ಆ್ಯಪ್ನಗರ

5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದರೂ ಪಾಲನೆ ಮಾಡದ ಪಾಲಿಕೆ

ಹುಬ್ಬಳ್ಳಿ : ಬೀದಿ ನಾಯಿ ಕಡಿತದಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ ಹು-ಧಾ ಮಹಾನಗರ ಪಾಲಿಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು 1ನೇ ಅಧಿಕ ಹಿರಿಯ ದಿವಾಣಿ ನ್ಯಾಯಾಲಯ ಆದೇಶ ನೀಡಿದೆ. ಆದರೆ, ನ್ಯಾಯಾಲಯ ಆದೇಶ ನೀಡಿ ಮೂರು ತಿಂಗಳು ಗತಿಸಿದರೂ ಹು-ಧಾ ಮಹಾನಗರ ಪಾಲಿಕೆ ನ್ಯಾಯಾಲಯ ಆದೇಶ ಪಾಲಿಸದೆ ನಿರ್ಲಕ್ಷಿಸಿದೆ. ಹೀಗಾಗಿ ಕುಟುಂಬಸ್ಥರು ಮತ್ತೆ ಪರಿಹಾರಕ್ಕಾಗಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

Vijaya Karnataka 27 Dec 2018, 5:00 am
ಹುಬ್ಬಳ್ಳಿ : ಬೀದಿ ನಾಯಿ ಕಡಿತದಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ ಹು-ಧಾ ಮಹಾನಗರ ಪಾಲಿಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು 1ನೇ ಅಧಿಕ ಹಿರಿಯ ದಿವಾಣಿ ನ್ಯಾಯಾಲಯ ಆದೇಶ ನೀಡಿದೆ. ಆದರೆ, ನ್ಯಾಯಾಲಯ ಆದೇಶ ನೀಡಿ ಮೂರು ತಿಂಗಳು ಗತಿಸಿದರೂ ಹು-ಧಾ ಮಹಾನಗರ ಪಾಲಿಕೆ ನ್ಯಾಯಾಲಯ ಆದೇಶ ಪಾಲಿಸದೆ ನಿರ್ಲಕ್ಷಿಸಿದೆ. ಹೀಗಾಗಿ ಕುಟುಂಬಸ್ಥರು ಮತ್ತೆ ಪರಿಹಾರಕ್ಕಾಗಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
Vijaya Karnataka Web rs 5 lakh a non custody mandate to order compensation
5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದರೂ ಪಾಲನೆ ಮಾಡದ ಪಾಲಿಕೆ


ಬಾಲಕನ ಸಾವಿಗೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಪರಿಗಣಿಸಿರುವ ನ್ಯಾಯಾಲಯವು 2018 ಸೆಪ್ಪಂಬರ್‌ನಲ್ಲಿಯೇ 1ನೇ ಅಧಿಕ ಹಿರಿಯ ದಿವಾಣಿ ನ್ಯಾಯಾಧೀಶರಾದ ಎ.ಕೆ. ನಾಗರಾಜಪ್ಪ ಮೃತನ ಕುಟುಂಬಕ್ಕೆ ಪಾಲಿಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ಮಹತ್ವ ತೀರ್ಪು ನೀಡಿ ಆದೇಶ ಹೊರಡಿಸಿದ್ದರು.

ಹು-ಧಾ ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಬೀದಿ ನಾಯಿ ಕಡಿತಕ್ಕೆ ತುತ್ತಾಗಿ ಇಲ್ಲಿಯ ಬಂಕಾಪುರ ಚೌಕ್‌ ಮದನಿ ಕಾಲೊನಿ ನಿವಾಸಿ ರಬ್ಬಾನಿ (17) ಎಂಬ ಬಾಲಕ ಬಲಿಯಾಗಿದ್ದ. 2005 ಜು.16ರಂದು ಮಧ್ಯಾಹ್ನ ಮನೆಗೆಲಸದ ನಿಮಿತ್ತ ಹೊರಗೆ ಬಂದಾಗ ಬೀದಿ ನಾಯಿಯೊಂದು ರಬ್ಬಾನಿಯನ್ನು ಅಟ್ಟಾಡಿಸಿಕೊಂಡು ಗಂಭೀರವಾಗಿ ಗಾಯಗೊಳಿಸಿತ್ತು. ಈತನನ್ನು ಕಿಮ್ಸ್‌ಗೆ ದಾಖಲಿಸಿಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಜು.19ರಂದು ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ರಬ್ಬಾನಿ ಸಾವಿಗೆ ಪಾಲಿಕೆಯ ನಿರ್ಲಕ್ಷ್ಯ ಕಾರಣ ಎಂದು ಬಾಲಕನ ತಂದೆ ಮಕಬೂಲಸಾಬ ಪ್ರಕರಣ ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಅವಶ್ಯಕತೆಗೆ ಅನುಗುಣವಾಗಿ ನಾಯಿಗಳನ್ನು ಹಿಡಿದು ಸಾಗಣೆ ಮಾಡುವ ವ್ಯಾನ್‌ಗಳು ಪ್ರತಿ ವ್ಯಾನ್‌ಗೆ ಒಬ್ಬ ಚಾಲಕ ಹಾಗೂ ನಾಯಿ ಹಿಡಿಯಲು ನುರಿತ ವ್ಯಕ್ತಿಗಳು, ನಾಯಿಗಳ ಸಂತಾನ ಹರಣಕ್ಕಾಗಿ ಅಂಬುಲೆನ್ಸ್‌ ಕ್ಲಿನಿಕ್‌ ವ್ಯವಸ್ಥೆ ಎಲ್ಲವು ಇದೆ. ಅಲ್ಲದೆ, ಬೀದಿ ನಾಯಿಗಳನ್ನು ನಿಯಂತ್ರಿಸುವ ಸಂಪೂರ್ಣ ಜವಾಬ್ದಾರಿ ಪಾಲಿಕೆಯದ್ದಾಗಿದೆ. ಆದರೆ, ಇದರಲ್ಲಿ ಪಾಲಿಕೆ ಅಧಿಕಾರಿಗಳು ಲೋಪವೆಸಗಿದ್ದಾರೆ ಎಂಬುದನ್ನು ನ್ಯಾಯಾಲಯ ಎತ್ತಿ ಹಿಡಿದು ಈ ಆದೇಶ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ