ಹುಬ್ಬಳ್ಳಿ: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿನಡೆದ ಚಾಕು ಇರಿತ ಹಾಗೂ ಹಲ್ಲೆ ಪ್ರಕರಣ ಸಂಬಂಧ ಉಪನಗರ ಪೊಲೀಸರು ಇಬ್ಬರನ್ನು ಹಾಗೂ ಶಹರ ಠಾಣೆ ಪೊಲೀಸರು ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಹಾವೇರಿ ಜಿಲ್ಲೆ ಶಂಕ್ರಿಕೊಪ್ಪದ ಇಲ್ಲಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ಬಸವರಾಜ ಶಿವೂರ ಕೊಲೆ ಪ್ರಕರಣದಲ್ಲಿರವಿ ಕಟಿಗಾರ ಮತ್ತು ರಾಹುಲ್ ಭಾಂಡಗೆ ಎಂಬ ಆರೋಪಿಗಳನ್ನು ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾರಾಯಣ ಬಾರದ ಹಾಗೂ ವಿನಾಯಕ ಬಾರದ ಅವರ ಮೇಲೆ ಚನ್ನಮ್ಮ ವೃತ್ತದಲ್ಲಿನಡೆದ ಹಲ್ಲೆ ಸಂಬಂಧ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದರೆ, ದುರ್ಗದ ಬೈಲ್ನಲ್ಲಿನಡೆದ ಅನಿಲ ಹೊಸಮನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಶಹರ ಠಾಣೆ ಪೊಲೀಶರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಹರ್ಷಾ ಕಾಂಪ್ಲೆಕ್ಸ್ ಬಳಿ ಮಹಾಂತೇಶ ಹೊಸಮನಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಗುರುತು ಅಲ್ಲಿದ್ದ ಸಿಸಿ ಟಿವಿಗಳಿಂದ ಪತ್ತೆಯಾಗಿದೆ. ಆದರೆ ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿತದ ಅಮಲಿನಲ್ಲಿಚಾಕು ಇರಿದಿದ್ದಾಗಿ ಮತ್ತು ಗಣೇಶ ವಿಸರ್ಜನೆ ಸಂದರ್ಭದಲ್ಲಿಡಾನ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಆಗಿದ್ದ ಬಗ್ಗೆ ಕೊಲೆ ಆರೋಪಿ ರವಿ ಕಟಿಗಾರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಾವೇರಿ ಜಿಲ್ಲೆ ಶಂಕ್ರಿಕೊಪ್ಪದ ಇಲ್ಲಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ಬಸವರಾಜ ಶಿವೂರ ಕೊಲೆ ಪ್ರಕರಣದಲ್ಲಿರವಿ ಕಟಿಗಾರ ಮತ್ತು ರಾಹುಲ್ ಭಾಂಡಗೆ ಎಂಬ ಆರೋಪಿಗಳನ್ನು ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾರಾಯಣ ಬಾರದ ಹಾಗೂ ವಿನಾಯಕ ಬಾರದ ಅವರ ಮೇಲೆ ಚನ್ನಮ್ಮ ವೃತ್ತದಲ್ಲಿನಡೆದ ಹಲ್ಲೆ ಸಂಬಂಧ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದರೆ, ದುರ್ಗದ ಬೈಲ್ನಲ್ಲಿನಡೆದ ಅನಿಲ ಹೊಸಮನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಶಹರ ಠಾಣೆ ಪೊಲೀಶರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಹರ್ಷಾ ಕಾಂಪ್ಲೆಕ್ಸ್ ಬಳಿ ಮಹಾಂತೇಶ ಹೊಸಮನಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಗುರುತು ಅಲ್ಲಿದ್ದ ಸಿಸಿ ಟಿವಿಗಳಿಂದ ಪತ್ತೆಯಾಗಿದೆ. ಆದರೆ ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿತದ ಅಮಲಿನಲ್ಲಿಚಾಕು ಇರಿದಿದ್ದಾಗಿ ಮತ್ತು ಗಣೇಶ ವಿಸರ್ಜನೆ ಸಂದರ್ಭದಲ್ಲಿಡಾನ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಆಗಿದ್ದ ಬಗ್ಗೆ ಕೊಲೆ ಆರೋಪಿ ರವಿ ಕಟಿಗಾರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.