ಆ್ಯಪ್ನಗರ

ಸಿದ್ದರಾಮೇಶ್ವರ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

ಹುಬ್ಬಳ್ಳಿ: ತಾಲೂಕು ಆಡಳಿತ ವತಿಯಿಂದ ಜ.14ರಂದು ಅದ್ಧೂರಿಯಾಗಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲು ನಗರದ ಮಿನಿವಿಧಾನ ಸೌಧ ಸಭಾಂಗಣದಲ್ಲಿನಡೆದ ಪೂರ್ವಭಾವಿ ಸಭೆಯಲ್ಲಿನಿರ್ಧರಿಸಿತು.

Vijaya Karnataka 13 Jan 2020, 5:00 am
ಹುಬ್ಬಳ್ಳಿ: ತಾಲೂಕು ಆಡಳಿತ ವತಿಯಿಂದ ಜ.14ರಂದು ಅದ್ಧೂರಿಯಾಗಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲು ನಗರದ ಮಿನಿವಿಧಾನ ಸೌಧ ಸಭಾಂಗಣದಲ್ಲಿನಡೆದ ಪೂರ್ವಭಾವಿ ಸಭೆಯಲ್ಲಿನಿರ್ಧರಿಸಿತು.
Vijaya Karnataka Web siddarameshwara jayanthi is a great celebrant
ಸಿದ್ದರಾಮೇಶ್ವರ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ


ತಹಸೀಲ್ದಾರ್‌ ಶಶಿಧರ ಮಾಡ್ಯಾಳ ಮಾತನಾಡಿ, ಅಂದು ಬೆಳಗ್ಗೆ 10ಕ್ಕೆ ಮಿನಿವಿಧಾನ ಸೌಧ ತಾಲೂಕು ಸಭಾಂಗಣದಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಜಯಂತಿ ಆಚರಣೆಗೆ ಚಾಲನೆ ನೀಡಲಾಗುವುದು. ಸಿದ್ದರಾಮೇಶ್ವರ ಕುರಿತು ಉಪನ್ಯಾಸ ಏರ್ಪಡಿಸಲಾಗುವುದು ಎಂದರು.

12ನೇ ಶತಮಾನದಲ್ಲಿಬಸವಣ್ಣನ ನೇತೃತ್ವದಲ್ಲಿಜರುಗಿದ ಸಾಮಾಜಿಕ ಕ್ರಾಂತಿಯಲ್ಲಿಶಿವಯೋಗಿ ಸಿದ್ಧರಾಮೇಶ್ವರ ಕೊಡುಗೆ ಅಪಾರ. ಅಲ್ಲಮಪ್ರಭು ಹಾಗೂ ಚನ್ನಬಸವಣ್ಣನನ್ನು ಗುರುವಾಗಿ ಸ್ವೀಕರಿಸಿ ಇಷ್ಟಲಿಂಗ ಧರಿಸಿದ ಸಿದ್ದರಾಮರನ್ನು ಅನುಭವ ಮಂಟಪದಲ್ಲಿಶಿವಯೋಗಿ ಸಿದ್ಧರಾಮೇಶ್ವರ ಎಂದು ಕರೆಯಲಾಗುತ್ತಿತ್ತು. ಸಿದ್ಧರಾಮೇಶ್ವರ ರಚಿಸಿದ 2 ಸಾವಿರದಷ್ಟು ವಚನಗಳು ಲಭ್ಯವಿವೆ. ಸಿದ್ಧರಾಮೇಶ್ವರರ ತತ್ವ ಹಾಗೂ ಸಿದ್ದಾಂತ ಸಾರುವ ನಿಟ್ಟಿನಲ್ಲಿಜಯಂತಿ ಆಚರಿಸಲಾಗುತ್ತಿದೆ ಎಂದರು.

ಫೆ.11ರಂದು ನಗರದ ಇಂದಿರಾ ಗಾಜಿನ ಮನೆಯಲ್ಲಿಭೋವಿ ಸಮಾಜದ ವತಿಯಿಂದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಆಚರಿಸಲಾಗುವುದು. ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭಾಗವಹಿಸುವರು ಎಂದು ಸಮಾಜದ ಮುಖಂಡ ಸಿದ್ದಪ್ಪ ಒಡೆಯರ್‌ ತಿಳಿಸಿದರು.

ತಾಪಂ ಇಓ ಎಂ.ಎಂ.ಸವದತ್ತಿ, ಸಹಾಯಕ ನಿರ್ದೇಶಕ ಗಂಗಾಧರ ಕಂದಕೋರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ, ವೈದ್ಯಾಧಿಕಾರಿ ಆರ್‌.ಎಸ್‌.ಹಿತ್ತಲಮಿನಿ, ಶಿವು ಹಿರೇಕೇರೂರು, ಮಾಲತೇಶ ಕೃಷ್ಣಪ್ಪ, ಶಿವಾನಂದ ಕನ್ನೂರ, ಲಕ್ಷತ್ರ್ಮಣ ಬಿಳಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ