ಆ್ಯಪ್ನಗರ

ಹುಬ್ಬಳ್ಳಿ‌ | ನೈರುತ್ಯ ರೈಲ್ವೆ ವಲಯದಿಂದ ವಿಶೇಷ ರೀತಿ ಸ್ವಾತಂತ್ರೋತ್ಸವದ ಆಚರಣೆ: 300ಕ್ಕೂ ಹೆಚ್ಚು ಮಾಜಿ ಸೈನಿಕರಿಗೆ ಸನ್ಮಾನ

South Western Railway Hubballi: ನೈರುತ್ಯ ರೈಲ್ವೆ ವಲಯದ, ಹುಬ್ಬಳ್ಳಿ ವಿಭಾಗ, ಹುಬ್ಬಳ್ಳಿ ಕಾರ್ಯಾಗಾರ, ರೈಲ್ವೆ ಭಂಡಾರ, ವಲಯ ಕಚೇರಿ ಹಾಗೂ ಟ್ರಾಕ್ ಮಷೀನ್ ಶಾಖೆಯಲ್ಲಿ 300ಕ್ಕೂ ಹೆಚ್ಚು ಮಾಜಿ ಸೈನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ದೇಶಕ್ಕೆ ಅವರು ಸಲ್ಲಿಸಿದ ಪವಿತ್ರ ಹಾಗೂ ಸಾರ್ಥಕ ಸೇವೆಯನ್ನು ಗೌರವಿಸಿ ಅವರನ್ನು ಸನ್ಮಾನಿಸಲಾಯಿತು

Edited byಹೇಮಂತ್ ಕುಮಾರ್ ಎಸ್ | Lipi 13 Aug 2022, 5:32 pm

ಹೈಲೈಟ್ಸ್‌:


  • ಭೂಸೇನೆ, ವಾಯುಪಡೆ, ನೌಕಾಪಡೆ ಹಾಗೂ ವಿವಿಧ ಅರೆಸೇನಾಪಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಯೋಧರು
  • ಹುಬ್ಬಳ್ಳಿ ವಿಭಾಗ, ಹುಬ್ಬಳ್ಳಿ ಕಾರ್ಯಾಗಾರ, ರೇಲ್ವೆ ಭಂಡಾರ, ವಲಯ ಕಚೇರಿ ಸಿಬ್ಬಂದಿ ಭಾಗಿ
  • ರಸ್ತೆ ಉದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ಬ್ಯಾನರ್‌

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web South Western Railway Hubballi
ನೈರುತ್ಯ ರೈಲ್ವೆ ವಲಯದಿಂದ 300ಕ್ಕೂ ಹೆಚ್ಚು ಮಾಜಿ ಸೈನಿಕರಿಗೆ ಸನ್ಮಾನ

ಹುಬ್ಬಳ್ಳಿ‌: ಸೌತ್ ವೆಸ್ಟರ್ನ್ ರೇಲ್ವೆ ಮಜೂರ ಯೂನಿಯನ್ (SWRMU), ಹುಬ್ಬಳ್ಳಿಯಲ್ಲಿಂದು 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿತು. ಇದೇ ಸಂಧರ್ಭದಲ್ಲಿ, ಭಾರತೀಯ ಸೈನ್ಯದ ಭೂಸೇನೆ, ವಾಯುಪಡೆ, ನೌಕಾಪಡೆ ಹಾಗೂ ವಿವಿಧ ಅರೆಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಪ್ರಸ್ತುತ ರೇಲ್ವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾಜಿ ಸೈನಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ನೈರುತ್ಯ ರೇಲ್ವೆ ವಲಯದ ಹುಬ್ಬಳ್ಳಿ ವಿಭಾಗ, ಹುಬ್ಬಳ್ಳಿ ಕಾರ್ಯಾಗಾರ, ರೇಲ್ವೆ ಭಂಡಾರ, ವಲಯ ಕಚೇರಿ ಹಾಗೂ ಟ್ರಾಕ್ ಮಷೀನ್ ಶಾಖೆಯಲ್ಲಿ 300ಕ್ಕೂ ಹೆಚ್ಚು ಮಾಜಿ ಸೈನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ದೇಶಕ್ಕೆ ಅವರು ಸಲ್ಲಿಸಿದ ಪವಿತ್ರ ಹಾಗೂ ಸಾರ್ಥಕ ಸೇವೆಯನ್ನು ಗೌರವಿಸಿ ಅವರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ | ದೋಷಪೂರಿತ ರಾಷ್ಟ್ರಧ್ವಜ ವಿತರಣೆ: ಕಾಂಗ್ರೆಸ್‌ನಿಂದ ಝೆಂಡಾ ವಾಪಸಿ ಅಭಿಯಾನ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂಧರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಬಲಿದಾನಗೈದ ಮಹನಿಯರನ್ನು ಸ್ಮರಿಸಿ ಗೌರವಿಸಲು SWRMನ ಕೇಂದ್ರ ಕಚೇರಿಯಿಂದ ನೈರುತ್ಯ ರೇಲ್ವೆಯ ವಲಯ ಕಛೇರಿಯ ವರೆಗೂ ಗದಗ ರಸ್ತೆ ಉದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ಬ್ಯಾನರ್‌ಗಳನ್ನು ರಸ್ತೆ ಮಧ್ಯದ ವಿದ್ಯುತ್ ಕಂಬಗಳಿಗೆ ಕಟ್ಟಿ ದೇಶಪ್ರೇಮವನ್ನು ಮೆರೆದಿದೆ.

SWRMUನ ಪ್ರಧಾನ ಕಾರ್ಯದರ್ಶಿ, ಕಾ.ಡಾ.ಎ.ಎಮ್.ಡಿ'ಕ್ರೂಜ್, ಅಧ್ಯಕ್ಷರಾದ ಕಾ.ಅಶೋಕ ಕುಮಾರ, ಖಜಾಂಚಿ ಕಾ.ವಿ.ಈ.ಚಾರಖಾನಿ, ಸಹಾಯಕ ಪ್ರಧಾನ ಕಾರ್ಯದರ್ಶಿಗಳಾದ ಕಾ.ವೆಂಕಟೇಶ, ಕಾ.ಜಯಲಕ್ಷ್ಮಿ, ಕಾ.ಆ್ಯಂಥೋನಿ ಜೆನ್ನಿ ಡಿ'ಕ್ರೂಜ್, ಕಾ.ಮುರಗನ್, ಹುಬ್ಬಳ್ಳಿ ವಿಭಾಗೀಯ ಅಧ್ಯಕ್ಷರಾದ ಕಾ.ಜಾಕೀರ ಸನದಿ, ವಿಭಾಗೀಯ ಕಾರ್ಯದರ್ಶಿ ಕಾ.ಕುಮಾರವೇಲನ, ವರ್ಕ್ ಶಾಪ್ ವಿಭಾಗೀಯ ಕಾರ್ಯದರ್ಶಿ ಕಾ.ಪ್ರವೀಣ ಪಾಟೀಲ್‌, ವರ್ಕ್ ಶಾಪ್ ಕಾರ್ಯದರ್ಶಿ ಕಾ.ಜಾಕೋಬ್ ಸೇರಿದಂತೆ ಇತರ ವಿಭಾಗೀಯ, ಶಾಖೆಯ ಪದಾಧಿಕಾರಿಗಳು, ಬಿಈಸಿ ಸದಸ್ಯರು, ಮತ್ತು 600ಕ್ಕೂ ಹೆಚ್ಚು ರೇಲ್ವೆ ಕಾರ್ಮಿಕರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಾರಂಭದಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದರು.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ