ಆ್ಯಪ್ನಗರ

ಶಾಲಾ ಸಂಸತ್‌ ಪದಗ್ರಹಣ ಸಮಾರಂಭ

ಹುಬ್ಬಳ್ಳಿ : ಕೆಎಲ್‌ಇ ಸಂಸ್ಥೆಯ ಎಂ.ಆರ್‌.ಸಾಖರೆ ಇಂಗ್ಲಿಷ್‌ ಮೀಡಿಯಂ (ಸಿಬಿಎಸ್‌ಇ) ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಶಾಲಾ ಸಂಸತ್‌ ಮಂತ್ರಿಮಂಡಲದ ಉದ್ಘಾಟನೆ ಸಮಾರಂಭ ನಡೆಯಿತು.

Vijaya Karnataka 7 Aug 2019, 5:00 am
ಹುಬ್ಬಳ್ಳಿ : ಕೆಎಲ್‌ಇ ಸಂಸ್ಥೆಯ ಎಂ.ಆರ್‌.ಸಾಖರೆ ಇಂಗ್ಲಿಷ್‌ ಮೀಡಿಯಂ (ಸಿಬಿಎಸ್‌ಇ) ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಶಾಲಾ ಸಂಸತ್‌ ಮಂತ್ರಿಮಂಡಲದ ಉದ್ಘಾಟನೆ ಸಮಾರಂಭ ನಡೆಯಿತು.
Vijaya Karnataka Web school parliament speech ceremony
ಶಾಲಾ ಸಂಸತ್‌ ಪದಗ್ರಹಣ ಸಮಾರಂಭ


ಮುಖ್ಯ ಅತಿಥಿಗಳಾಗಿದ್ದ ಅಶೋಕನಗರದ ಪಿಎಸ್‌ಐ ಜಗದೀಶ ಹಂಚಿನಾಳ ವಿದ್ಯಾರ್ಥಿಗಳಿಗೆ ಪದವಿ ಪದಕ ನೀಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ನಿಶ್ಚಿತ ಗುರಿ, ಸತತ ಅಭ್ಯಾಸ, ಏಕಾಗ್ರತೆ ಅಗತ್ಯ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಎಚ್ಚರಿಕೆ ನೀಡಿದರು.

ಪ್ರಾಂಶುಪಾಲರಾದ ಶರ್ಮಿಳಾ ಹೇಮಂತ್‌ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ನಾಯಕರು ಬರೀ ನಾಯಕರಾಗದೇ ಜವಾಬ್ದಾರಿಯುತ ಆಡಳಿತಗಾರರಾಗಬೇಕು. ಪ್ರತಿಯೊಬ್ಬರೂ ಮಾದರಿಯ ವಿದ್ಯಾರ್ಥಿಗಳಾಗಿ ಕೊಟ್ಟ ಅವಕಾಶವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದರು.

ಮುಖ್ಯ ನಾಯಕನಾಗಿ ದರ್ಶನ್‌ ಲಕ್ಕಣ್ಣನವರ್‌ ಹಾಗೂ ಮುಖ್ಯ ನಾಯಕಿಯಾಗಿ ವರ್ಣಿಕಾ ಪಾಟೀಲ್‌ ಪದಕ ಸ್ವೀಕರಿಸಿದರು. ನಂತರ ಮಂತ್ರಿಮಂಡಲದ ವಿವಿಧ ಖಾತೆಗಳನ್ನು ಹಂಚಲಾಯಿತು. ರಮೇಶ್‌ ಅತಿಥಿಗಳನ್ನು ಸ್ವಾಗತಿಸಿದರು. 10ನೇ ತರಗತಿ ವಿದ್ಯಾರ್ಥಿ ಆಲನ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ