ಆ್ಯಪ್ನಗರ

ಸೈನ್ಯದಲ್ಲಿ ಸೇವೆ ಮಾಡುವುದು ಅತ್ಯಂತ ಪವಿತ್ರ ಕಾರ್ಯ

ಹುಬ್ಬಳ್ಳಿ : ಸೈನಿಕನಾಗುವುದು ಸುಲಭದ ಕೆಲಸವಲ್ಲ, ತಂದೆ-ತಾಯಿ ಮಕ್ಕಳನ್ನು ಅಷ್ಟು ಸರಳವಾಗಿ ಸೈನ್ಯಕ್ಕೆ ಸೇರಲು ಬಿಡುವುದಿಲ್ಲ.ಆದರೆ, ಸೈನಿಕ ಆಗುವ ವ್ಯಕ್ತಿಯಲ್ಲಿ ದೇಶ ಪ್ರೇಮ ಉಕ್ಕಿ ಹರಿಯುತ್ತಿರಬೇಕು. ದೇಶ ಸೇವೆ ಮಾಡುವ ಉತ್ಕಟವಾದ ಇಚ್ಛಾಶಕ್ತಿ, ಆತ್ಮಭಲ, ದೇಶಾಭಿಮಾನ ಇದ್ದರೆ ಮಾತ್ರ ಸೈನಿಕನಾಗಲು ಸಾಧ್ಯ ಎಂದು ಮಾಜಿ ಯೋಧ ಈರಪ್ಪ ಚಿನ್ನೂರ ಹೇಳಿದರು.

Vijaya Karnataka 27 Feb 2019, 5:00 am
ಹುಬ್ಬಳ್ಳಿ : ಸೈನಿಕನಾಗುವುದು ಸುಲಭದ ಕೆಲಸವಲ್ಲ, ತಂದೆ-ತಾಯಿ ಮಕ್ಕಳನ್ನು ಅಷ್ಟು ಸರಳವಾಗಿ ಸೈನ್ಯಕ್ಕೆ ಸೇರಲು ಬಿಡುವುದಿಲ್ಲ.ಆದರೆ, ಸೈನಿಕ ಆಗುವ ವ್ಯಕ್ತಿಯಲ್ಲಿ ದೇಶ ಪ್ರೇಮ ಉಕ್ಕಿ ಹರಿಯುತ್ತಿರಬೇಕು. ದೇಶ ಸೇವೆ ಮಾಡುವ ಉತ್ಕಟವಾದ ಇಚ್ಛಾಶಕ್ತಿ, ಆತ್ಮಭಲ, ದೇಶಾಭಿಮಾನ ಇದ್ದರೆ ಮಾತ್ರ ಸೈನಿಕನಾಗಲು ಸಾಧ್ಯ ಎಂದು ಮಾಜಿ ಯೋಧ ಈರಪ್ಪ ಚಿನ್ನೂರ ಹೇಳಿದರು.
Vijaya Karnataka Web DRW-25 NADAF 10
ಹುಬ್ಬಳ್ಳಿಯಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.


ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸೈನ್ಯದಲ್ಲಿ ಸೇವೆ ಮಾಡುವುದು ಅತ್ಯಂತ ಪವಿತ್ರ, ಶ್ರೇಷ್ಠ ಕಾರ್ಯವಾಗಿದೆ. ಸೈನ್ಯದಲ್ಲಿ ಅತ್ಯಂತ ಕಠಿಣ ಜೀವನ ಸಾಗಿಸಬೇಕಾಗುತ್ತದೆ. ಸೈನ್ಯಕ್ಕೆ ಸೇರಲು ಯುವಕರನ್ನು ಪ್ರೊತ್ಸಾಹಿಸುವ ಕೆಲಸ ನಡೆಯಬೇಕು. ಸೈನಿಕ ವೀರಮರಣ ಹೊಂದಿದಾಗ ಅವನ ಕುಟುಂಭದವರು ಅನುಭವಿಸುವ ಯಾತನೆ, ನೋವು, ಕಷ್ಟ ಹೇಳತಿರದು. ಸರಕಾರ, ಸಂಘ, ಸಂಸ್ಥೆಗಳು ಕುಟುಂಭದವರಿಗೆ ಹೆಚ್ಚಿನ ನೇರವು, ಸಹಕಾರ ನೀಡಬೇಕು ಎಂದು ಹೇಳಿದರು.

ಕವಿಯಿತ್ರಿ ಪ್ರಮೀಳಾ ಹಟ್ಟಿಹೋಳಿ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸುವರ್ಣಲತಾ ಗದಿಗೆಪ್ಪಗೌಡರ ಪ್ರಾಸ್ತಾವಿಕ ಮಾತನಾಡಿದರು. ಕವನಗಳ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಹಿತಿ ಶಾಂತಾ ಈಟಿ, ಡಾ.ಬಸವಕುಮಾರ ತಲವಾಯಿ, ರಮಾಕಾಂತ ಗದಿಗೆಪ್ಪಗೌಡರ, ಭಾರತಿ ಹಿರೇಗೌಡರ, ಮಾಲಾಭಾಯಿ ಗಜಕೋಶ, ಚೈತ್ರಾ ಹಿರೇಮಠ, ಸುಲೋಚನಾ ಸಿರ್ಸಿಕರ, ಉಮಾ ಹುಲಿಕಂತಿಮಠ, ರೇಣುಕಾ ಕಮತರ, ಸವಿತಾ ಲಿಂಗರೆಡ್ಡಿ, ಶಕುಂತಲಾ ಅಂಗಡಿ, ರೇಣುಕಾ ಟೆಂಗಿನಕಾಯಿ, ವಿರಾಟ, ಮುಂತಾದವರು ಇದ್ದರು. ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ , ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಮೃತ್ಯುಂಜಯ ಮಟ್ಟಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ