ಆ್ಯಪ್ನಗರ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ

ಹುಬ್ಬಳ್ಳಿ : ಇಲ್ಲಿನ ಟಿಪ್ಪು ಷಹೀದ್‌ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಡಿಪ್ಲೋಮಾ ಪರೀಕ್ಷೆಗೆ ಅತ್ಯುತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತರಿಗೆ ಸಂಸ್ಥೆ ವತಿಯಿಂದ ಪಾರಿತೋಷಕ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.

Vijaya Karnataka 3 Jul 2019, 5:00 am
ಹುಬ್ಬಳ್ಳಿ : ಇಲ್ಲಿನ ಟಿಪ್ಪು ಷಹೀದ್‌ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಡಿಪ್ಲೋಮಾ ಪರೀಕ್ಷೆಗೆ ಅತ್ಯುತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತರಿಗೆ ಸಂಸ್ಥೆ ವತಿಯಿಂದ ಪಾರಿತೋಷಕ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
Vijaya Karnataka Web DRW-2 NADAF 11
ಹುಬ್ಬಳ್ಳಿಯ ಟಿಪ್ಪು ಷಹೀದ್‌ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಡಿಪ್ಲೋಮಾ ಪರೀಕ್ಷೆಗೆ ಅತ್ಯುತ್ತಮ ಅಂಕ ಪಡೆದವರನ್ನು ಪ್ರಾಚಾರ್ಯ ಎಂ.ಎಸ್‌.ಮುಲ್ಲಾ ಸನ್ಮಾನಿಸಿದರು.


ಕಾಲೇಜಿನ ಪ್ರಾಚಾರ್ಯ ಎಂ.ಎಸ್‌. ಮುಲ್ಲಾ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ನೀಡಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸುವ ನಿಟ್ಟಿನಲ್ಲಿ ಈಗಿನಿಂದಲೇ ತಯಾರಿ ನಡೆಸಬೇಕು. ನೀವು ಮುಂದೊಂದು ದಿನ ದೊಡ್ಡ ಸಾಧನೆ ಮಾಡಿದರೆ ಅದು ನೀವು ಕಲಿತ ಶಿಕ್ಷ ಣ ಸಂಸ್ಥೆಗೆ ಕೀರ್ತಿ ತಂದಂತೆ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಗುರಿ ಇಟ್ಟಕೊಳ್ಳಬೇಕು ಎಷ್ಟೇ ಕಷ್ಟ ಬಂದರೂ ನನ್ನ ಗುರಿಯನ್ನೇ ತಲುಪೆ ತಲುಪುತ್ತೇನೆ ಎಂಬ ಛಲದಿಂದ ಮುನ್ನುಗ್ಗಿ. ಒಂದು ಸಾರಿ ಮುನ್ನುಗ್ಗಿದ್ದರೆ ಗುರಿ ತಲುಪುವವರೆಗೆ ಎಲ್ಲೂ ನಿಲ್ಲಬೇಡಿ. ಸೋಲಿಗೆ ಸಾವಿರ ನೆಪಗಳಿರಬಹುದು ಆದರೆ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಒಂದೇ ಮಾರ್ಗ ಎಂದರು.

ಸಮಾರಂಭದಲ್ಲಿ ಕಂಪ್ಯೂಟರ ಸೈನ್ಸ್‌ ವಿಭಾಗದ ಎಂ.ಎಚ್‌. ಧಾರವಾಡ, ವಿಭಾಗಾಧಿಕಾರಿ ಬಾಳೇಶ ಹೆಗ್ಗಣ್ಣವರ, ಎಸ್‌.ಬಿ. ಕುರುಬಗಟ್ಟಿ ಮತ್ತು ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ