪೋರ್ಟ್ ರೆಡಿಯಾಗುತ್ತದೆ. ಪ್ರತಿ ಮನೆಯಿಂದ ಕಸ ಸಂಗ್ರಹಿಸುವುದು ಕಡ್ಡಾಯವಾಗುತ್ತದೆ. ಸಿಬ್ಬಂದಿ ತಪ್ಪಿಸಿಕೊಳ್ಳುವ ಹಾಗಿಲ್ಲ.

ಶಿವಮೊಗ್ಗದಲ್ಲಿ 'ಬಕೆಟ್‌' ಯೋಜನೆ ಠುಸ್‌: ಕೋಟಿಗಟ್ಟಲೇ ಖರ್ಚು ಮಾಡಿ ಬಕೆಟ್‌ ವಿತರಿಸಿದರೂ ಕಸ ಸಂಗ್ರಹಣೆಯಲ್ಲಿ ಲೋಪ
ಬೇಕಾಬಿಟ್ಟಿ ಕಸ ತ್ಯಾಜ್ಯ
ಆದರೆ ಅದೇ ಟ್ಯಾಗ್ ಸರಿಯಾದ ರೀತಿಯಲ್ಲಿ ಕಾರ್ಯವನ್ನು ಮಾಡದೇ ಇರುವುದರಿಂದ ಸರಿಯಾದ ರೀತಿಯಲ್ಲಿ ಕಸ ತ್ಯಾಜ್ಯ ಸಂಗ್ರಹ ಸಹ ಆಗುತ್ತಿಲ್ಲ. ಇದರಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಬೇಕಾಬಿಟ್ಟಿ ಕಸ ತ್ಯಾಜ್ಯ ಬೀಳುತ್ತಿದೆ. ಈ ನಡುವೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಈಶ್ಯ ಉಳ್ಳಾಗಡ್ಡಿ ಅವರು ಕೇಲವು ನಿರ್ವಹಣೆ ಮಾಡತಾ ಇದ್ದು ವರದಿ ಸಹ ಬಂದಿವೆ.‌ಆದರೆ ಉಳಿದ ಟ್ಯಾಗ್ ಬಗ್ಗೆ ಪರಿಶೀಲನೆ ನಡೆಸವುದಾಗಿ ತಿಳಿಸಿದ್ದಾರೆ ‌.

ಪ್ರತಿ ಆರ್ಎಫ್ಐಡಿ ಟ್ಯಾಗ್ ವೆಚ್ಚ 54 ರೂ., ರೀಡರ್ ವೆಚ್ಚ 61000 ರೂ. ಆಗಿದ್ದು ಸಿಮ್ ಆಧಾರಿತ ರೀಡರ್ ಇದಾಗಿದ್ದು, ಇದಕ್ಕೆ ಬಿಎಸ್ಎನ್ಎಲ್ ಸಿಮ್ ಬಳಕೆ ಮಾಡಲಾಗಿದೆ. ಒಬ್ಬ ಪೌರ ಕಾರ್ವಿುಕ ನಿತ್ಯ 250-300 ಮನೆಗಳ ಆರ್ಎಫ್ಐಡಿ ಟ್ಯಾಗ್ ರೀಡಿಂಗ್ ದಾಖಲಿಸಿಕೊಳ್ಳಬಹುದು. ಮುಂಬೈ ಮೂಲದ ಎನ್ಇಸಿ ಲಿಮಿಟೆಡ್ ಈ ಯೋಜನೆಯ ಗುತ್ತಿಗೆ ಪಡೆದಿದ್ದು, ಮುಂದಿನ 5 ವರ್ಷಗಳ ಕಾಲ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಹುಬ್ಬಳ್ಳಿ ಚನ್ನಮ್ಮ ವೃತ್ತದ ಫ್ಲೈಓವರ್ ಮೇಲೆ ಬೆಂಗಳೂರು-ಕಾರವಾರಕ್ಕೆ ಹೋಗುವ ವಾಹನಗಳಿಗೆ ಎಂಟ್ರಿ ಇಲ್ಲ!
ಆಟೋ ಟಿಪ್ಪರ್ ಗೆ ಜಿಪಿಎಸ್
ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ಗೆ ಜಿಪಿಎಸ್ ಅಳವಡಿಕೆಯಾಗಲಿದೆ. ಅವಳಿ ನಗರದಲ್ಲಿ ಕಸ ಸಂಗ್ರಹಕ್ಕೆ 191 ಆಟೋ ಟಿಪ್ಪರ್ಗಳು ಬಳಕೆಯಲ್ಲಿವೆ. ಪ್ರತಿ ಆಟೋ ಟಿಪ್ಪರ್ ನಿತ್ಯ ಸಂಚರಿಸುವ ಮಾರ್ಗ ಜಿಪಿಎಸ್ನಲ್ಲಿ ದಾಖಲಾಗುತ್ತದೆ. ರಸ್ತೆ ಬದಿ, ಖಾಲಿ ಜಾಗ, ಉದ್ಯಾನಗಳಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು ಇದೇ ಯೋಜನೆಯಡಿ 174 ಕಡೆ ಕ್ಯಾಮರಾ ಅಳವಡಿಸಲಾಗುತ್ತಿದೆ. ಈಗಾಗಲೇ ಕೆಲವೆಡೆ ಅಳವಡಿಸಲಾಗಿದೆ.

ಅವಳಿ ನಗರದ ಕಸ ಸಂಗ್ರಹ, ವಿಲೇವಾರಿ ವ್ಯವಸ್ಥೆಯು ಇಂಟೆಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಮೂಲಕ ನಿಯಂತ್ರಿಸಲಾಗುತ್ತಿದೆ. ಇದನ್ನು ನ್ಯೂ ಕಾಟನ್ ಮಾರ್ಕೆಟ್ ಸಾಂಸ್ಕೃತಿಕ ಭವನದ ಆವರಣದಲ್ಲಿ ಸ್ಥಾಪಿಸಲಾಗಿದ್ದು ಐಸಿಸಿಸಿ ಕಟ್ಟಡ ನಿರ್ವಣ, ಆರ್ಎಫ್ಐಡಿ ಟ್ಯಾಗ್, ರೀಡರ್, ಜಿಪಿಎಸ್ ಹಾಗೂ 5 ವರ್ಷಗಳ ನಿರ್ವಹಣೆ ವೆಚ್ಚ ಎಲ್ಲ ಸೇರಿ 43.50 ಕೋ. ರೂ. ವೆಚ್ಚದ ಯೋಜನೆ ಇದಾಗಿದೆ.
ಪಿಐಡಿ ಸಂಖ್ಯೆ ಇಲ್ಲದ ಮನೆಗಳಿಂದ ಕಸ ಸಂಗ್ರಹಿಸುವುದನ್ನು ಕೈ ಬಿಡುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು . ವಸತಿ, ವಾಣಿಜ್ಯ, ಉದ್ಯಮ, ಎಲ್ಲ ಮಾದರಿಯ ಕಟ್ಟಡಗಳು ಸೇರಿ 2.78 ಲಕ್ಷ ಆಸ್ತಿಗಳಿವೆ. ನಾವು 3 ಲಕ್ಷದವರೆಗೆ ಅವಕಾಶ ಇಟ್ಟುಕೊಳ್ಳಲಾಗಿತ್ತು. ಆದರೆ ಈಗ ಟ್ಯಾಗ್ ಸರಿಯಾದ ಕಾರ್ಯವನ್ನು ಮಾಡದೇ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೇಖಕರ ಬಗ್ಗೆ
ಕಲ್ಮೇಶ ಮಂಡ್ಯಾಳ
ಕಲ್ಮೇಶ ಮಂಡ್ಯಾಳ, ಎಂ.ಎ.ರಾಜ್ಯ ಶಾಸ್ತ್ರ ಹಾಗೂ ಎಂ.ಎ ಪತ್ರಿಕೋದ್ಯಮ ಹಾಗೂ ವಿದ್ಯುನ್ಮಾನ ಸ್ನಾತಕೋತ್ತರ ಪದವಿ ಪಡೆದಿದ್ದು‌, ಕಳೆದ ಹಲವಾರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಬೆಂಗಳೂರು, ದೆಹಲಿ ಹಾಗೂ ಚೆನೈ ನಗರದಲ್ಲಿ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ವರದಿಗಾರ, ಹಿರಿಯ ಉಪಸಂಪಾದಕ ಹಾಗೂ ಸುದ್ದಿ ಸಂಪಾದಕನಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಮುದ್ರಣ, ವಿದ್ಯುನ್ಮಾನ ಸೇರಿದಂತೆ ಸೋಷಿಯಲ್ ಮಿಡಿಯಾಗಳಲ್ಲಿ ಸಮಾನಾಂತರ ಅನುಭವ ಹೊಂದದ್ದಾರೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ