ಆ್ಯಪ್ನಗರ

ಪಂಚಪೀಠಗಳ ಬಗ್ಗೆ ಟೀಕೆ ಬೇಡ: ಹೊರಟ್ಟಿ ಮನವಿ

ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿವೆ.

Vijaya Karnataka Web 22 Oct 2017, 6:50 pm
ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಪಂಚ ಪೀಠಗಳ ಬಗ್ಗೆ ಯಾರೊಬ್ಬರೂ ಟೀಕೆ ಟಿಪ್ಪಣಿ ಮಾಡಬಾರದು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.
Vijaya Karnataka Web separate lingayat religion horatii clarifies
ಪಂಚಪೀಠಗಳ ಬಗ್ಗೆ ಟೀಕೆ ಬೇಡ: ಹೊರಟ್ಟಿ ಮನವಿ


ನಗರದ ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಭಾನುವಾರ ಲಿಂಗಾಯತ ಮಹಾಸಭಾ ವತಿಯಿಂದ ನವೆಂಬರ್ 5ರಂದು ನೆಹರು ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪಂಚ ಪೀಠದವರು ತಮ್ಮದೇ ಆದ ನಿಲುವು ಹೊಂದಿದ್ದಾರೆ. ನಾವು ಅವರ ವಿಚಾರಗಳತ್ತ ವಾಲದೇ ಲಿಂಗಾಯತ ಸ್ವತಂತ್ರ ಧರ್ಮ ಮಾಡಲು ಏನೇನು ಮಾಡಬೇಕು ಎಂಬುದನ್ನು ಅಷ್ಟೇ ಮಾಡಬೇಕು ಎಂದು ಅವರು ಕರೆ ನೀಡಿದರು.

ಉಡುಪಿ ಪೇಜಾವರ ಶ್ರೀ, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಜಮಾದಾರ ಅವರುಗಳ ಹೇಳಿಕೆ ಬಗ್ಗೆ ಟೀಕೆ ಮಾಡುವುದು ಬೇಡ. ನಮಗೆ ಈಗ ಬುದ್ದಿ ಬಂದಿದೆ. ಅದೇ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂದ ಹೊರಟ್ಟಿ, ವೀರಶೈವರನ್ನು ಹೊಡೆಯುತ್ತಿಲ್ಲ. ಯಾರ ವಿರುದ್ಧವೂ ಸವಾಲು ಹಾಕುತ್ತಿಲ್ಲ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಿಳಿ ಹೇಳುವ ಕೆಲಸ ಆಗಬೇಕು ಎಂದು ಹೊರಟ್ಟಿ ಹೇಳಿದರು.

ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಗೆ ಎರಡೂ ಕಡೆಯಿಂದ ಒತ್ತಡಗಳಿವೆ. ಅವರು ಮಠದಲ್ಲೇ ಇರಲಿ, ಅವರಿಗೆ ತೊಂದರೆ ಕೊಡೆದೇ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಬಸವರಾಜ ಹೊರಟ್ಟಿ ಮನವಿ ಮಾಡಿದರು.

separate lingayat religion: horatii clarifies

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ