ಆ್ಯಪ್ನಗರ

ಶರಣರು ಕನ್ನಡ ನಾಡಿನ ಆಸ್ತಿ

ಧಾರವಾಡ : ಎಲ್ಲ ಸಮಾಜದ ಶರಣರು ಕನ್ನಡ ನಾಡಿನ ಆಸ್ತಿ ಎಂದು ಪೌರಾಡಳಿತ ಸಚಿವ ಸಿ.ಎಸ್‌. ಶಿವಳ್ಳಿ ಹೇಳಿದರು. ನಗರದಲ್ಲಿ ಮಂಗಳವಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶ್ರೀೕ

Vijaya Karnataka 17 Jan 2019, 5:00 am
ಧಾರವಾಡ : ಎಲ್ಲ ಸಮಾಜದ ಶರಣರು ಕನ್ನಡ ನಾಡಿನ ಆಸ್ತಿ ಎಂದು ಪೌರಾಡಳಿತ ಸಚಿವ ಸಿ.ಎಸ್‌. ಶಿವಳ್ಳಿ ಹೇಳಿದರು.
Vijaya Karnataka Web sharan is the property of kannada nadu
ಶರಣರು ಕನ್ನಡ ನಾಡಿನ ಆಸ್ತಿ

ನಗರದಲ್ಲಿ ಮಂಗಳವಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶ್ರೀೕ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮೇಶ್ವರ ಜಯಂತಿಯನ್ನು ಸರಕಾರ ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದ್ದು, ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನೇಕರ ಶರಣರ ಜಯಂತಿಯನ್ನು ಆಚರಿಸುವ ಮೂಲಕ ಶರಣರಿಗೆ ಗೌರವಸಿದ್ದಾರೆ ಎಂದರು.

ಶ್ರೀ ಸಿದ್ದರಾಮೇಶ್ವರು ಅಷ್ಟಮ ಸಿದ್ದಿಪರುಷರು. ನೋಣಬ ಜನಾಂಗದವರು ಗುರುಗಳನ್ನಾಗಿ ಸ್ವಿಕರಿಸಿದ್ದಾರೆ ಅಲ್ಲದೇ ಎಲ್ಲ ಜಾತಿ ಜನಾಂಗದವರು ಶ್ರೀ ಸಿದ್ದರಾಮೇಶ್ವರನನ್ನು ಆರಾಧಿಸುವ ಕೆಲಸ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ಸಮಾಜದಲ್ಲಿ ಹಿಂದುಳಿದವರನ್ನು ಮೇಲಕ್ಕೆತ್ತುವ ಕೆಲಸವನ್ನು ಸರಕಾರ ಸೇರಿದಂತೆ ಸಮಾಜದಲ್ಲಿ ಉನ್ನತ ಮಟ್ಟದಲ್ಲಿರುವರೇಲ್ಲ ಸೇರಿ ಮಾಡಬೇಕು ಎಂದರು.

ಇದಕ್ಕೂ ಮುನ್ನ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ಮೆಣಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಆರಂಭವಾಗಿ ಅಂಜುಮಾನ ಸರ್ಕಲ್‌, ವಿವೇಕಾನಂದ ವೃತ್ತ ಮೂಲಕ ವಿವಿಧ ವೃತ್ತಗಳಲ್ಲಿ ಸಂಚರಿಸಿ ಮರಳಿ ಕವಿಸಂ ತಲುಪುವ ಮೂಲಕ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಂ ಮೈಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಸಿದ್ದಲಿಂಗೇಶ ರಂಗಣ್ಣವರ, ಮುಖಂಡರಾದ ತುಳಸಪ್ಪ ಪೂಜಾರ ,ಬಸವರಾಜ, ಬೀಮಸೇನ, ಮಲ್ಲೇಶ, ಕಾಶಪ್ಪ ಹಿರೇಮನಿ, ಯಲ್ಲಪ್ಪ ಬಂಡಿವಡ್ಡರ, ಹನಮಂತಪ್ಪ ಮ್ಯಾಗೇರಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ