ಆ್ಯಪ್ನಗರ

ಶಿರೂರ: ಸಂಗಮೇಶ್ವರ ತೆಪ್ಪೋತ್ಸವ ಸಂಭ್ರಮ

ಹುಬ್ಬಳ್ಳಿ : ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಮಕರ ಸಂಕ್ರಾಂತಿ ನಿಮಿತ್ತವಾಗಿ ಶ್ರೀ ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವ ಸಾವಿರಾರು ಭಕ್ತಾದಿಗಳ ಹರ್ಷೊದ್ಘಾರಗಳ ಮಧ್ಯ ಸೋಮವಾರ ಅದ್ಧೂರಿಯಾಗಿ ಜರುಗಿತು. ತೆಪ್ಪೋತ್ಸವದ ಅಂಗವಾಗಿ ಸಂಗಮೇಶ್ವರ ದೇವನಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಮಾಡಲಾಗಿತ್ತು.

Vijaya Karnataka 15 Jan 2019, 5:00 am
ಹುಬ್ಬಳ್ಳಿ : ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಮಕರ ಸಂಕ್ರಾಂತಿ ನಿಮಿತ್ತವಾಗಿ ಶ್ರೀ ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವ ಸಾವಿರಾರು ಭಕ್ತಾದಿಗಳ ಹರ್ಷೊದ್ಘಾರಗಳ ಮಧ್ಯ ಸೋಮವಾರ ಅದ್ಧೂರಿಯಾಗಿ ಜರುಗಿತು. ತೆಪ್ಪೋತ್ಸವದ ಅಂಗವಾಗಿ ಸಂಗಮೇಶ್ವರ ದೇವನಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಮಾಡಲಾಗಿತ್ತು.
Vijaya Karnataka Web HBL-1401-2-3-14VIJAY-5
ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವದ ದೃಶ್ಯ.


ಗ್ರಾಮದ ಸುತ್ತಮುತ್ತಲಿನ ಆಯಟ್ಟಿ, ಗುಮ್ಮಗೋಳ, ಬ್ಯಾಲ್ಯಾಳ, ಮೊರಬ, ಗರಗ, ಲೋಕೂರು, ಬೆಟಗೇರಿ, ಹಾರೋಬೇಳವಡಿ, ಇನಾಮಹೊಂಗಲ್‌, ಅಮ್ಮಿನಭಾವಿ ಸೇರಿದಂತೆ ವಿವಿಧ ಊರುಗಳಿಂದ ಆಗಮಿಸಿದ್ದ ಜನರು ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದರು.

ಬೆಳಗ್ಗೆ ಮಲಪ್ರಭಾ ಬಲದಂಡೆಯ ಕಾಲುವೆಯಲ್ಲಿ ಪವಿತ್ರ ಸ್ನಾನ ಮಾಡಿದರು. ಸಂಜೆ ನಡೆದ ಬಾಲಲೀಲಾ ಸಂಗಮೇಶ್ವರ ತೆಪೋತ್ಸವದಲ್ಲಿ ಪಾಲ್ಗೊಂಡರು. ತಾವು ತಂದಿದ್ದ ಜೋಳದ ರೊಟ್ಟಿ, ಪಲ್ಯ ಸೇರಿದಂತೆ ವಿವಿಧ ಭಕ್ಷ್ಯ ಭೋಜನಗಳನ್ನು ಸವಿದರು. ರಾತ್ರಿ ನಡೆದ ನಾಟಕವನ್ನು ವೀಕ್ಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ