ಆ್ಯಪ್ನಗರ

ಪರಿಹಾರ ವಿಳಂಬ: ಜಲಸಾರಿಗೆ ಕಚೇರಿ ಜಪ್ತಿ

ಧಾರವಾಡ : ರಸ್ತೆ ವಿಸ್ತರಣೆಗೆ ಸ್ವಾಧೀನ ಮಾಡಿಕೊಂಡು ಸಂತ್ರಸ್ತ ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಚೇರಿಯನ್ನು ಕೋರ್ಟ್‌ ಆದೇಶದ ಮೇರೆಗೆ ಮಂಗಳವಾರ ಜಪ್ತಿ ಮಾಡಿಕೊಳ್ಳಲಾಯಿತು.

Vijaya Karnataka 12 Dec 2018, 5:00 am
ಧಾರವಾಡ : ರಸ್ತೆ ವಿಸ್ತರಣೆಗೆ ಸ್ವಾಧೀನ ಮಾಡಿಕೊಂಡು ಸಂತ್ರಸ್ತ ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಚೇರಿಯನ್ನು ಕೋರ್ಟ್‌ ಆದೇಶದ ಮೇರೆಗೆ ಮಂಗಳವಾರ ಜಪ್ತಿ ಮಾಡಿಕೊಳ್ಳಲಾಯಿತು.
Vijaya Karnataka Web solution delay water supply office
ಪರಿಹಾರ ವಿಳಂಬ: ಜಲಸಾರಿಗೆ ಕಚೇರಿ ಜಪ್ತಿ


2009ರಲ್ಲಿ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ 8 ಜನರಿಂದ ಲಕ್ಷ್ಮೇಶ್ವರ-ಮಂಗಸೂಳಿ ರಸ್ತೆ ನಿರ್ಮಾಣಕ್ಕೆ ಒಟ್ಟು 60 ಗುಂಟೆ ಜಾಗವನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ಅವರಿಗೆ ನೀಡಬೇಕಾದ 40ಲಕ್ಷ ರೂ. ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ಜಪ್ತಿ ಮಾಡಲಾಗಿದೆ.

ಅಧಿಕಾರಿಗಳು ವಿಳಂಬ ನೀತಿ ವಿರುದ್ಧ ರೈತರು ಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ನಗರದ 2ನೇ ಹಿರಿಯ ದಿವಾಣಿ ನ್ಯಾಯಾಲಯ ಕೆಲ ತಿಂಗಳ ಹಿಂದೆ ಜಪ್ತಿ ಆದೇಶ ಹೊರಡಿಸಿತ್ತು. ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು 18.50 ಲಕ್ಷ ರೂ. ಹಣ ನೀಡಿದ್ದರು. ಆದರೆ, ಬಾಕಿ ಹಣ ನೀಡಲು ಸತಾಯಿಸಿದ ಕಾರಣ ಕಚೇರಿಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕುರ್ಚಿ ಸೇರಿದಂತೆ ಸುಮಾರು 15 ಕುರ್ಚಿ, ಕಂಪ್ಯೂಟರ್‌, ಪ್ರಿಂಟರ್‌ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಈ ಹಿಂದೆ ಅಂದರೆ ಸೆಪ್ಟಂಬರ್‌ನಲ್ಲಿ ಜಪ್ತಿಗೆ ತೆರಳಿದ್ದ ಸಂದರ್ಭದಲ್ಲಿ, ಈ ಕಾಮಗಾರಿ ಕೆಆರ್‌ಡಿಸಿ ಅವರಿಗೆ ಸಂಬಂಧಿಸಿದೆ. ಒಂದು ತಿಂಗಳು ಅವಧಿ ನೀಡಿ ಎಂದು ಲೋಕೋಪಯೋಗಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಅವರು ವಿನಂತಿಸಿದ್ದರು. ಆದರೆ, ಮೂರು ತಿಂಗಳಾದರೂ ಬಾಕಿ ಹಣ ಬಂದಿರಲಿಲ್ಲ. ವಕೀಲ ನಾಗನಗೌಡ ಸಮ್ಮುಖದಲ್ಲಿ ಜಪ್ತಿ ಕಾರ್ಯ ನಡೆಸಲಾಗಿದೆ.

ಜಪ್ತಿ ವೇಳೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ವಿ.ಬಿ. ಯಮಕನಮರಡಿ ಅವರ ಕುರ್ಚಿಯನ್ನು ಜಪ್ತಿ ಮಾಡಲು ಬೇಲೀಫರು ಮುಂದಾಗಿದ್ದರು. ಆದರೆ ಇದಕ್ಕೆ ಅಧಿಕಾರಿಗಳು ನಿರಾಕರಿಸಿದರು. ಇದೇ ಸಂದರ್ಭದಲ್ಲಿ ಕೆಲ ಹೊತ್ತು ರೈತರು ಹಾಗೂ ಎಂಜಿನಿಯರ್‌ ನಡುವೆ ಮಾತಿನ ಜಟಾಪಟಿ ನಡೆಯಿತು. ನಂತರ ಅವರಿಗೆ ಬೇರೆ ಕುರ್ಚಿ ನೀಡಿ ಅವರ ಕುರ್ಚಿಯನ್ನು ಜಪ್ತಿ ಮಾಡಲಾಯಿತು.

ರೈತರಾದ ಚಂದ್ರಶೇಖರಯ್ಯ ಮಠಪತಿ, ಆನಂದಯ್ಯ ಕುದಂಗೋಳ, ಮಲಕಯ್ಯ ಕುಂದಗೋಳ, ರಾಯನಗೌಡ ಕುದರಿ, ಶಿವನಗೌಡ ಹಿರೇಗೌಡ್ರ, ರೇವಣಸಿದ್ದಯ್ಯ ಹಿರೇಮಠ, ವೀರನಗೌಡ ಕಬನೂರ ಜಪ್ತಿ ವೇಳೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ