ಆ್ಯಪ್ನಗರ

ಪದವೀಧರ ಶಿಕ್ಷ ಕರ ಸಂಘದ ನಿರ್ಣಯಕ್ಕೆ ಸಂಕನೂರ ಬೆಂಬಲ

ಧಾರವಾಡ : ರಾಜ್ಯದಲ್ಲಿ 1-7ನೇ ತರಗತಿಗೆ ನೇಮಕಗೊಂಡು ಪದವಿ ಪಡೆದು, 14 ವರ್ಷದಿಂದ 6 ರಿಂದ 8ನೇ ತರಗತಿಗೆ ಬೋಧಿಸುತ್ತಿರುವ ಶಿಕ್ಷ ಕರನ್ನು ಈಗ 1-5ನೇ ವೃಂದಕ್ಕೆ ಹಿಂಬಡ್ತಿ ನೀಡಿ ಹೊರಡಿಸಿದ ಆದೇಶ ವಿರೋಧಿಸಿ ಪದವೀಧರ ಶಿಕ್ಷ ಕರ ಸಂಘ ಜು.1ರಿಂದ 6 ರಿಂದ 8ನೇ ತರಗತಿ ಬೋಧನಾ ಕಾರ್ಯ ಬಹಿಷ್ಕರಿಸುವುದಾಗಿ ತೆಗೆದುಕೊಂಡ ನಿರ್ಣಯಕ್ಕೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಬೆಂಬಲ ವ್ಯಕ್ತಪಡಿಸಿದ್ದಾರೆ.

Vijaya Karnataka 14 Jun 2019, 5:00 am
ಧಾರವಾಡ : ರಾಜ್ಯದಲ್ಲಿ 1-7ನೇ ತರಗತಿಗೆ ನೇಮಕಗೊಂಡು ಪದವಿ ಪಡೆದು, 14 ವರ್ಷದಿಂದ 6 ರಿಂದ 8ನೇ ತರಗತಿಗೆ ಬೋಧಿಸುತ್ತಿರುವ ಶಿಕ್ಷ ಕರನ್ನು ಈಗ 1-5ನೇ ವೃಂದಕ್ಕೆ ಹಿಂಬಡ್ತಿ ನೀಡಿ ಹೊರಡಿಸಿದ ಆದೇಶ ವಿರೋಧಿಸಿ ಪದವೀಧರ ಶಿಕ್ಷ ಕರ ಸಂಘ ಜು.1ರಿಂದ 6 ರಿಂದ 8ನೇ ತರಗತಿ ಬೋಧನಾ ಕಾರ್ಯ ಬಹಿಷ್ಕರಿಸುವುದಾಗಿ ತೆಗೆದುಕೊಂಡ ನಿರ್ಣಯಕ್ಕೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಬೆಂಬಲ ವ್ಯಕ್ತಪಡಿಸಿದ್ದಾರೆ.
Vijaya Karnataka Web sankaruru support for the associations decision to graduate education
ಪದವೀಧರ ಶಿಕ್ಷ ಕರ ಸಂಘದ ನಿರ್ಣಯಕ್ಕೆ ಸಂಕನೂರ ಬೆಂಬಲ


ಸರಕಾರ ಆದೇಶವನ್ನು ಹಿಂಪಡೆದು ರಾಜ್ಯದಲ್ಲಿ ಈ ಹಿಂದೆ ಪ್ರಾಥಮಿಕ ಶಾಲೆ ಶಿಕ್ಷ ಕರಾಗಿ ನೇಮಕಗೊಂಡು ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷ ಕರನ್ನು 6-8ನೇ ವೃಂದಕ್ಕೆ ಸೇರಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಂಕನೂರ ಪತ್ರ ಬರೆದಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ 2017, ಆ.7ರಂದು ಶಿಕ್ಷ ಕರ ನೇಮಕಕ್ಕೆ ತಂದಿರುವ ಹೊಸ ವೃಂದ ಮತ್ತು ನೇಮಕ ನಿಯಮಗಳಲ್ಲಿ ಮುಂಬಡ್ತಿ ನೀಡುವಾಗ ಪರೀಕ್ಷೆ ತೆಗೆದುಕೊಳ್ಳಬೇಕು ಎಂದಿದೆ. ನಿಯಮಗಳಲ್ಲಿ ಇಂಥ ಲೋಪ ಇರುವುದರಿಂದ ಅವುಗಳಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದ್ದಾರೆ.

ವೃಂದ ವರ್ಗೀಕರಣದ ಆದೇಶದಿಂದ ರಾಜ್ಯದಲ್ಲಿ 82 ಸಾವಿರ ಪದವೀಧರ ಶಿಕ್ಷ ಕರಿಗೆ ಅನ್ಯಾಯವಾಗಲಿದ್ದು, ಇದೊಂದು ಗಂಭೀರ ವಿಷಯವಾಗಿರುವುದರಿಂದ ಸಂಬಂಧಪಟ್ಟ ಕಡತವನ್ನು ಕೂಡಲೇ ತರಿಸಿಕೊಂಡು, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷ ಣ ಇಲಾಖೆ ಅವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಎಂಎಲ್‌ಸಿ ಸಂಕನೂರ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ