ಆ್ಯಪ್ನಗರ

ಜನಪದ ಕಲೆ ಉಳಿಸಿ ಬೆಳೆಸಿ

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾಭವನದಲ್ಲಿದುಮ್ಮವಾಡದ ಶ್ರೀ ಬಸವೇಶ್ವರ ಜಾನಪದ ಮಹಿಳಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿಹಮ್ಮಿಕೊಂಡ ಜಾನಪದ ಸಂಭ್ರಮ ಕಾರ್ಯಕ್ರಮ ಜರುಗಿತು.

Vijaya Karnataka 31 Oct 2019, 5:00 am
ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾಭವನದಲ್ಲಿದುಮ್ಮವಾಡದ ಶ್ರೀ ಬಸವೇಶ್ವರ ಜಾನಪದ ಮಹಿಳಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿಹಮ್ಮಿಕೊಂಡ ಜಾನಪದ ಸಂಭ್ರಮ ಕಾರ್ಯಕ್ರಮ ಜರುಗಿತು.
Vijaya Karnataka Web 30MAILAR09_21
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾಭವನದಲ್ಲಿನಡೆದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಡಾ.ಶ್ರೀಶೈಲ ಹುದ್ದಾರ ಉದ್ಘಾಟಿಸಿದರು.


ಉದ್ಘಾಟಿಸಿ ಮಾತನಾಡಿದ ಡಾ.ಶ್ರೀಶೈಲ ಹುದ್ದಾರ, ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿಜಾನಪದ ಕಲೆಯು ಮರೆಯಮಾಚುತ್ತಿದ್ದು ಮಹಿಳೆಯರು ಪಣತೊಟ್ಟು ಜಾನಪದ ಸಂಸ್ಥೆ ಕಟ್ಟಿಕೊಂಡು ಸಂಪ್ರದಾಯ ಪದಗಳು, ಗೀಗೀ ಪದಗಳು ಡೊಳ್ಳಿನ ಪದಗಳನ್ನು ಉಳಿಸಿ ಬೆಳೆಸಲು ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಲಾವಿದ ಪ್ರಭು ಹಂಚಿನಾಳ ಮಾತನಾಡಿ, ವಿದ್ಯಾವರ್ಧಕ ಸಂಘದಲ್ಲಿನಿರಂತರವಾಗಿ ಜಾನಪದ ಕಲೆಗಳ ಕಾರ್ಯಕ್ರಮಗಳಿಂದ ಕಲೆಗೆ ಹೆಚ್ಚಿನ ಬೆಲೆ ಸಿಗುತ್ತಿದ್ದು, ಕಲಾವಿದರು ತಮ್ಮ ನೋವು ನಲಿವುಗಳನ್ನು ಮರೆತು ಜಾನಪದ ಹಾಡಿನ ಮೂಲಕ ಸಮಾಜವನ್ನು ಖುಷಿಯಾಗಿ ಇಡುತ್ತಿದ್ದಾರೆ ಎಂದರು.

ಶಿವಾನಂದ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುಮ್ಮವ್ವ ಹುಬ್ಬಳ್ಳಿ, ವಿದ್ಯಾ ಸತ್ಯಪ್ಪನವರ ಸೇರಿದಂತೆ ಇತರರು ಇದ್ದರು. ಯಕ್ಕೇರಪ್ಪ ನಡುವಿನಮನಿ ನಿರೂಪಿಸಿ,ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ