ಧಾರವಾಡ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆಶ್ರಯದಲ್ಲಿಜರುಗಿದ 15ನೇ ಅಂತರ ಮಹಿಳಾ ಕಾಲೇಜು ಅಥ್ಲೇಟಿಕ ಕ್ರೀಡಾಕೂಟದಲ್ಲಿನಗರದ ಹುರಕಡ್ಲಿಅಜ್ಜ ಶಿಕ್ಷಣ ಸಮಿತಿಯ ಕಲ್ಲವ್ವ ಜಿಗಳೂರ ಕಲಾ ಹಾಗೂ ಡಾ. ಸುಶೀಲಾ ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜಿನ ತಂಡವು ಒಟ್ಟು 32 ಅಂಕ ಪಡೆದು ರನ್ನರ ಅಫ್ ಪ್ರಶಸ್ತಿ ಪಡೆದಿದೆ.
ಕಾಲೇಜಿನ ಬಿಎ 2ನೇ ವರುಷದ ವಿದ್ಯಾರ್ಥಿನಿ ಜ್ಯೋತಿ ಕಟ್ಟಿಮನಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದರು. ಜ್ಯೋತಿ 800 ಮೀ.ಓಟವನ್ನು ಕೇವಲ 2.26:30ಸೆಕೆಂಡಗಳಲ್ಲಿಕ್ರಮಿಸಿ ಮೊದಲ ಸ್ಥಾನ ತನ್ನದಾಗಿಸಿಕೊಳ್ಳುವ ಜತೆಗೆ ಹಿಂದಿನ ಕ್ರೀಡಾಕೂಟದಲ್ಲಿತಾನೇ ದಾಖಲಿಸಿದ್ದ 2.26:65 ಸೆಕೆಂಡ ಅವಧಿ ಅಳಿಸಿ ಹಾಕಿ ನೂತನ ದಾಖಲೆ ಮಾಡಿದರು. 1500 ಮೀ.ಓಟದಲ್ಲಿಯೂ ಜ್ಯೋತಿ ಪ್ರಥಮ ಸ್ಥಾನ ಪಡೆದರು. ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಬಿಎ ಮೊದಲ ವರ್ಷದ ವಿದ್ಯಾರ್ಥಿನಿ ಜಯಲಕ್ಷಿತ್ರ್ಮೕ ಭಾವಿಕಟ್ಟಿ ಪ್ರಥಮ ಸ್ಥಾನ ಪಡೆದರು.
ಫಲಿತಾಂಶದ ವಿವರ : ಜ್ಯೋತಿ ಕಟ್ಟಿಮನಿ -800ಮೀ.ಓಟ ಪ್ರಥಮ(ನೂತನ ದಾಖಲೆ), 1500 ಮೀ. ಪ್ರಥಮ, ಜಯಲಕ್ಷಿತ್ರ್ಮೕ ಭಾವಿಕಟ್ಟಿ-20 ಕಿಮೀ ನಡಿಗೆ ಪ್ರಥಮ(ನೂತನ ದಾಖಲೆ), ಕಾವ್ಯಾ ಇಂಗಳೆ-ಉದ್ದ ಜಿಗಿತ-ದ್ವಿತೀಯ ಹಾಗೂ ಟ್ರಿಪಲ್ ಜಂಪ್-ನಾಲ್ಕನೇಯ ಸ್ಥಾನ, ವಿದ್ಯಾ ಹೊಂಗಲ- 400 ಮೀ.ಓಟ ನಾಲ್ಕನೇಯ ಸ್ಥಾನ, 4/ 400 ಮೀ.ರಿಲೇ ಪ್ರಥಮ (ಜ್ಯೋತಿ ಕಟ್ಟೀಮನಿ, ಜಯಲಕ್ಷಿತ್ರ್ಮೕ ಭಾವಿಕಟ್ಟಿ, ವಿದ್ಯಾ ಹೊಂಗಲ ಮತ್ತು ರುಕ್ಸಾನಾ ಗದಗವಾಲೆ), 4/100 ಮೀ.ರಿಲೇ ತೃತೀಯ (ಪ್ರೀಯಾ ಹೊಂಗಲ, ಶ್ವೇತಾ ಕಾಶಿ, ರೂಪಾ ಹಂಪಣ್ಣವರ ಮತ್ತು ಕಾವ್ಯಾ ಇಂಗಳೆ.
ನ್ಯಾಯವಾದಿ ಎಂ.ಸಿ. ಬಂಡಿ ಅಧ್ಯಕ್ಷತೆಯಲ್ಲಿಜರುಗಿದ ವಿಶೇಷ ಸಮಾರಂಭದಲ್ಲಿವಿಜೇತ ತಂಡ ಅಭಿನಂದಿಸಲಾಯಿತು. ಡಾ. ನಿರ್ಮಲಾ ಹಿರೇಗೌಡರ, ದೈಹಿಕ ಶಿಕ್ಷಣ ಅಧ್ಯಾಪಕಿ ಶಕುಂತಲಾ ಬಿರಾದಾರ, ಡಾ. ಗಿರಿಜಾ ಯಾಬಣ್ಣವರ, ಸುಶ್ಮಿತಾ ಚಿಕ್ಕಮಠ, ಕಾವೇರಿ ನಾಗಣ್ಣವರ ಇದ್ದರು.
ಕಾಲೇಜಿನ ಬಿಎ 2ನೇ ವರುಷದ ವಿದ್ಯಾರ್ಥಿನಿ ಜ್ಯೋತಿ ಕಟ್ಟಿಮನಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದರು. ಜ್ಯೋತಿ 800 ಮೀ.ಓಟವನ್ನು ಕೇವಲ 2.26:30ಸೆಕೆಂಡಗಳಲ್ಲಿಕ್ರಮಿಸಿ ಮೊದಲ ಸ್ಥಾನ ತನ್ನದಾಗಿಸಿಕೊಳ್ಳುವ ಜತೆಗೆ ಹಿಂದಿನ ಕ್ರೀಡಾಕೂಟದಲ್ಲಿತಾನೇ ದಾಖಲಿಸಿದ್ದ 2.26:65 ಸೆಕೆಂಡ ಅವಧಿ ಅಳಿಸಿ ಹಾಕಿ ನೂತನ ದಾಖಲೆ ಮಾಡಿದರು. 1500 ಮೀ.ಓಟದಲ್ಲಿಯೂ ಜ್ಯೋತಿ ಪ್ರಥಮ ಸ್ಥಾನ ಪಡೆದರು. ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಬಿಎ ಮೊದಲ ವರ್ಷದ ವಿದ್ಯಾರ್ಥಿನಿ ಜಯಲಕ್ಷಿತ್ರ್ಮೕ ಭಾವಿಕಟ್ಟಿ ಪ್ರಥಮ ಸ್ಥಾನ ಪಡೆದರು.
ಫಲಿತಾಂಶದ ವಿವರ : ಜ್ಯೋತಿ ಕಟ್ಟಿಮನಿ -800ಮೀ.ಓಟ ಪ್ರಥಮ(ನೂತನ ದಾಖಲೆ), 1500 ಮೀ. ಪ್ರಥಮ, ಜಯಲಕ್ಷಿತ್ರ್ಮೕ ಭಾವಿಕಟ್ಟಿ-20 ಕಿಮೀ ನಡಿಗೆ ಪ್ರಥಮ(ನೂತನ ದಾಖಲೆ), ಕಾವ್ಯಾ ಇಂಗಳೆ-ಉದ್ದ ಜಿಗಿತ-ದ್ವಿತೀಯ ಹಾಗೂ ಟ್ರಿಪಲ್ ಜಂಪ್-ನಾಲ್ಕನೇಯ ಸ್ಥಾನ, ವಿದ್ಯಾ ಹೊಂಗಲ- 400 ಮೀ.ಓಟ ನಾಲ್ಕನೇಯ ಸ್ಥಾನ, 4/ 400 ಮೀ.ರಿಲೇ ಪ್ರಥಮ (ಜ್ಯೋತಿ ಕಟ್ಟೀಮನಿ, ಜಯಲಕ್ಷಿತ್ರ್ಮೕ ಭಾವಿಕಟ್ಟಿ, ವಿದ್ಯಾ ಹೊಂಗಲ ಮತ್ತು ರುಕ್ಸಾನಾ ಗದಗವಾಲೆ), 4/100 ಮೀ.ರಿಲೇ ತೃತೀಯ (ಪ್ರೀಯಾ ಹೊಂಗಲ, ಶ್ವೇತಾ ಕಾಶಿ, ರೂಪಾ ಹಂಪಣ್ಣವರ ಮತ್ತು ಕಾವ್ಯಾ ಇಂಗಳೆ.
ನ್ಯಾಯವಾದಿ ಎಂ.ಸಿ. ಬಂಡಿ ಅಧ್ಯಕ್ಷತೆಯಲ್ಲಿಜರುಗಿದ ವಿಶೇಷ ಸಮಾರಂಭದಲ್ಲಿವಿಜೇತ ತಂಡ ಅಭಿನಂದಿಸಲಾಯಿತು. ಡಾ. ನಿರ್ಮಲಾ ಹಿರೇಗೌಡರ, ದೈಹಿಕ ಶಿಕ್ಷಣ ಅಧ್ಯಾಪಕಿ ಶಕುಂತಲಾ ಬಿರಾದಾರ, ಡಾ. ಗಿರಿಜಾ ಯಾಬಣ್ಣವರ, ಸುಶ್ಮಿತಾ ಚಿಕ್ಕಮಠ, ಕಾವೇರಿ ನಾಗಣ್ಣವರ ಇದ್ದರು.