ಆ್ಯಪ್ನಗರ

ರೈತ ಜಾತ್ರೆಯಲ್ಲಿ ‘ಸಿರಿ ಧಾನ್ಯ’ ಧ್ಯಾನ

ಧಾರವಾಡ :ಸೂಕ್ತ ಬೆಲೆಯೂ ಸಿಗದೇ, ಉತ್ಪಾದನೆ ಕುಸಿತದಿಂದಾಗಿ ನೇಪಥ್ಯಕ್ಕೆ ಸರಿದಿದ್ದ ಸಿರಿಧಾನ್ಯ ಕೃಷಿ ಇದೀಗ ಮತ್ತೆ ಪ್ರವರ್ಧಮಾನಕ್ಕೆ ಬಂದಿದ್ದು, ಕೃಷಿ ಮೇಳದಲ್ಲಿ ಈ ಬಗ್ಗೆ ರೈತರನ್ನು ಮಾತ್ರವಲ್ಲ ಗ್ರಾಹಕರನ್ನೂ ಪ್ರೇರೆಪಿಸುವ ಕೆಲಸ ನಡೆದಿದೆ. ಕೃಷಿ ಮೇಳದ ಕೃಷಿ ತಂತ್ರಜ್ಞಾನ ಮಳಿಗೆಯಲ್ಲಿ ಕೃಷಿ ವಿವಿಯ ಆಹಾರ ವಿಜ್ಞಾನ ಮತ್ತು ಪೋಷಣೆ ಹಾಗೂ ಬೀಜ ಮತ್ತು ಆಹಾರ ತಂತ್ರಜ್ಞಾನದ ವಿಭಾಗಗಳಿಂದ (ಸಮುದಾಯ ವಿಜ್ಞಾನ) ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

Vijaya Karnataka 24 Sep 2018, 5:00 am
ಧಾರವಾಡ :ಸೂಕ್ತ ಬೆಲೆಯೂ ಸಿಗದೇ, ಉತ್ಪಾದನೆ ಕುಸಿತದಿಂದಾಗಿ ನೇಪಥ್ಯಕ್ಕೆ ಸರಿದಿದ್ದ ಸಿರಿಧಾನ್ಯ ಕೃಷಿ ಇದೀಗ ಮತ್ತೆ ಪ್ರವರ್ಧಮಾನಕ್ಕೆ ಬಂದಿದ್ದು, ಕೃಷಿ ಮೇಳದಲ್ಲಿ ಈ ಬಗ್ಗೆ ರೈತರನ್ನು ಮಾತ್ರವಲ್ಲ ಗ್ರಾಹಕರನ್ನೂ ಪ್ರೇರೆಪಿಸುವ ಕೆಲಸ ನಡೆದಿದೆ. ಕೃಷಿ ಮೇಳದ ಕೃಷಿ ತಂತ್ರಜ್ಞಾನ ಮಳಿಗೆಯಲ್ಲಿ ಕೃಷಿ ವಿವಿಯ ಆಹಾರ ವಿಜ್ಞಾನ ಮತ್ತು ಪೋಷಣೆ ಹಾಗೂ ಬೀಜ ಮತ್ತು ಆಹಾರ ತಂತ್ರಜ್ಞಾನದ ವಿಭಾಗಗಳಿಂದ (ಸಮುದಾಯ ವಿಜ್ಞಾನ) ರೈತರಿಗೆ ಮಾಹಿತಿ ನೀಡಲಾಗುತ್ತಿದೆ.
Vijaya Karnataka Web siri grain meditation at the farmers fair
ರೈತ ಜಾತ್ರೆಯಲ್ಲಿ ‘ಸಿರಿ ಧಾನ್ಯ’ ಧ್ಯಾನ


ಶ್ರಮ ಸಂಸ್ಕೃತಿಯಿಂದ ದೂರ ಉಳಿದ ಪರಿಣಾಮ ಹಾಗೂ ರೈತರಿಗೆ ಸೂಕ್ತ ಪ್ರೋತ್ಸಾಹ ಸಿಗದ ಕಾರಣ ಸಿರಿಧಾನ್ಯಗಳ ಬೆಳೆಗಳು ಅಳಿವಿನಂಚಿಗೆ ಬಂದದ್ದನ್ನು ಮನಗಂಡು ಈ ಬಾರಿ ಕೃಷಿ ಮೇಳದಲ್ಲಿ ಸಿರಿಧಾನ್ಯ ಬಳಸಿ,ಆರೋಗ್ಯ ಉಳಿಸಿ ಎಂಬ ಘೋಷವಾಕ್ಯದಿಂದ ಸಿರಿಧಾನ್ಯ ಬೆಳೆಗಳನ್ನು ಬೆಳೆಸಲು ಬೆಂಬಲ ನೀಡಲಾಗಿದೆ.

ಸಿರಿ ಧಾನ್ಯಗಳು:

ರಾಜ್ಯದಲ್ಲಿ ರಾಗಿ, ಸಾವಿ, ನವಣೆ,ಬರಗ, ಊದಲು,ಕೊರಲು, ಹಾರಕ ಎಂಬ ಏಳು ಬಗೆಯ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದ್ದು, ಸಿರಿಧಾನ್ಯದಲ್ಲಿ ಹೆಚ್ಚು ಪೋಷಕಾಂಶಗಳು ಇರುವ ಕಾರಣ ಮತ್ತೆ ಜನರು ಇವುಗಳತ್ತ ಮಾರುಹೋಗುತ್ತಿದ್ದಾರೆ.

ಸಿರಿಧಾನ್ಯಗಳ ಉಪಯೋಗ:

ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಜನರು ಒತ್ತಡದ ಪರಿಸ್ಥಿತಿಯಲ್ಲಿ ಮಧುಮೇಹ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದು ಅಂತವರು ತಮ್ಮ ಆಹಾರದಲ್ಲಿ ಸಿರಿಧಾನ್ಯ ಬಳಸಿದರೆ ಮಧುಮೇಹ, ಕೊಲೆಸ್ಟ್ರಾಲ್‌, ಕ್ಯಾನ್ಸರ್‌, ಮಲಬದ್ಧತೆæ, ಕರಳು ಸಂಬಂಧಿರೋಗ ಸೇರಿದಂತೆ ಹೃದ್ರೋಗದಿಂದ ಪಾರಾಗಬಹುದು.

ಗಮನ ಸೆಳೆದ ಸಿರಿಧಾನ್ಯ ಆಹಾರಗಳು:

ಕೃಷಿ ಮೇಳದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಗೊಂಬೆ ಹಾಗೂ ರೈತನ ಕಲಾಕೃತಿ ಎಲ್ಲರ ಗಮನ ಸೆಳೆದಿದೆ. ಅಲ್ಲದೇ ಸಿರಿಧಾನ್ಯಗಳಿಂದ ತಯಾರಿಸಿರುವ ತರೆವಾರಿ ಬಿಸ್ಕೆಟ್‌ಗಳು, ಶಾವಿಗೆ, ವಿವಿಧ ಸಿಹಿಯಾದ ಉಂಡೆಗಳು ಗಮನ ಸೆಳೆದಿವೆ.

ಸಿರಿ ಧಾನ್ಯ ಸಂಸ್ಕೃರಣೆ

ರಾಜ್ಯದಲ್ಲಿ ಬೆಳೆದ ಬಹುಭಾಗ ಸಿರಿಧಾನ್ಯ ಬೆಳೆಗಳು ಅಹ್ಮದಾಬಾದ ಹಾಗೂ ಮಹಾರಾಷ್ಟ್ರದ ನಾಶಿಕ್‌ ಪ್ರದೇಶಗಳಿಗೆ ನೀಡಲಾಗುತ್ತಿದ್ದು ಅಲ್ಲಿಂದ ಸಿದ್ಧಗೊಂಡ ಸಿರಿಧಾನ್ಯಗಳು ಮಾರುಕಟ್ಟೆಗೆ ಬರುತ್ತವೆ. ಸದ್ಯ ಹಾವೇರಿಯ ಸಂಗೂರಿನಲ್ಲಿ ನೂತನ ಸಿರಿಧಾನ್ಯ ಘಟಕ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲಿಯೇ ಸಿರಿಧಾನ್ಯಗಳು ಸಿದ್ಧಗೊಳ್ಳಲಿವೆ ಎಂದು ಕೃಷಿ ವಿವಿಯ ಡಾ.ಕಸ್ತೂರಬಾ.ವಿ, ಡಾ.ಹೇಮಲತಾ ಎನ್‌ ಮಾಹಿತಿ ನೀಡಿದರು.

7.5 ಲಕ್ಷ ಹೆಕ್ಟೆರ್‌ನಲ್ಲಿ ಸಿರಿಧಾನ್ಯ

ಸಿರಿಧಾನ್ಯಗಳಲ್ಲಿ ಉತ್ತಮ ಪೋಷಕಾಂಶ ಸಿಗುವ ಕಾರಣ ಮತ್ತೆ ಈ ಬೆಳೆಗಳಿಗೆ ಬೇಡಿಕೆ ಬಂದಿದೆ. ಸದ್ಯ ರಾಜ್ಯದಲ್ಲಿ 24 ಸಾವಿರ ಹೆಕ್ಟರ್‌ನಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದು, ರಾಗಿ ಸೇರಿಸಿದರೆ 7.5 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ರೈತರೇ ಒಗ್ಗಟ್ಟಾಗಿ 2.5 ಲಕ್ಷ ರೂ.ಗಳಲ್ಲಿ ಸಣ್ಣ ಯೂನಿಟ್‌ ಮಾಡಿಕೊಂಡು ಉತ್ತಮವಾದ ಆದಾಯ ಗಳಿಸಬಹುದು ಎಂದು ಕೃಷಿ ವಿವಿಯ ಅನುವಂಶಿಯತೆ ಮತ್ತು ತಳಿ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕ ಡಾ.ನಾಗಪ್ಪ ಎಚ್‌. ಪತ್ರಿಕೆಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ