Please enable javascript.ಯುಗಾದಿ ಸಂಭ್ರಮೋತ್ಸವ ನಾಳೆ - Sambhramotsava Festival tomorrow - Vijay Karnataka

ಯುಗಾದಿ ಸಂಭ್ರಮೋತ್ಸವ ನಾಳೆ

ವಿಕ ಸುದ್ದಿಲೋಕ 20 Mar 2015, 4:04 am
Subscribe

ನವಲಗುಂದ :ತಾಲೂಕು ಯುಗಾದಿ ಉತ್ಸವ ಸಮಿತಿಯಿಂದ ಮಾ.21 ರಂದು ಹಿಂದೂ ಜಾಗತಿ ಶೋಭಾಯಾತ್ರೆ ಹಾಗೂ ಯುಗಾದಿ ಸಂಭ್ರಮೋತ್ಸವ ಜರುಗಲಿದೆ.

sambhramotsava festival tomorrow
ಯುಗಾದಿ ಸಂಭ್ರಮೋತ್ಸವ ನಾಳೆ
ನವಲಗುಂದ :ತಾಲೂಕು ಯುಗಾದಿ ಉತ್ಸವ ಸಮಿತಿಯಿಂದ ಮಾ.21 ರಂದು ಹಿಂದೂ ಜಾಗತಿ ಶೋಭಾಯಾತ್ರೆ ಹಾಗೂ ಯುಗಾದಿ ಸಂಭ್ರಮೋತ್ಸವ ಜರುಗಲಿದೆ.

ಅಂದು ಮಧ್ಯಾಹ್ನ 1ಕ್ಕೆ ಸ್ಥಳೀಯ ಗಣಪತಿ ದೇವಸ್ಥಾನದಿಂದ ಶೋಭಾಯಾತ್ರೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ 5ಗಂಟೆಗೆ ಗಾಂಧಿ ಮಾರ್ಕೇಟ್‌ನಲ್ಲಿನ ಪ್ರಮುಖ ವೇದಿಕೆಗೆ ಆಗಮಿಸಲಿದೆ.

ಸಂಜೆ 5-30ಕ್ಕೆ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ವಹಿಸುವರು. ಪಂಚಗ್ರಹ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಶ್ರೀ ಬಸವಲಿಂಗಸ್ವಾಮೀಜಿ, ನರಗುಂದ ಗುಡ್ಡದ ಹಿರೇಮಠದ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಹಾಗೂ ನಾಗಲಿಂಗಮಠದ ವೀರಯ್ಯಸ್ವಾಮೀಜಿ ಪಾಲ್ಗೊಳ್ಳಲಿದ್ದು, ಜಾನಪದ ತಜ್ಞ ಶಂಭು ಬಳಿಗಾರ ಉಪನ್ಯಾಸ ನೀಡುವರು.

ಶ್ರೀ ಗುರು ಪುಟ್ಟರಾಜ ಗವಾಯಿಗಳ ಕಲಾ ತಂಡದ ಜಗದೀಶ ಶಿರಗುಪ್ಪಿ, ಈರಣ್ಣ ಸಿದ್ದಣ್ಣವರ, ಸವಿತಾ ಸಣ್ಣಮನಿ ಹಾಗೂ ಸಂಧ್ಯಾ ಬಲಾರಿ ಸಂಗಡಿಗರಿಂದ ಭಕ್ತಿ ಗಾಯನ ಸುಧೆ ಜರುಗಲಿದೆ. ಸ್ಥಳೀಯ ಅಲಂಕಾರ ಸಾಂಸ್ಕೃತಿಕ ವೇದಿಕೆ ಮತ್ತು ಹವ್ಯಾಸಿ ಕಲಾವಿದರ ಬಳಗದಿಂದ ಶ್ರೀಕಷ್ಣ ಸಂಧಾನ ಹಾಸ್ಯ ಭರಿತ ಪೌರಾಣಿಕ ನಾಟಕ ಜರುಗುವುದು. ನಂತರ ಪಂಚಾಂಗ ಪಠಣ ಹಾಗೂ ಬೇವು ಬೆಲ್ಲ ವಿತರಣಾ ಕಾರ್ಯಕ್ರಮ ಜರುಗಲಿದೆ ಎಂದು ಉತ್ಸವ ಸಮಿತಿ ಪ್ರಕಟನೆ ತಿಳಿಸಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ