ಆ್ಯಪ್ನಗರ

ವಿಜ್ಞಾನ ಮಾದರಿಯ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಧಾರವಾಡ : ತಾಲೂಕಿನ ಬೋಗುರ ಸಹಿಪ್ರಾ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸುಮಾ ಸದಾನಂದ ತುರಮರಿ 2018-19ನೇ ಸಾಲಿನ ಕೇಂದ್ರ ಸರಕಾರದ ಭಾರತೀಯ ವಿಜ್ಞಾನ ಸಂಸ್ಥೆಯ ರಾಮನ್‌ ಅವಾರ್ಡ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Vijaya Karnataka 21 Feb 2019, 5:00 am
ಧಾರವಾಡ : ತಾಲೂಕಿನ ಬೋಗುರ ಸಹಿಪ್ರಾ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸುಮಾ ಸದಾನಂದ ತುರಮರಿ 2018-19ನೇ ಸಾಲಿನ ಕೇಂದ್ರ ಸರಕಾರದ ಭಾರತೀಯ ವಿಜ್ಞಾನ ಸಂಸ್ಥೆಯ ರಾಮನ್‌ ಅವಾರ್ಡ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Vijaya Karnataka Web DRW-20RANGA08
ಧಾರವಾಡ ವಿಜ್ಞಾನ ಮಾದರಿಯ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಬೋಗುರ ಶಾಲೆಯ ವಿದ್ಯಾರ್ಥಿನಿ ಸುಮಾ ತುರಮರಿ.


ಭಾರತೀಯ ವಿಜ್ಞಾನ ಸಂಸ್ಥೆ ನಡೆಸುವ ರಾಮನ್‌ ಅವಾರ್ಡ್‌ನಲ್ಲಿ ಭಾಗವಹಿಸಿ ಜಡತ್ವ ಎಂಬ ವಿಜ್ಞಾನ ಮಾದರಿ ಪ್ರಸ್ತುತ ಪಡಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೇಶದ ವಿವಿಧ ಭಾಗಗಳಿಂದ ಕಳುಹಿಸಲಾಗಿದ್ದ 5625 ವಿಜ್ಞಾನ ಮಾದರಿಗಳಲ್ಲಿ 32 ವಿಜ್ಞಾನ ಮಾದರಿ ಪ್ರಯೋಗಗಳು ಮಾತ್ರ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿವೆ . ಈ ಪೈಕಿ ಬೋಗಾರ ಶಾಲೆಯ ವಿದ್ಯಾರ್ಥಿನಿ ಮಾತ್ರ ಸರಕಾರಿ ಶಾಲೆಯ ವಿದ್ಯಾರ್ಥಿನಿ ಆಗಿದ್ದಾರೆ.

ಫೆ.24ರಂದು ಬೆಂಗಳೂರಿನ ಸರ್‌.ಸಿ.ವಿ.ರಾಮನ್‌ ನಿವಾಸ ಪಂಚವಟಿಯಲ್ಲಿ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ನಡೆಯಲಿದೆ.

ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷ ಕ ಬಿ.ಎಸ್‌.ಪಾಟೀಲ, ಮಾಗದರ್ಶಕರಾದ ಜಿ.ಎನ್‌.ಅಶೋಕ ಕುಮಾರ, ಎಚ್‌.ವೈ.ಡೊಕ್ಕಣ್ಣವರ , ಕೆ.ಸಿ.ಮಲ್ಲಾಡದ, ಬಿ.ಬಿ.ಶೂರಪಾಲಿ ಅಭಿನಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ