ಆ್ಯಪ್ನಗರ

ಶಿವಳ್ಳಿ ಸೇವೆ ಸ್ಮರಣೀಯ: ಡಾ. ಯತೀಂದ್ರ

ರಾಜ್ಯ ಸಮ್ಮಿಶ್ರ ಸರಕಾರವು ಕುಂದಗೋಳ ಮತಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ಪೌರವಾಡಳಿತ ಸಚಿವರಾಗಿದ್ದ ಶಿವಳ್ಳಿಯವರ ಕಾರ್ಯ ಮಹತ್ತರವಾಗಿದೆ ಎಂದು ...

Vijaya Karnataka 16 May 2019, 5:00 am
ಕುಂದಗೋಳ : ರಾಜ್ಯ ಸಮ್ಮಿಶ್ರ ಸರಕಾರವು ಕುಂದಗೋಳ ಮತಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ಪೌರವಾಡಳಿತ ಸಚಿವರಾಗಿದ್ದ ಶಿವಳ್ಳಿಯವರ ಕಾರ್ಯ ಮಹತ್ತರವಾಗಿದೆ ಎಂದು ವರುಣಾ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರ ಪುತ್ರ ಡಾ: ಯತೀಂದ್ರ ಹೇಳಿದರು.
Vijaya Karnataka Web DRW-14KND6
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಪರ ಯತೀಂದ್ರ ಸಿದ್ದರಾಮಯ್ಯ ಮನೆಮನೆಗೆ ತೆರಳಿ ಮತಯಾಚಿಸಿದರು.


ತಾಲೂಕಿನ ಅಲ್ಲಾಪುರ, ಕಡಪಟ್ಟಿ, ಯರಿನಾರಾಯಣಪುರ ಹಾಗೂ ಗುಡೇನಕಟ್ಟಿ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಪರ ಮತಯಾಚಿಸುತ್ತ ಶಿವಳ್ಳಿ ತಮ್ಮ ಆರೋಗ್ಯದತ್ತ ಗಮನಹರಿಸಿದೆ ಅವರು ಈ ಕ್ಷೇತ್ರದ ನಾಡಿಮಿಡಿತದ ಶಾಸಕರಾಗಿ ಕಾರ್ಯನಿರ್ವಹಿಸಿದ್ದು, ಅವರ ಪತ್ನಿ ಕುಸುಮಾವತಿ ಅವರನ್ನು ಬೆಂಬಲಿಸಸಿರಿ ಎಂದರು.

ಎಚ್‌.ಡಿ ಕೋಟೆ ಶಾಸಕ ಅನಿಲ ಚಿಕ್ಕಮಧು, ಬಸು ಜೋಗಣ್ಣವರ, ಯಲ್ಲಪ್ಪ ಹೊನ್ನಿಹಳ್ಳಿ, ಮಾಂತೇಶ, ಕಂಬಳಿ, ರಾಘವೇಂದ್ರ ಕುಸುಗಲ್‌, ನಾಗಪ್ಪ ಸಿದ್ದೂನವರ, ಗುರುಪಾದ ಹೊಸಳ್ಳಿ, ಯಲ್ಲಪ್ಪ ಡಾಲಿನ, ಬಸು ಯಮ್ಮಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ