ಆ್ಯಪ್ನಗರ

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಧಾರವಾಡ : ಹು-ಧಾ ಮಹಾನಗರ ಸೇರಿದಂತೆ ಜಿಲ್ಲೆಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಶುಭಾರಂಭಗೊಂಡಿದ್ದು, ಪರೀಕ್ಷೆ ಮೊದಲ ದಿನ ಶುಕ್ರವಾರ ಜಿಲ್ಲೆಯಲ್ಲಿ ಯಾವುದೇ ರೀತಿಯ ಡಿಬಾರ್‌ ಹಾಗೂ ಸಾಮೂಹಿಕ ನಕಲು ನಡೆದಿರುವ ಕುರಿತು ವರದಿಯಾಗಿಲ್ಲ.

Vijaya Karnataka 2 Mar 2019, 5:00 am
ಧಾರವಾಡ : ಹು-ಧಾ ಮಹಾನಗರ ಸೇರಿದಂತೆ ಜಿಲ್ಲೆಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಶುಭಾರಂಭಗೊಂಡಿದ್ದು, ಪರೀಕ್ಷೆ ಮೊದಲ ದಿನ ಶುಕ್ರವಾರ ಜಿಲ್ಲೆಯಲ್ಲಿ ಯಾವುದೇ ರೀತಿಯ ಡಿಬಾರ್‌ ಹಾಗೂ ಸಾಮೂಹಿಕ ನಕಲು ನಡೆದಿರುವ ಕುರಿತು ವರದಿಯಾಗಿಲ್ಲ.
Vijaya Karnataka Web DRW-01NIJAGUNI3
ಧಾರವಾಡದಲ್ಲಿ ಪಿಯುಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು.


ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ನವಲಗುಂದ, ಕುಂದಗೋಳ, ಕಲಘಟಗಿ, ಅಣ್ಣಿಗೇರಿ, ಅಳ್ನಾವರ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕುಗಳಲ್ಲಿ ಒಟ್ಟು 38 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 22,446 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಕ್ರವಾರ ಪರೀಕ್ಷೆ ಬರೆದರು.

ಅರ್ಥಶಾಸ್ತ್ರ ವಿಷಯ ಪರೀಕ್ಷೆಗೆ ಹೊಸ ಪಠ್ಯಕ್ರಮ ಅಭ್ಯಸಿಸಿದ ಒಟ್ಟು 12,482 ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಆದರೆ, 11,977 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದು, 505 ವಿದ್ಯಾರ್ಥಿಗಳು ಗೈರು ಉಳಿದಿದ್ದಾರೆ. ಹಾಗೆಯೇ ಹಳೇ ಪಠ್ಯಕ್ರಮದನ್ವಯ 1063 ವಿದ್ಯಾರ್ಥಿಗಳ ಪೈಕಿ 902 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಭೌತಶಾಸ್ತ್ರ ವಿಷಯ ಪರೀಕ್ಷೆಯಲ್ಲಿ 9,715 ವಿದ್ಯಾರ್ಥಿಗಳ ಪೈಕಿ 9,567 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದಿದ್ದು, 148 ಜನ ಗೈರು ಉಳಿದಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ಇತ್ತೀಚೆಗೆ ಗಂಭೀರವಾಗಿದ್ದರಿಂದ ಅಗತ್ಯ ಭದ್ರತೆಯಲ್ಲಿಯೇ ಪರೀಕ್ಷಾ ಕೇಂದ್ರಗಳಿಗೆ ಅವುಗಳನ್ನು ಪೂರೈಸಲಾಯಿತು. ಶನಿವಾರ ಎಂಎಸ್‌ಕ್ಯೂಎಫ್‌ ವಿಷಯ ಪರೀಕ್ಷೆಯು ಜಿಲ್ಲೆಯ ಕುಂದಗೋಳ ಹಾಗೂ ಹುಬ್ಬಳ್ಳಿಯ 2 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಅದಕ್ಕೂ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಂದು ಡಿಡಿಪಿಯು ಎಲ್‌.ಎಸ್‌. ಪಾಟೀಲ ವಿಕ ಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ