ಆ್ಯಪ್ನಗರ

ಹಾವು ಹಿಡಿದು ಆಸ್ಪತ್ರೆಗೆ ಬಂದ ಸಂಬಂಧಿಕರು

ಹುಬ್ಬಳ್ಳಿ :ಹಾವು ಕಚ್ಚಿಸಿಕೊಂಡ ಮಹಿಳೆಯೊಬ್ಬಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದರೆ, ವೈದ್ಯರು ಹಾವು ತಂದರೆ ಮಾತ್ರ ಚಿಕಿತ್ಸೆ ಎಂದು ಹೇಳಿದ್ದಕ್ಕೆ ಕೊನೆಗೆ ಸಂಬಂಧಿಕರು ಹಾವನ್ನು ತಂದು ಚಿಕಿತ್ಸೆ ಪಡೆದ ಘಟನೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸೋಮವಾರ ನಡೆದಿದೆ.

Vijaya Karnataka 17 Apr 2018, 5:00 am
ಹುಬ್ಬಳ್ಳಿ :ಹಾವು ಕಚ್ಚಿಸಿಕೊಂಡ ಮಹಿಳೆಯೊಬ್ಬಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದರೆ, ವೈದ್ಯರು ಹಾವು ತಂದರೆ ಮಾತ್ರ ಚಿಕಿತ್ಸೆ ಎಂದು ಹೇಳಿದ್ದಕ್ಕೆ ಕೊನೆಗೆ ಸಂಬಂಧಿಕರು ಹಾವನ್ನು ತಂದು ಚಿಕಿತ್ಸೆ ಪಡೆದ ಘಟನೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸೋಮವಾರ ನಡೆದಿದೆ.
Vijaya Karnataka Web snake and relatives who came to the hospital
ಹಾವು ಹಿಡಿದು ಆಸ್ಪತ್ರೆಗೆ ಬಂದ ಸಂಬಂಧಿಕರು


ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಾಡಂಬಿ ಗ್ರಾಮದ ನಿವಾಸಿ ಅಕ್ಕಮ್ಮಾ ಕಾಳೆ(35) ಎಂಬುವರಿಗೆ ಮಲಗಿದ ವೇಳೆಯಲ್ಲಿ ಹಾವು ಕಚ್ಚಿದೆ. ಹಾವು ಕಡಿತದಿಂದ ಅಸ್ವಸ್ಥಗೊಂಡ ಆಕೆಯನ್ನು ಚಿಕಿತ್ಸೆಗಾಗಿ ಕಿಮ್ಸ್‌ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ, ಕಿಮ್ಸ್‌ ವೈದ್ಯರು ಚಿಕಿತ್ಸೆ ನೀಡಬೇಕೆಂದರೆ, ನಿಮಗೆ ಯಾವ ಹಾವು ಕಚ್ಚಿದೆಯೋ ಆ ಹಾವು ತರಬೇಕು. ಅಲ್ಲಿಯವರೆಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ವೈದ್ಯರು ಹೇಳಿದ ನಿರ್ದೇಶನದಂತೆ ಅಕ್ಕಮ್ಮಾ ಕಾಳೆ ಕುಟುಂಬದ ಸದಸ್ಯರು, ಕುಂದಗೋಳದಲ್ಲಿದ್ದ ಉರಗ ತಜ್ಞ ಅಡಿವೆಪ್ಪಾ ಅವರನ್ನು ಕರೆದೊಯ್ದು ಕಚ್ಚಿದ ಹಾವನ್ನು ಹಿಡಿದು ಬಾಟಲ್‌ವೊಂದರಲ್ಲಿ ಹಾಕಿಕೊಂಡು ಕಿಮ್ಸ್‌ಗೆ ಬಂದಿದ್ದರು. ಜೀವಂತ ಹಾವನ್ನು ಹಿಡಿದು ಕಿಮ್ಸ್‌ಗೆ ಬಂದ ಸಂದರ್ಭದಲ್ಲಿ ವೈದ್ಯರು ಕಕ್ಕಾಬಿಕ್ಕಿಯಾಗಿದ್ದಾರೆ. ಹಾವನ್ನು ಹಿಡಿದು ಆಸ್ಪತ್ರೆ ಬರುತ್ತಿದ್ದಂತೆ ನಾವು ಹಾಗೆ ಹೇಳಿಯೇ ಇಲ್ಲ ಎಂದು ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಅಲ್ಲದೆ, ಚಿಕಿತ್ಸೆ ನೀಡಿದ್ದೇವೆಂದು ಸಮರ್ಥಿಸಿಕೊಳ್ಳಲು ಮುಂದಾದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬಸ್ಥರು, ''ಏನು ಅರಿಯದ ನಮ್ಮನ್ನು ವೈದ್ಯರು ಯಾಮಾರಿಸಿ ತಮಾಷೆ ನೋಡಿದ್ದಾರೆ. ಸಾಕಷ್ಟು ನೋವಿನ ಮಧ್ಯೆ ಅಕ್ಕಮ್ಮಾಳನ್ನು ಆಸ್ಪತ್ರೆಗೆ ದಾಖಲಿಸಿದ್ದೇವು. ಆವಾಗಲೇ ಇಷ್ಟು ಮಾಡಿದ್ದರೆ ವೈದ್ಯರಿಗೆ ಏನಾಗುತ್ತಿತ್ತು'' ಎಂದು ಕಿಮ್ಸ್‌ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉರಗ ತಜ್ಞ ಅಡಿವೆಪ್ಪಾ ಹಿಡಿದ ಹಾವನ್ನು ಕಾಡಿನಲ್ಲಿ ಬಿಟ್ಟು ಬಂದರು.

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಒಂದಿಲ್ಲೊಂದು ಅವಾಂತರ ಸೃಷ್ಟಿಸಿ ಸುದ್ದಿಯಲ್ಲಿರುತ್ತದೆ. ಅದರಂತೆ ಸೋಮವಾರವೂ ಕಿಮ್ಸ್‌ ಆಸ್ಪತ್ರೆಯ ವೈದ್ಯರು ಮಾಡಿದ ಎಡವಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ