ಆ್ಯಪ್ನಗರ

ಮಣ್ಣಿನ ವಿಧ ಕೃಷಿ ಬೆಳೆಗಳಿಗೆ ಸಹಕಾರಿ

ಧಾರವಾಡ : ಭಾರತೀಯ ಹವಾಮಾನ ಮತ್ತು ವೈವಿಧ್ಯಮಯ ಮಣ್ಣಿನ ವಿಧಗಳು ಕೃಷಿ ಬೆಳೆಗಳಿಗೆ ಸಹಕಾರಿಯಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಬೆಳೆವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಚಿದಾನಂದ ಮನಸೂರ ಅಭಿಪ್ರಾಯಪಟ್ಟರು.

Vijaya Karnataka 17 Jun 2019, 5:00 am
ಧಾರವಾಡ : ಭಾರತೀಯ ಹವಾಮಾನ ಮತ್ತು ವೈವಿಧ್ಯಮಯ ಮಣ್ಣಿನ ವಿಧಗಳು ಕೃಷಿ ಬೆಳೆಗಳಿಗೆ ಸಹಕಾರಿಯಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಬೆಳೆವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಚಿದಾನಂದ ಮನಸೂರ ಅಭಿಪ್ರಾಯಪಟ್ಟರು.
Vijaya Karnataka Web DRW-16MAILAR07
ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿ ನಡೆದ ರೈತರ ಆತ್ಮಹತ್ಯೆ ಒಂದು ಅವಲೋಕ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಚಿದಾನಂದ ಮನಸೂರ ಮಾತನಾಡಿದರು.


ನಗರದ ಕರ್ನಾಟಕ ಕಾಲೇಜಿನ ಗ್ಯಾಲರಿ ಸಭಾಂಗಣದಲ್ಲಿ ಕವಿವಿ ವ್ಯಾಪ್ತಿಯ ಕಾಲೇಜುಗಳ ಸಮಾಜಶಾಸ್ತ್ರ ವಿಷಯ ಪ್ರಾಧ್ಯಾಪಕರ ಸಂಘದಿಂದ ಹಮ್ಮಿಕೊಂಡ ರೈತರ ಆತ್ಮಹತ್ಯೆ ಒಂದು ಅವಲೋಕ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಹವಾಮಾನಕ್ಕೆ ತಕ್ಕಂತೆ ಇಂದಿನ ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದರಿಂದ ರೈತರಿಗೆ ಅನುಕೂಲವಾಗಲಿದೆ. ಭಾರತದ ಕೃಷಿಗೆ ಕಳೆ ಕೀಟ ಮತ್ತು ರೋಗಾಣುವಿನ ಮೂಲಕ ಅನೇಕ ಬೆಳೆಗಳಿಗೆ ಹಾನಿಯಾಗುತ್ತಿದೆ. ಭಾರತದಲ್ಲಿ 370 ಮಿಲಿಯನ್‌ ಹೆಕ್ಟೆರ್‌ ಉತ್ತಮ ಕೃಷಿ ಭೂಮಿ ಇದ್ದು, ಭಾರತದಲ್ಲಿ ಮೂರು ಹಂಗಾಮುಗಳಲ್ಲಿ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದರು.

ಇಂದಿನ ಮಾಧ್ಯಮಗಳು ವಿಜ್ಞಾನ ಕೃಷಿ ಪದ್ದತಿ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆ. ಭಾರತದಲ್ಲಿ ಅತಿ ಹೇರಳವಾದ ನೈಸರ್ಗಿಕ ಸಂಪನ್ಮೂಲ ಹೊಂದಿದ್ದು, ವರ್ಷದಲ್ಲಿ ಎರಡು ಮಾನಸೂನ್‌ ಮಳೆಯು ಕೇವಲ ಭಾರತದಲ್ಲಿ ಆಗುತ್ತದೆ ಎಂದರು.

ಡಾ.ಬಿ.ಎಫ್‌.ಚಾಕಲಬ್ಬಿ ಮಾತನಾಡಿ, ಭಾರತದ ದೇಶದಲ್ಲಿ ಅತಿ ಶೋಷಣೆಗೆ ಒಳಗಾದವನು ರೈತ. ಪರಿಸರದ ಜೂಜಾಟದ ಮೂಲಕ ರೈತನು ಶೋಷಣೆ ಅನುಭವಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸರಕಾರಗಳು ವಿಶೇಷ ಯೋಜನೆಗಳ ಮೂಲಕ ಈ ಅಸಂಘಟಿತ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಇದೇ ವೇಳೆ ಸಾಧನೆ ಮಾಡಿದ ಶಿಕ್ಷ ಕರನ್ನು ಸನ್ಮಾನಿಸಲಾಯಿತು. ಪ್ರೊ. ಎಚ್‌.ಡಿ.ದೇವಿಹೊಸೂರ ಅಧ್ಯಕ್ಷ ತೆ ವಹಿಸಿದ್ದರು. ಪ್ರೊ. ಜಿ.ಆರ್‌.ಸೂಳಿಭಾವಿ, ಪ್ರೊ.ವಿ.ಎನ್‌. ಜಮಖಂಡಿ, ಡಾ. ಎನ್‌.ಬಿ.ಸಂಗಳದ, ಡಾ. ಸಿ.ಎಸ್‌. ಕುಮ್ಮೂರ, ಡಾ. ಎಂ.ಹೆಚ್‌.ಹೆಬ್ಬಾಳ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ