ಆ್ಯಪ್ನಗರ

ಸಂತ್ರಸ್ತರಿಗೆ ಆರ್‌ಎಸ್‌ಎಸ್‌ನಿಂದ ಸಾಮಗ್ರಿ ಪೂರೈಕೆ

ಹುಬ್ಬಳ್ಳಿ : ನಗರದ ವಿವಿಧ ಸಂಘ ಸಂಸ್ಥೆಗಳಿಂದ ಸಂಗ್ರಹಿಸಿದ ಆಹಾರ ಸಾಮಗ್ರಿ, ನೀರು, ಹಾಸಿಗೆ, ಹೊದಿಕೆ, ಔಷಧಗಳನ್ನು ನೆರೆ ಸಂತ್ರಸ್ತರಿಗೆ ರಾಷ್ಟ್ರೀಯ ಸ್ವಯಂ ಸಂಘದ ಧಾರವಾಡ ಜಿಲ್ಲಾ ಶಾಖೆ ಶನಿವಾರ ವಾಹನಗಳ ಮೂಲಕ ರವಾನಿಸಲಾಯಿತು.

Vijaya Karnataka 10 Aug 2019, 5:44 pm
ಹುಬ್ಬಳ್ಳಿ : ನಗರದ ವಿವಿಧ ಸಂಘ ಸಂಸ್ಥೆಗಳಿಂದ ಸಂಗ್ರಹಿಸಿದ ಆಹಾರ ಸಾಮಗ್ರಿ, ನೀರು, ಹಾಸಿಗೆ, ಹೊದಿಕೆ, ಔಷಧಗಳನ್ನು ನೆರೆ ಸಂತ್ರಸ್ತರಿಗೆ ರಾಷ್ಟ್ರೀಯ ಸ್ವಯಂ ಸಂಘದ ಧಾರವಾಡ ಜಿಲ್ಲಾ ಶಾಖೆ ಶನಿವಾರ ವಾಹನಗಳ ಮೂಲಕ ರವಾನಿಸಲಾಯಿತು.
Vijaya Karnataka Web rss supplies to victims
ಸಂತ್ರಸ್ತರಿಗೆ ಆರ್‌ಎಸ್‌ಎಸ್‌ನಿಂದ ಸಾಮಗ್ರಿ ಪೂರೈಕೆ


ಗುರುವಾರದಿಂದಲೇ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿದ್ದು ಕಾಳಮ್ಮ ಅಗಸಿ ಶಂಕರಮಠ, ಗೋಕುಲರಸ್ತೆ ಬ್ರಾಹ್ಮಣರ ಸಂಘ, ಲಾಯನ್ಸ್‌ ಕ್ಲಬ್‌ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಆಹಾರ ಸಾಮಗ್ರಿ, ಅಗತ್ಯ ವಸ್ತುಗಳು ಸೇರಿದಂತೆ ಉದಾರ ದೇಣಿಗೆ ನೀಡುತ್ತಿದ್ದು, ಆ ಎಲ್ಲ ವಸ್ತುಗಳನ್ನು ಗದಗ ಜಿಲ್ಲೆ ಹೊಳೆಆಲೂರು, ನರಗುಂದ, ಧಾರವಾಡ ಜಿಲ್ಲೆ ನವಲಗುಂದ ಹೀಗೆ ಹತ್ತು ಹಲವು ನೆರೆ ಹಾವಳಿ ಪ್ರದೇಶಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಸಂಘದ ಪ್ರಮುಖ ದತ್ತಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.

ಶುಕ್ರವಾರ ಸಂಘದ ಧಾರವಾಡ ಜಿಲ್ಲಾ ಶಾಖೆ ಕಾರ್ಯಾಲಯ ಕೇಶವ ಕುಂಜದ ಮೂಲಕ ಮೂರು ವಾಹನಗಳ ಸಾಮಗ್ರಿ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಶ್ರೀಧರ ನಾಡಿಗೇರ, ವಿಶ್ವನಾಥ ಪೇಟಕರ್‌, ಗೋವರ್ಧನ್‌ ಸೇರಿದಂತೆ ಅನೇಕು ಹಾಜರಿದ್ದರು.

ಸಂತ್ರಸ್ತರಿಗೆ ಪಲಾವ್‌ ವಿತರಣೆ
ಮಳೆ ಸಂತ್ರಸ್ತರಿಗೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ವತಿಯಿಂದ 2.50 ಕ್ವಿಂಟಾಲ್‌ ಪಲಾವ್‌ ತಯಾರಿಸಿ ವಿತರಿಸಲಾಯಿತು.ಇಲ್ಲಿಯ ಹೆಗ್ಗೇರಿ ಕಲ್ಯಾಣಮಂಟಪದಲ್ಲಿ ಹಾಗೂ ಮ್ಯಾದಾರ ಓಣಿಯ ಸುತ್ತಲು ವಾಸವಾಗಿರುವ ಸಂತ್ರಸ್ಥರಿಗೆ ಪಲಾವ್‌ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಮಿಟಿಯ ಡಿ.ಡಿ. ಮಾಳಗಿ, ಎಸ್‌.ಐ. ಕೋಳಕೂರ, ಜಿ.ಎಸ್‌. ನಾಯಕ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ