ಆ್ಯಪ್ನಗರ

ರಜತ ಮಹೋತ್ಸವ ಸಮಾರಂಭ

ಧಾರವಾಡ: ನಗರದ ಶ್ರೀ ಮೃತ್ಯುಂಜಯ ಅರ್ಬನ್‌ ಕೋ ಆಫ್‌ ಕ್ರೆಡಿಟ್‌ ಸೊಸೈಟಿಯ ರಜತ ಮಹೋತ್ಸವ ಸಮಾರಂಭ ಜ.19ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಆಲೂರ ವೆಂಕಟರಾವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಸಿ.ಎಸ್‌.ಪಾಟೀಲ ತಿಳಿಸಿದರು.

Vijaya Karnataka 18 Jan 2020, 5:00 am
ಧಾರವಾಡ: ನಗರದ ಶ್ರೀ ಮೃತ್ಯುಂಜಯ ಅರ್ಬನ್‌ ಕೋ ಆಫ್‌ ಕ್ರೆಡಿಟ್‌ ಸೊಸೈಟಿಯ ರಜತ ಮಹೋತ್ಸವ ಸಮಾರಂಭ ಜ.19ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಆಲೂರ ವೆಂಕಟರಾವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಸಿ.ಎಸ್‌.ಪಾಟೀಲ ತಿಳಿಸಿದರು.
Vijaya Karnataka Web silver jubilee ceremony
ರಜತ ಮಹೋತ್ಸವ ಸಮಾರಂಭ


ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, 1992 ರಲ್ಲಿವೀರಶೈವ ಜಾಗೃತ ಸಮಿತಿಯ ಅಡಿಯಲ್ಲಿಆಶ್ರಯ ಅರ್ಬನ್‌ ಕೋ.ಆಫ್‌ ಕ್ರೆಡಿಟ್‌ ಸೊಸೈಟಿಯ ಎಂಬ ಹೆಸರಿನೊಂದಿಗೆ ಆರಂಭವಾದ ಸೊಸೈಟಿ ನಂತರ ಶ್ರೀ ಮೃತ್ಯುಂಜಯ ಅರ್ಬನ್‌ ಕೋ ಆಫ್‌ ಕ್ರೆಡಿಟ್‌ ಸೊಸೈಟಿಯ ಎಂದು ಮರು ನಾಮಕರಣಗೊಂಡಿತು ಎಂದರು.

ಜ. 19ರಂದು ಹ್ಯಾಪಿ ಲೀವಿಂಗ್‌ ಫೌಂಡೇಶನ್‌ದ ಎ.ಪಿ.ಪಾಟೀಲ ಗುರೂಜಿ ಸಾನ್ನಿಧ್ಯ ವಹಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೃತ್ಯುಂಜಯ ಬೆಳಕು ಎಂಬ ಸ್ಮರಣ ಸಂಚಿಕೆ, ಸಚಿವ ಜಗದೀಶ ಶೆಟ್ಟರ್‌ ಠೇವಣಿ ಪತ್ರ ಮತ್ತು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ನಾಮಫಲಕ ಅನಾವರಣಗೊಳಿಸುವರು ಎಂದರು.

ಸೊಸೈಟಿ ಆರಂಭಕ್ಕೆ ಪ್ರೇರಣೆ ನೀಡಿದ ನಿವೃತ್ತ ಪೊಲೀಸ್‌ ಅಧಿಕಾರಿ ಜ್ಯೋತಿಪ್ರಕಾಶ ಮಿರ್ಜಿ ಹಾಗೂ ಸೊಸೈಟಿಯ ಹಿಂದಿನ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿಸನ್ಮಾನಿಸಲಾಗುವುದು ಎಂದರು.

ನಾಗರಾಜ ಗುರಿಕಾರ, ಬಸವರಾಜ ಕಪಲಿ, ಬಿ.ಎಲ್‌.ಶಿವಳ್ಳಿ, ಈಶ್ವರಗೌಡ ಪಾಟೀಲ, ಶಿವಾನಂದ ಭಾವಿಕಟ್ಟಿ, ಎಂ.ವಿ.ಹದ್ಲಿಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ