ಕಲಘಟಗಿ: ಪಟ್ಟಣದ ಹೊರವಲಯದಲ್ಲಿರುವ ವೇಕಾಸ್ ಸಂಸ್ಥೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಮತ್ತು ವೇಕಾಸ್ ಮಹಿಳಾ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಚೆಕ್ ವಿತರಿಸಲಾಯಿತು.
ವೇಕಾಸ್ ಸಂಸ್ಥೆಯ ಅಧ್ಯಕ್ಷೆ ದೇವಕಿ ಯೋಗಾನಂದ ಮಾತನಾಡಿ, ಹಲವು ವರ್ಷಗಳಿಂದ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ವಾವಲಂಬಿ ಜೀವನ ನಡೆಸುವಂತೆ ಕೌಶಲ್ಯಧಾರಿತ ತರಬೇತಿ ನೀಡವಲ್ಲಿ ವೇಕಾಸ ಸಂಸ್ಥೆ ಶ್ರಮಿಸುತ್ತಲಿದೆ. ಮುಂಬರುವ ದಿನಗಳಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಪ್ರತಿಯೊಬ್ಬ ಫಲಾನುಭವಿಗಳಲ್ಲಿಯೂ ಸಮಯ ಪ್ರಜ್ಞೆ, ಕಾರ್ಯ ತತ್ಪರತೆ ಹಾಗೂ ಆರ್ಥಿಕ ಸಬಲತೆಯ ಕುರಿತು ಹೆಚ್ಚಿನ ಅರಿವು ಮೂಡಿಸಲಾಗುವುದು ಎಂದರು.
ಜಿಪಂ ಸದಸ್ಯೆ ಈರಮ್ಮ ದಾಸನಕೊಪ್ಪ ಮಾತನಾಡಿ, ವೃತ್ತಿ ಕೌಶಲ್ಯತೆಯನ್ನು ಮಹಿಳೆ ಪಡೆದು ಉದ್ಯೋಗ ಪಡೆದು ಸ್ವತಃ ಆರ್ಥಿಕ ಸಬಲಗೊಳ್ಳುಲು ಸಾಧ್ಯ ಎಂದರು. ತಾಪಂ ಸದಸ್ಯೆ ಬಸಮ್ಮ ಮೂಗಣ್ಣವರ, ಪ್ರಭಾಕರ ನಾಯಕ,ರವಿ ಬಡಿಗೇರ, ಮಂಜುನಾಥ ಮೂಗಣ್ಣವರ,ಗಿರಿಜಾ ಅಗಡಿ, ಅಕ್ಕಮಹಾದೇವಿ ಹೂಗಾರ,ಲಕ್ಷ್ಮೀ ಗಾಮಣ್ಣವರ,ರಂಜಿತಾ ಅಗಡಿ ಉಪಸ್ಥಿತರಿದ್ದರು. ವಸಂತ ಬಡಿಗೇರ ನಿರೂಪಿಸಿ, ವಂದಿಸಿದರು.
ವೇಕಾಸ್ ಸಂಸ್ಥೆಯ ಅಧ್ಯಕ್ಷೆ ದೇವಕಿ ಯೋಗಾನಂದ ಮಾತನಾಡಿ, ಹಲವು ವರ್ಷಗಳಿಂದ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ವಾವಲಂಬಿ ಜೀವನ ನಡೆಸುವಂತೆ ಕೌಶಲ್ಯಧಾರಿತ ತರಬೇತಿ ನೀಡವಲ್ಲಿ ವೇಕಾಸ ಸಂಸ್ಥೆ ಶ್ರಮಿಸುತ್ತಲಿದೆ. ಮುಂಬರುವ ದಿನಗಳಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಪ್ರತಿಯೊಬ್ಬ ಫಲಾನುಭವಿಗಳಲ್ಲಿಯೂ ಸಮಯ ಪ್ರಜ್ಞೆ, ಕಾರ್ಯ ತತ್ಪರತೆ ಹಾಗೂ ಆರ್ಥಿಕ ಸಬಲತೆಯ ಕುರಿತು ಹೆಚ್ಚಿನ ಅರಿವು ಮೂಡಿಸಲಾಗುವುದು ಎಂದರು.
ಜಿಪಂ ಸದಸ್ಯೆ ಈರಮ್ಮ ದಾಸನಕೊಪ್ಪ ಮಾತನಾಡಿ, ವೃತ್ತಿ ಕೌಶಲ್ಯತೆಯನ್ನು ಮಹಿಳೆ ಪಡೆದು ಉದ್ಯೋಗ ಪಡೆದು ಸ್ವತಃ ಆರ್ಥಿಕ ಸಬಲಗೊಳ್ಳುಲು ಸಾಧ್ಯ ಎಂದರು. ತಾಪಂ ಸದಸ್ಯೆ ಬಸಮ್ಮ ಮೂಗಣ್ಣವರ, ಪ್ರಭಾಕರ ನಾಯಕ,ರವಿ ಬಡಿಗೇರ, ಮಂಜುನಾಥ ಮೂಗಣ್ಣವರ,ಗಿರಿಜಾ ಅಗಡಿ, ಅಕ್ಕಮಹಾದೇವಿ ಹೂಗಾರ,ಲಕ್ಷ್ಮೀ ಗಾಮಣ್ಣವರ,ರಂಜಿತಾ ಅಗಡಿ ಉಪಸ್ಥಿತರಿದ್ದರು. ವಸಂತ ಬಡಿಗೇರ ನಿರೂಪಿಸಿ, ವಂದಿಸಿದರು.