ಆ್ಯಪ್ನಗರ

ರಜತ ಮಹೋತ್ಸವ ಇಂದು

ಹುಬ್ಬಳ್ಳಿ: ನಗರದ ಸಹಸ್ರಾರ್ಜುನ ಸೇವಾ ಕಲ್ಯಾಣ ಮಹಿಳಾ ಮಂಡಳದ ರಜತ ಮಹೋತ್ಸವ ಹಾಗೂ ಸಹಸ್ರಾರ್ಜುನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 23ನೇ ವಾರ್ಷಿಕೋತ್ಸವ ಸಮಾರಂಭ ಡಿ. 29ರಂದು ಬೆಳಗ್ಗೆ 11ಕ್ಕೆ ಇಲ್ಲಿಯ ಶಬರಿನಗರದ ಎಸ್‌ಎಸ್‌ಕೆ ಕಲ್ಯಾಣಮಂಟಪದಲ್ಲಿನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರಾಜಶ್ರೀ ಜಡಿ ಹೇಳಿದರು.

Vijaya Karnataka 29 Dec 2019, 5:00 am
ಹುಬ್ಬಳ್ಳಿ: ನಗರದ ಸಹಸ್ರಾರ್ಜುನ ಸೇವಾ ಕಲ್ಯಾಣ ಮಹಿಳಾ ಮಂಡಳದ ರಜತ ಮಹೋತ್ಸವ ಹಾಗೂ ಸಹಸ್ರಾರ್ಜುನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 23ನೇ ವಾರ್ಷಿಕೋತ್ಸವ ಸಮಾರಂಭ ಡಿ. 29ರಂದು ಬೆಳಗ್ಗೆ 11ಕ್ಕೆ ಇಲ್ಲಿಯ ಶಬರಿನಗರದ ಎಸ್‌ಎಸ್‌ಕೆ ಕಲ್ಯಾಣಮಂಟಪದಲ್ಲಿನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರಾಜಶ್ರೀ ಜಡಿ ಹೇಳಿದರು.
Vijaya Karnataka Web silver jubilee today
ರಜತ ಮಹೋತ್ಸವ ಇಂದು


ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಅಂದು ನಡೆಯುವ ಕಾರ್ಯಕ್ರಮದಲ್ಲಿಎರಡೆತ್ತಿನ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಹಾಗೂ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಡಾ. ವಿಜಯ ಸಂಕೇಶ್ವರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು, ಎಸ್‌ಎಸ್‌ಕೆ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ ಮೆಹರವಾಡೆ ಹಳೇ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗ್ಗೆ 10.30ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ರಚಿತಗೊಂಡ ಕರಕುಶಲ ಮ್ಯಾಗ್ಝೀನ್‌ ಪ್ರದರ್ಶನವನ್ನು ಮಾಜಿ ಶಾಸಕ ಅಶೋಕ ಕಾಟವೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಸ್‌ಎಸ್‌ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ, ಮಜೇಥಿಯಾ ಫೌಂಡೇಶನ್‌ನ ಜೀತೆಂದ್ರ ಮಜೇಥಿಯಾ, ಸತೀಶಸಾ ಮೆಹರವಾಡೆ, ವಿಠ್ಠಲಸಾ ಲದವಾ, ರಮೇಶ ಭಾಪಣಾ, ಹರಿದಾಸ ಎನ್‌. ಶೆಟ್ಟಿ ಆಗಮಿಸಲಿದ್ದು, ಹನುಮಂತಸಾ ಪಟ್ಟಣ, ಶಶಿಕಲಾ ಪವಾರ ಭಾಗವಹಿಸಲಿದ್ದಾರೆ ಎಂದರು.

ಸಮಾನ ಮನಸ್ಕ ಹಾಗೂ ಮಧ್ಯಮ ವರ್ಗದ ಮಹಿಳೆಯರು ಸೇರಿ ರಚಿಸಿದ ಮಹಿಳಾ ಮಂಡಳ 25 ವರ್ಷ ಪೂರೈಸಿದೆ. ಇದೇ ಮಹಿಳಾ ಮಂಡಳದಿಂದ ಬಡ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿಆರಂಭವಾದ ಶಾಲೆ ಕೇವಲ 13 ಮಕ್ಕಳನ್ನು ಹೊಂದಿತ್ತು. ಸದ್ಯ 300 ವಿದ್ಯಾರ್ಥಿಗಳು ಸಂಸ್ಥೆಯಲ್ಲಿವ್ಯಾಸಂಗ ಮಾಡುತ್ತಿದ್ದಾರೆ. ಜತೆಗೆ ನೂತನ ಶಾಲೆ ಆರಂಭಿಸಿದ್ದು ಅದು ಪ್ರಥಮ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿವಿಜಯಲಕ್ಷ್ಮೇ ಕಬಾಡೆ, ಅನುರಾಧಾ ಬಾಕಳೆ, ಶಶಿಕಲಾ ಪವಾರ, ಕುಸುಮ್‌ ಮಲಜಿ, ಅನಿತಾ ರಾಯಭಾಗಿ, ಸುಮನ್‌ ಜರತಾರಘರ್‌, ಸುಶೀಲಾಬಾಯಿ, ಜಯಶ್ರೀ ಜರತಾರಘರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ