ಆ್ಯಪ್ನಗರ

ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ ಇಂದು

ಧಾರವಾಡ: ನಗರದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನ, ಧಾರವಾಡ ಉತ್ತರಾಧಿಮಠ ದತ್ತಿ ಅಂಗವಾಗಿ ಜ.12ರಂದು ಸಂಜೆ 6ಕ್ಕೆ ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2020 ಪ್ರದಾನ ಸಮಾರಂಭ ನಡೆಯಲಿದೆ.

Vijaya Karnataka 12 Jan 2020, 5:00 am
ಧಾರವಾಡ: ನಗರದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನ, ಧಾರವಾಡ ಉತ್ತರಾಧಿಮಠ ದತ್ತಿ ಅಂಗವಾಗಿ ಜ.12ರಂದು ಸಂಜೆ 6ಕ್ಕೆ ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2020 ಪ್ರದಾನ ಸಮಾರಂಭ ನಡೆಯಲಿದೆ.
Vijaya Karnataka Web sathya pramodas haridasa sahithya award presented today
ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ ಇಂದು


ಹುಬ್ಬಳ್ಳಿಯ ದಾಸಸಾಹಿತ್ಯ ವಿದ್ವಾಂಸ ಪಂ. ವಿದ್ಯಾರಶ್ಮಿ ಸಮೀರಆಚಾರ್ಯ ಕಂಠಪಲ್ಲಿಪ್ರಶಸ್ತಿ ಪ್ರದಾನ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡುವರು. ಪುರಂದರ ಮಂಟಪ ಪುರಂದರೋತ್ಸವ ಸಮಿತಿ ಕೋಶಾಧ್ಯಕ್ಷ ಸಿ. ನಾಗರಾಜ ಅತಿಥಿಯಾಗಿ ಆಗಮಿಸುವರು. ರಾಘವೇಂದ್ರ ವಿಜಯ ದಾಸ ಸಾಹಿತ್ಯ ರೂಪಕವನ್ನು ಎಸ್‌ಡಿಎಂ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಕೃತಿಕಾ ಸತ್ಯಬೋಧ ಗುತ್ತಲ ಉದ್ಘಾಟಿಸುವರು. ಸಾಹಿತಿ ಪದ್ಮಜಾ ಜ. ಉಮರ್ಜಿ ಹಾಗೂ ಜೆಎಸ್‌ಎಸ್‌ ಶಾಲೆ ಸಂಗೀತ ಶಿಕ್ಷಕ ಪದ್ಮಜಾ ಮಹಾಜನ ಅತಿಥಿಗಳಾಗಿ ಆಗಮಿಸುಧಿವರು. ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಬಿ.ಗುತ್ತಲ ಉಪಸ್ಥಿತರಿರುವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸುಧಿವರು.

ಇದಕ್ಕೂ ಮೊದಲು ಕಾರ್ಯಕ್ರಮದ ಪೂರ್ವಭಾವಿಯಾಗಿ ಮಧ್ಯಾಹ್ನ 3ರಿಂದ 5.30ರವರೆಗೆ ಹರಿದಾಸರು ಕಂಡ ಮಂತ್ರಾಲಯ ಗುರುಗಳ ಹಾಡುಗಳ ಸ್ಪರ್ಧೆ, ಭಜನಾ/ಮಹಿಳಾ ಮಂಡಳಿಗಳಿಗೆ ಜರುಗಲಿದೆ. ಪದ್ಮಜಾ ಉಮರ್ಜಿ ನೇತೃತ್ವದ ತಂಡದಿಂದ ರಾಘವೇಂದ್ರ ವಿಜಯ ರೂಪಕ ಪ್ರಸ್ತುತಪಡಿಸುವರು. ಆಸಕ್ತ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್‌.ಉಡಿಕೇರಿ ಹಾಗೂ ದತ್ತಿ ಕಾರ‍್ಯಕ್ರಮದ ಸಂಯೋಜಕ ಸತೀಶ ತುರಮರಿ ಜಂಟಿಯಾಗಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ