ಆ್ಯಪ್ನಗರ

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ

ಹುಬ್ಬಳ್ಳಿ: ಮೈಸೂರ ಜಿಲ್ಲೆ ಸುತ್ತೂರ ಶ್ರೀಕ್ಷೇತ್ರ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಜ.21 ರಿಂದ 26 ರವರೆಗೆ ನಡೆಯಲಿದೆ ಎಂದು ಮಹೇಂದ್ರ ಪಟೇಲ್‌ ತಿಳಿಸಿದರು.

Vijaya Karnataka 18 Jan 2020, 5:00 am
ಹುಬ್ಬಳ್ಳಿ: ಮೈಸೂರ ಜಿಲ್ಲೆ ಸುತ್ತೂರ ಶ್ರೀಕ್ಷೇತ್ರ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಜ.21 ರಿಂದ 26 ರವರೆಗೆ ನಡೆಯಲಿದೆ ಎಂದು ಮಹೇಂದ್ರ ಪಟೇಲ್‌ ತಿಳಿಸಿದರು.
Vijaya Karnataka Web shri shivaratrishwara shivayogi jatra mahotsav
ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ


ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿಜ.21 ಕ್ಕೆ ವೀರಭದ್ರೇಶ್ವರ ಕೆಂಡೋತ್ಸವ, ಜ.23 ರಂದು ರಥೋತ್ಸವ, 24ರಂದು ಕೆಂಡೋತ್ಸವ, 25ರಂದು ತೆಪ್ಪೋತ್ಸವ ಜತೆæಗೆ ಲಕ್ಷ ದೀಪೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜ.22 ರಂದು ನಂಜುಂಡೇಶ್ವರ ನಂದಿ ವಿನಾಯಕ ಮೂರ್ತಿಗಳ ಪ್ರತಿಷ್ಠಾಪನೆ, 28 ಕ್ಕೆ ರಾಜ್ಯ ಮಟ್ಟದ ಭಜನಾ ಮೇಳ ನಡೆಯಲಿದೆ ಎಂದು ಹೇಳಿದರು.

ಈ ಜಾತ್ರೆಯಲ್ಲಿಪ್ರಮುಖ ಆಕರ್ಷಕ ವಾದ ವಸ್ತುಪ್ರದರ್ಶನ, ಕೃಷಿ ಮೇಳ, ಕೃಷಿ ವಿಚಾರ ಸಂಕೀರಣ, ಸ್ಥಳದಲ್ಲೇ ಚಿತ್ರ ರಚಿಸುವ ಸ್ಪರ್ಧೆ, ಚಿತ್ರಸಂತೆ, 22 ರಂದು ಸಾಮೂಹಿಕ ವಿವಾಹ , ಪ್ರಭಾತ ಪೇರಿ, ಸೋಬಾನ ಪದ, ರಂಗೋಲಿ, ಗಾಳಿಪಟ ಸ್ಪರ್ಧೆ, 24 ರಂದು ರಸ ಪ್ರಶ್ನೆ, 25 ರಂದು ಕುಸ್ತಿ ಪಂದ್ಯಾವಳಿ, ಕ್ಯಾನ್ಸರ್‌ ತಪಾಸಣಾ ಶಿಬಿರ, ದೋಣಿ ವಿಹಾರ, ಗ್ರಾಮೀಣ ಜನರು ಹಾಗೂ ಪ್ರಾಥಮಿಕ ಮತ್ತು ಜೆಎಸ್‌ಎಸ್‌ ಪೌಢಶಾಲಾ ವಿದ್ಯಾರ್ಥಿಗಳಿಗೆ ದೇಸಿ ಆಟಗಳು, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿಗ್ರಂಥ ಪಾಲಕ ಆನಂದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ