ಆ್ಯಪ್ನಗರ

ಶ್ರೀವೀರಭದ್ರೇಶ್ವರ ಮಹಾರಾಜಕೀ ಜೈ

ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿರುವ ವೀರಭದ್ರಸ್ವಾಮಿ ದೇವಾಲಯದಲ್ಲಿಮಂಗಳವಾರ ಗೌರಿಹುಣ್ಣಿಮೆ ನಿಮಿತ್ತ ಮಂಗಳವಾರ ವೀರಭದ್ರಸ್ವಾಮಿ ಗುಗ್ಗಳ ಮಹೋತ್ಸವ ನಡೆಯಿತು.

Vijaya Karnataka 13 Nov 2019, 5:00 am
ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿರುವ ವೀರಭದ್ರಸ್ವಾಮಿ ದೇವಾಲಯದಲ್ಲಿಮಂಗಳವಾರ ಗೌರಿಹುಣ್ಣಿಮೆ ನಿಮಿತ್ತ ಮಂಗಳವಾರ ವೀರಭದ್ರಸ್ವಾಮಿ ಗುಗ್ಗಳ ಮಹೋತ್ಸವ ನಡೆಯಿತು.
Vijaya Karnataka Web 12NIJAGUNI7_21
ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿಮಂಗಳವಾರ ಗುಗ್ಗಳ ಮಹೋತ್ಸವ ಜರುಗಿತು.


ಜಾನಪದದ ವಿಶೇಷ ಗತ್ತಿನಲ್ಲಿನುಡಿಸುತ್ತಿದ್ದ ಸಂಬಾಳ ವಾದನಕ್ಕೆ ಹೆಜ್ಜೆಹಾಕಿ ಪುರವಂತರ ತಂಡವು ಕುಣಿಯುತ್ತಿದ್ದಂತೆ ನೆರೆದ ಭಕ್ತಸಮೂಹವು ಹರಹರ ಮಹಾದೇವ...ಶ್ರೀ ವೀರಭದ್ರೇಶ್ವರ ಮಹಾರಾಜಕೀ ಜೈ...ಎಂದೆಲ್ಲಜಯಘೋಷ ಹಾಕಿತು.

ದೇವಾಲಯದ 6ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಈ ಗುಗ್ಗಳ ಮಹೋತ್ಸವವನ್ನು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಹಿರಿಯ ಪುರವಂತರಾದ ಬಸವಂತಪ್ಪ ಕಂಬಾರ, ಮಡಿವಾಳಪ್ಪ ಕುರುವಿನಕೊಪ್ಪ, ಮಹಾದೇವಪ್ಪ ಸಾವಕ್ಕನವರ, ಪ್ರೇಮಯ್ಯ ಗಣಾಚಾರಿ, ಶಿವಪ್ಪ ಕುಂಬಾರ, ದೇವೇಂದ್ರಪ್ಪ ಪತ್ತಾರ, ದ್ಯಾಮಣ್ಣ ಕೊಪ್ಪದ, ಶರಣಪ್ಪ ಕಂಬಾರ, ಅರುಣ ಕಂಬಾರ, ರುದ್ರಪ್ಪ ಕಂಬಾರ, ನಿಂಗಪ್ಪ ಕಂಬಾರ, ಆನಂದ ಮಾದನಬಾವಿ, ಪ್ರೀತಮಂ ಯಡಳ್ಳಿ ವೀರಭದ್ರ ದೇವರ ವಿಶಿಷ್ಟ ಒಡಪುಗಳನ್ನು ಹೇಳಿ ಗುಗ್ಗಳ ಮಹೋತ್ಸವಕ್ಕೆ ಕಳೆತುಂಬಿದರು.

ಪ್ರಾತಃಕಾಲದಲ್ಲಿ ವೀರಭದ್ರಸ್ವಾಮಿಯ ಶಿಲಾವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ, ಅಲಂಕಾರಪೂಜೆ, ಮಹಾಮಂಗಳಾರತಿ ಮತ್ತಿತರ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತ ಸಮೂಹದ ದಾಸೋಹ ಸೇವೆಯಲ್ಲಿಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಸುತ್ತಲಿನ ಹಲವು ಗ್ರಾಮಗಳ ಭಕ್ತರು ಈ ಗುಗ್ಗಳ ಮಹೋತ್ಸವದಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ