ಆ್ಯಪ್ನಗರ

ಸಂಸ್ಕೃತ ಭಾಷೆ ಉಳಿಸಿ ಬೆಳೆಸಿ

ಧಾರವಾಡ: ಸಂಸ್ಕೃತ ಮತ್ತು ಸಂಸ್ಕತಿಯಿಂದ ಭಾರತ ಜಗತ್ತಿನಲ್ಲಿಗುರುತಿಸಿಕೊಂಡಿದ್ದು, ಸಂಸ್ಕೃತ ಭಾಷೆ ಉಳಿಸಿ ಬೆಳೆಸಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

Vijaya Karnataka 26 Oct 2019, 5:00 am
ಧಾರವಾಡ: ಸಂಸ್ಕೃತ ಮತ್ತು ಸಂಸ್ಕತಿಯಿಂದ ಭಾರತ ಜಗತ್ತಿನಲ್ಲಿಗುರುತಿಸಿಕೊಂಡಿದ್ದು, ಸಂಸ್ಕೃತ ಭಾಷೆ ಉಳಿಸಿ ಬೆಳೆಸಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
Vijaya Karnataka Web save and grow sanskrit language
ಸಂಸ್ಕೃತ ಭಾಷೆ ಉಳಿಸಿ ಬೆಳೆಸಿ


ನಗರದ ಆಲೂರ ವೆಂಕಟರಾವ್‌ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಸಹಯೋಗದಲ್ಲಿಆಯೋಜಿಸಿದ್ದ ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ವಲಯಮಟ್ಟದ ಸಂಸ್ಕೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದಿ ಕಾಲದಿಂದಲೂ ಸಂಸ್ಕೃತಕ್ಕೆ ತನ್ನದೇ ಆದ ಮಹತ್ವವಿದೆ. ಸಂಸ್ಕೃತ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಈ ಹಿನ್ನೆಲೆ ನಮ್ಮ ದೇಶದ ಪರಂಪರೆ ಆದ ಸಂಸ್ಕೃತ ಭಾಷೆ ಬಗ್ಗೆ ಹೆಚ್ಚಿನ ಖಾಳಜಿ ವಹಿಸಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸಂಸ್ಕೃತ ಓದಿದರೆ ಮಾತ್ರ ವಿದ್ವತ ಉಳಿಯಲು ಸಾಧ್ಯ ಎಂದರು.

ಡಾ.ಪ್ರಕಾಶ ಆರ್‌. ಪಾಗೋಜಿ ಮಾತನಾಡಿ, ರಾಜ್ಯದಲ್ಲಿ280 ಸಂಸ್ಕೃತ ಪಾಠಶಾಲೆಗಳಿವೆ. ಈ ಎಲ್ಲಶಾಲೆಗಳಿಗೆ ವಿವಿಧ ಕಂಪನಿಗಳ ಸಿಎಸ್‌ಆರ್‌ ಫಂಡನಲ್ಲಿಕಂಪ್ಯೂಟರ್‌ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಸಂಸ್ಕೃತ ಭಾಷೆ ಎಲ್ಲವಿಷಯಗಳ ಬಗ್ಗೆ ಜ್ಞಾನ ನೀಡುತ್ತದೆ. ಸಂಸ್ಕೃತ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕೃತ ವಿವಿಯ ಪ್ರಭಾರಿ ಕುಲಪತಿ ವಿ.ಗಿರೀಶ ಚಂದ್ರ ಮಾತನಾಡಿ, ಸಂಸ್ಕೃತ ಉಳಿಯಲು ಮಠಗಳೇ ಕಾರಣ. ಸಂಸ್ಕೃತ ಶಿಕ್ಷಕರು ತ್ಯಾಗ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಇದೇ ವೇಳೆ ಡಾ. ಪ್ರಕಾಶ ಆರ್‌. ಪಾಗೋಜಿ ಲೋಕಶಾಸ್ತ್ರ ಕಥನ ಎಂಬ ಪಿಎಚ್‌ಡಿ ಮಹಾ ಪ್ರಬಂಧ ಗ್ರಂಥ ಹಾಗೂ ಡಾ.ವಿ.ಡಿ.ಮಾದವಶಾಸ್ತ್ರಿ ಜೋಶಿ ಅನುವಾದಿಸಿದ ಡಾ. ಚಂದ್ರಶೇಖರ ಕಂಬಾರ ಮಹಾಮಾಯಿ ನಾಟಕದ ಸಂಸ್ಕತ ಅನುವಾದ ಕೃತಿ ಮಹಾಮಯಿ ಕೃತಿ ಬಿಡುಗಡೆ ಮಾಡಲಾಯಿತು.

ಸಿ.ವಿ.ಜಿ ಚಂದ್ರು , ಬಿ.ಬಿ.ಆರೇರ ಇದ್ದರು. ಮೂರಸಾವಿರ ಮಠದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜನಾರ್ಧನ ಜೋಶಿ ಸಂಗಡಿಗರು ವೇದಘೋಷ ಹಾಡಿದರು. ಜಿ.ಎಸ್‌.ಗಾಂವ್ಕರ್‌ ಪ್ರಾಸ್ತಾವಿಕ ಮಾತನಾಡಿದರು. ಡಿ.ಎಸ್‌.ಕೆಂಗಾನವರ ಸ್ವಾಗತಿಸಿದರು.ಆರ್‌.ಟಿ.ಭಟ್‌ ನಿರೂಪಿಸಿದರು.ಎಂ.ಎಸ್‌.ಅಂಗಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ