ಕೊರೊನಾ ಸಂಕಷ್ಟಕ್ಕೆ ಸೈನಿಕನ ಸೇವೆ
ಭಾರತೀಯ ಸೇನೆಯಲ್ಲಿ ಸುಬೇದಾರ ಆಗಿರುವ ತಾಲೂಕಿನ ಶಿರಗುಪ್ಪಿ ಗ್ರಾಮದ ಪರಶುರಾಮ್ ದಿವಾನದ್ ಅವರೇ ಕೊರೊನಾ ಸಂತ್ರಸ್ತರಿಗೆ ತಮ್ಮ ದುಡಿಮೆಯ ದುಡ್ಡಿನಿಂದಲೇ ಸಹಾಯ ಮಾಡುತ್ತಿರುವ ಯೋಧ. ಮನೆ ಮನೆಗಳಿಗೆ ಉಚಿತ ಮಾಸ್ಕ್ ಮತ್ತು ದಿನಸಿ ಕಿಟ್ಗಳನ್ನು ವಿತರಿಸುತ್ತಿದ್ದಾರೆ.
Vijaya Karnataka Web 23 May 2020, 5:42 pm
ಹುಬ್ಬಳ್ಳಿ: ಭಾರತೀಯ ಸೇನೆಯ ಯೋಧರೊಬ್ಬರು ಪರ ರಾಜ್ಯದ ಕರ್ತವ್ಯದಲ್ಲಿ ಇದ್ದುಕೊಂಡೇ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರ ನೆರವಿಗೆ ನಿಂತು ದೇಶ ರಕ್ಷಣೆಯ ಜತೆಗೆ ಸಮಾಜ ಸೇವೆ ತೊಡಗಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ.
ಭಾರತೀಯ ಸೇನೆಯಲ್ಲಿ ಸುಬೇದಾರ ಆಗಿರುವ ತಾಲೂಕಿನ ಶಿರಗುಪ್ಪಿ ಗ್ರಾಮದ ಪರಶುರಾಮ್ ದಿವಾನದ್ ಅವರೇ ಕೊರೊನಾ ಸಂತ್ರಸ್ತರಿಗೆ ತಮ್ಮ ದುಡಿಮೆಯ ದುಡ್ಡಿನಿಂದಲೇ ಸಹಾಯ ಮಾಡುತ್ತಿರುವ ಯೋಧ. ಮನೆ ಮನೆಗಳಿಗೆ ಉಚಿತ ಮಾಸ್ಕ್ ಮತ್ತು ದಿನಸಿ ಕಿಟ್ಗಳನ್ನು ವಿತರಿಸುತ್ತಿದ್ದಾರೆ.
ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿರುವ ಪರಶುರಾಮ್ ಅವರು, ತಮ್ಮ ಸ್ನೇಹಿತರ ಮೂಲಕ ತವರು ನೆಲದ ಜನರ ಸೇವೆ ಮಾಡುತ್ತಿದ್ದಾರೆ. ಇವರ ನಿರ್ದೇಶನದಂತೆ ಅವರ ಎಲ್ಲಾ ಸ್ನೇಹಿತರ ಬಳಗ ಬಡವರು ಮತ್ತು ನಿರ್ಗತಿಕರ ನೆರವಿಗೆ ನಿಂತಿದೆ. ಯೋಧ ಪರಶುರಾಮ್ ಅವರು ತಮಗೆ ಬರುವ ಸಂಬಳದ ಇಂತಿಷ್ಟು ಭಾಗವನ್ನು ಜನರ ಸೇವೆಗಾಗಿ ಮುಡಿಪಿಟ್ಟಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಯೋಧ ತನ್ನ ಸ್ವಂತ ಖರ್ಚಿನಲ್ಲಿಯೇ 20 ಸಾವಿರ ಮಾಸ್ಕ್ ಮತ್ತು ಆಹಾರದ ಕಿಟ್ಗಳನ್ನು ಪೂರೈಕೆ ಮಾಡಿದ್ದಾರೆ.
ವಿಶೇಷವಾಗಿ ಪರಶುರಾಮ ಅವರು ಖಾದಿ ಮಾಸ್ಕ್ಗಳ ತಯಾರಿಕೆಗೆ ಆದ್ಯತೆ ಕೊಟ್ಟಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಕಂಗೆಟ್ಟಿದ್ದ ಖಾದಿ ಗ್ರಾಮೋದ್ಯೋಗದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಿದ್ದಾರೆ. ಅಲ್ಲದೇ, ಬಟ್ಟೆ ಹೊಲೆಯುವ ಮಹಿಳೆಯರಿಗೆ ಮಾಸ್ಕ್ ಸಿದ್ಧಪಡಿಸಲು ತಿಳಿಸಿ ಸಂಬಳ ಸಹ ನೀಡುವ ಮೂಲಕ ನಿರುದ್ಯೋಗ ಮತ್ತು ಲಾಕ್ ಡೌನ್ ಸಂಕಷ್ಟಕ್ಕೆ ನೆರವಾಗಿದ್ದಾರೆ.
ಭಾರತೀಯ ಸೇನೆಯಲ್ಲಿ ಸುಬೇದಾರ ಆಗಿರುವ ತಾಲೂಕಿನ ಶಿರಗುಪ್ಪಿ ಗ್ರಾಮದ ಪರಶುರಾಮ್ ದಿವಾನದ್ ಅವರೇ ಕೊರೊನಾ ಸಂತ್ರಸ್ತರಿಗೆ ತಮ್ಮ ದುಡಿಮೆಯ ದುಡ್ಡಿನಿಂದಲೇ ಸಹಾಯ ಮಾಡುತ್ತಿರುವ ಯೋಧ. ಮನೆ ಮನೆಗಳಿಗೆ ಉಚಿತ ಮಾಸ್ಕ್ ಮತ್ತು ದಿನಸಿ ಕಿಟ್ಗಳನ್ನು ವಿತರಿಸುತ್ತಿದ್ದಾರೆ.
ಕೊರೊನಾ ನಿಯಂತ್ರಿಸಲು ಹೇರಿದ್ದ ಲಾಕ್ ಡೌನ್ ಬಡವರು, ನಿರ್ಗತಿಕರು, ದುಡಿಯುವ ಮತ್ತು ಮಧ್ಯಮ ವರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಅವರ ನೋವಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ನಾನು ಕರ್ತವ್ಯದಲ್ಲಿದ್ದರೂ, ನಮ್ಮ ಸ್ನೇಹಿತ ವಲಯ ಹಳ್ಳಿ, ಸ್ಲಂ ಸೇರಿದಂತೆ ನಗರದೆಲ್ಲೆಡೆ ತಿರುಗಾಡಿ ಸಹಾಯ ಮಾಡುತ್ತಿದ್ದಾರೆ. ಅದಕ್ಕೆ ಪೂರಕ ಸಹಕಾರ ನೀಡಲಾಗುತ್ತಿದೆ.
ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿರುವ ಪರಶುರಾಮ್ ಅವರು, ತಮ್ಮ ಸ್ನೇಹಿತರ ಮೂಲಕ ತವರು ನೆಲದ ಜನರ ಸೇವೆ ಮಾಡುತ್ತಿದ್ದಾರೆ. ಇವರ ನಿರ್ದೇಶನದಂತೆ ಅವರ ಎಲ್ಲಾ ಸ್ನೇಹಿತರ ಬಳಗ ಬಡವರು ಮತ್ತು ನಿರ್ಗತಿಕರ ನೆರವಿಗೆ ನಿಂತಿದೆ. ಯೋಧ ಪರಶುರಾಮ್ ಅವರು ತಮಗೆ ಬರುವ ಸಂಬಳದ ಇಂತಿಷ್ಟು ಭಾಗವನ್ನು ಜನರ ಸೇವೆಗಾಗಿ ಮುಡಿಪಿಟ್ಟಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಯೋಧ ತನ್ನ ಸ್ವಂತ ಖರ್ಚಿನಲ್ಲಿಯೇ 20 ಸಾವಿರ ಮಾಸ್ಕ್ ಮತ್ತು ಆಹಾರದ ಕಿಟ್ಗಳನ್ನು ಪೂರೈಕೆ ಮಾಡಿದ್ದಾರೆ.
ವಿಶೇಷವಾಗಿ ಪರಶುರಾಮ ಅವರು ಖಾದಿ ಮಾಸ್ಕ್ಗಳ ತಯಾರಿಕೆಗೆ ಆದ್ಯತೆ ಕೊಟ್ಟಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಕಂಗೆಟ್ಟಿದ್ದ ಖಾದಿ ಗ್ರಾಮೋದ್ಯೋಗದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಿದ್ದಾರೆ. ಅಲ್ಲದೇ, ಬಟ್ಟೆ ಹೊಲೆಯುವ ಮಹಿಳೆಯರಿಗೆ ಮಾಸ್ಕ್ ಸಿದ್ಧಪಡಿಸಲು ತಿಳಿಸಿ ಸಂಬಳ ಸಹ ನೀಡುವ ಮೂಲಕ ನಿರುದ್ಯೋಗ ಮತ್ತು ಲಾಕ್ ಡೌನ್ ಸಂಕಷ್ಟಕ್ಕೆ ನೆರವಾಗಿದ್ದಾರೆ.