ಆ್ಯಪ್ನಗರ

ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ

ಧಾರವಾಡ : ಸರಕಾರದ ಸೇವೆಯಲ್ಲಿ ವರ್ಗಾವಣೆ ಹಾಗೂ ಸೇವಾ ನಿವೃತ್ತಿ ಎನ್ನುವುದು ಸಾಮಾನ್ಯ, ನೌಕರು ಸಲ್ಲಿಸಿದ ಸೇವೆಯ ವೃತ್ತಿಗೆ ಗೌರವ ತರುವಂತೆ ಇರಬೇಕು ಎಂದು ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್‌.ಹಿರೇಮಠ ಹೇಳಿದರು.

Vijaya Karnataka 8 Jul 2019, 5:00 am
ಧಾರವಾಡ : ಸರಕಾರದ ಸೇವೆಯಲ್ಲಿ ವರ್ಗಾವಣೆ ಹಾಗೂ ಸೇವಾ ನಿವೃತ್ತಿ ಎನ್ನುವುದು ಸಾಮಾನ್ಯ, ನೌಕರು ಸಲ್ಲಿಸಿದ ಸೇವೆಯ ವೃತ್ತಿಗೆ ಗೌರವ ತರುವಂತೆ ಇರಬೇಕು ಎಂದು ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್‌.ಹಿರೇಮಠ ಹೇಳಿದರು.
Vijaya Karnataka Web serve with sincerity
ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ


ನಗರದ ವಾರ್ತಾಭವನದಲ್ಲಿ ನಡೆದ ಸಿಬ್ಬಂದಿ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

ಶಿಸ್ತುಬದ್ದ ಕರ್ತವ್ಯ, ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆ ಹಾಗೂ ಹೊಂದಾಣಿಕೆ ಮನೋಭಾವದಿಂದ ಕೆಲಸ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಹಿರಿಯ ಕಿರಿಯ ಎನ್ನದೆ ಎಲ್ಲರೊಂದಿಗೂ ಸಂಯಮದಿಂದ ಕರ್ತವ್ಯ ನಿರ್ವಹಿಸಿದ ಶ್ಯಾಮ ತಳೇಕರ ಅಪರೂಪದ ವ್ಯಕ್ತಿ ಎಂದರು.

ಇದೇ ವೇಳೆ ಹಾವೇರಿ ವಾರ್ತಾ ಇಲಾಖೆಯಿಂದ ಧಾರವಾಡ ಕಚೇರಿಗೆ ವರ್ಗಾವಣೆಯಾಗಿ ಬಂದಿರುವ ವಾಹನ ಚಾಲಕ ಎಂ.ಎಸ್‌.ಚೋಪದಾರ ಅವರನ್ನು ಇಲಾಖೆಯಿಂದ ಸ್ವಾಗತಿಸಲಾಯಿತು. ಡಾ.ಎಸ್‌.ಎಂ.ಹಿರೇಮಠ ಸ್ವಾಗತಿಸಿದರು. ಸಿ.ಬಿ.ಭೋವಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ