ಆ್ಯಪ್ನಗರ

ವಿಜ್ಞಾನಿಗಳಿಗೆ ಕಂಪ್ಯೂಟರ್‌ ಜ್ಞಾನ ಅಗತ್ಯ: ಪ್ರೊ. ಬಲರಾಮ್‌

ಧಾರವಾಡ : ವಿಜ್ಞಾನಿಗಳಿಗೆ ಜೀವವಿಜ್ಞಾನ ಜತೆಗೆ ಭೌತವಿಜ್ಞಾನ, ರಾಸಾಯನಿಕ, ಗಣಿತ ಹಾಗೂ ಕಂಪ್ಯೂಟರ್‌ ಜ್ಞಾನದ ಅಗತ್ಯವಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ. ಪಿ.ಬಲರಾಮ್‌ ಹೇಳಿದರು.

Vijaya Karnataka 4 Jul 2019, 5:00 am
ಧಾರವಾಡ : ವಿಜ್ಞಾನಿಗಳಿಗೆ ಜೀವವಿಜ್ಞಾನ ಜತೆಗೆ ಭೌತವಿಜ್ಞಾನ, ರಾಸಾಯನಿಕ, ಗಣಿತ ಹಾಗೂ ಕಂಪ್ಯೂಟರ್‌ ಜ್ಞಾನದ ಅಗತ್ಯವಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ. ಪಿ.ಬಲರಾಮ್‌ ಹೇಳಿದರು.
Vijaya Karnataka Web DRW-03RANGA10


ನಗರದ ಕರ್ನಾಟಕ ವಿಶ್ವವಿದ್ಯಾಲಯದ ಉನ್ನತ ಶಿಕ್ಷ ಣ ಅಕಾಡೆಮಿ ವತಿಯಿಂದ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಜೀವಿವಿಜ್ಞಾನದಲ್ಲಿ ಹೊಸ ಆಯಾಮಗಳು ಎಂಬ ವಿಷಯ ಕುರಿತ ಮೂರುದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿ ಮೇಲೆ ಜೀವಿಗಳು ಹುಟ್ಟಿದ ದಿನದಿಂದ ಜೀವ ವಿಜ್ಞಾನ ಇದೆ. ಅಲ್ಲದೇ ಸಾಕಷ್ಟು ವಿಜ್ಞಾನಿಗಳು ಈಗಾಗಲೇ ಜೀವ ವಿಕಾಸದ ಕುರಿತು ವಾದಗಳನ್ನು ಮಂಡಿಸಿದ್ದಾರೆ. ಜೀವಶಾಸ್ತ್ರ ವಿಷಯದಲ್ಲಾದ ಬೆಳವಣಿಗೆಯಿಂದ ಕ್ರೋಢೀಕೃತವಾದ ಸತ್ಯಾಂಶವನ್ನು ವಿಶ್ಲೇಷಣೆ ಮಾಡಲು ಕಂಪ್ಯೂಟರ್‌ ಜ್ಞಾನ ಅತ್ಯಂತ ಅವಶ್ಯಕವಾಗಿದೆ ಎಂಬುದನ್ನು ಪ್ರೊಜೆಕ್ಟರ್‌ ಮೂಲಕ ವಿವರಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪ್ರಮೋದ ಗಾಯಿ ಮಾತನಾಡಿ, ಕಂಪ್ಯೂಟೇಶನಲ್‌ ಬಯಾಲಜಿಯ ಜ್ಞಾನ ಜೀವಶಾಸ್ತ್ರದ ಅಧ್ಯಾಪಕರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯವಾಗಿದೆ. ಒಂದು ಡಿಎನ್‌ಎ ಸುಮಾರು 3 ಶತಕೋಟಿ ಮಾಹಿತಿಯನ್ನು ಹೊಂದಿರುತ್ತದೆ. ಹೀಗಾಗಿ ಇದನ್ನು ವಿಶ್ಲೇಷಿಸುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಕಂಪ್ಯೂಟರ್‌ನ ದತ್ತಾಂಶ ನೆರವಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷ ತೆ ವಹಿಸಿದ್ದ ಅಕಾಡೆಮಿಯ ನಿರ್ದೇಶಕ ಪ್ರೊ. ಎಸ್‌.ಎಂ.ಶಿವಪ್ರಸಾದ್‌ ಮಾತನಾಡಿ, ನಾಗರಿಕತೆಯ ಬೆಳವಣಿಗೆಯು ಯಾವಾಗಲೂ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಮೊದಲು ತಂತ್ರಜ್ಞಾನವು ನಿಧಾನಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿತ್ತು. ಆದರೆ ಈಗ ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದು ಜೀವಸಾಸ್ತ್ರ ವಿಷಯಕ್ಕೂ ಸಹ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಧ್ಯಾಪಕರು ತಮ್ಮನ್ನು ಹಾಗೂ ತಮ್ಮ ವಿಧ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಅಕಾಡೆಮಿಯ ಡೀನ್‌ ಡಾ. ಎಚ್‌.ಬಿ. ನೀಲಗುಂದ, ಡಾ. ಈಶ್ವರ.ಬಿ. ಸಾತಿಹಾಳ, ಡಾ. ಎ.ಆರ್‌. ಜಗತಾಪ, ಡಾ. ಎಂ.ಎನ್‌. ಮೂಲಿಮನಿ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ