ಆ್ಯಪ್ನಗರ

ಉತ್ತಮ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡಿ

ಧಾರವಾಡ : ನಗರದ ಸುವರ್ಣಾ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ 2019-20ನೇ ಶೈಕ್ಷ ಣಿಕ ಸಾಲಿನ ಸಾಂಸ್ಕೃತಿಕ, ಎನ್‌.ಎಸ್‌.ಎಸ್‌, ಕ್ರೀಡಾ ಚಟುವಟಿಕೆಗಳಿಗೆ ಮಂಗಳವಾರ ಉಪವಿಭಾಗಾಧಿಕಾರಿ ಮೊಹಮ್ಮದ ಜುಬೇರ ಚಾಲನೆ ನೀಡಿದರು.

Vijaya Karnataka 27 Aug 2019, 5:00 am
ಧಾರವಾಡ : ನಗರದ ಸುವರ್ಣಾ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ 2019-20ನೇ ಶೈಕ್ಷ ಣಿಕ ಸಾಲಿನ ಸಾಂಸ್ಕೃತಿಕ, ಎನ್‌.ಎಸ್‌.ಎಸ್‌, ಕ್ರೀಡಾ ಚಟುವಟಿಕೆಗಳಿಗೆ ಮಂಗಳವಾರ ಉಪವಿಭಾಗಾಧಿಕಾರಿ ಮೊಹಮ್ಮದ ಜುಬೇರ ಚಾಲನೆ ನೀಡಿದರು.
Vijaya Karnataka Web serve as good officers
ಉತ್ತಮ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡಿ


ಬಳಿಕ ಮಾತನಾಡಿದ ಅವರು, ಸಂಪ್ರದಾಯ ಮತ್ತು ಸಾಕ್ರೇಟಿಸ್‌ ತತ್ವಗಳನ್ನು ವಿದ್ಯಾರ್ಥಿಗಳು ಪಾಲಿಸುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು. ಜತೆಗೆ ತಮ್ಮ ಬಾಲ್ಯ ಜೀವನವನ್ನು ವಿದ್ಯಾರ್ಥಿಗಳ ಮುಂದೆ ಹಂಚಿಕೊಂಡ ಅವರು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡುವಂತೆ ಕಿವಿ ಮಾತು ಹೇಳಿದರು.

ಸುವರ್ಣ ಎಜ್ಯುಕೇಶನಲ್‌ ಟ್ರಸ್ಟÜ ಕಾರ್ಯದರ್ಶಿ ಸವಿತಾ ವಿ. ಅಮರಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷ ಣೆಗೆ ಎಲ್ಲರು ಹೆಚ್ಚಿನ ಒತ್ತು ನಿಡಬೇಕು ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಿಗಿಸಿಕೊಂಡು ಆದರ್ಶ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷ ವಿಶ್ವನಾಥ ಅಮರಶೆಟ್ಟಿ ಮಾತನಾಡಿ, ಜಾತಿ ಬೇದ, ಭಾವವಿಲ್ಲದೆ ಸಮನ್ವಯತೆ ಮತ್ತು ನಕ್ಷ ತ್ರದಂತೆ ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಶ್ರಮಿಸಬೇಕು ಎಂದರು.

ಇದೇ ವೇಳೆ ಸುವರ್ಣ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು, ನಂತರ ವಿಧ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷ ಕರು, ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ರಾಜೇಶ್ವರಿ ಸ್ವಾಗತಿಸಿದರು. ಪ್ರಭು ನಿರೂಪಿಸಿದರು. ಪ್ರದೀಪ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ