ಆ್ಯಪ್ನಗರ

ರೌಡಿಶೀಟರ್‌ಗಳಿಗೆ ಎಸ್ಪಿ ಕಿಶೋರಬಾಬು ಖಡಕ್‌ ಎಚ್ಚರಿಕೆ

ಧಾರವಾಡ: ನಗರದ ಜಿಲ್ಲಾಪೋಲಿಸ್‌ ಡಿಎಆರ್‌ ಮೈದಾನದಲ್ಲಿಜಿಲ್ಲೆಯ ಎಲ್ಲಾಠಾಣೆ ಸರಹದ್ದಿನಲ್ಲಿರುವ ರೌಡಿಶೀಟರಗಳನ್ನು ಗುರುವಾರ ಕರೆಯಿಸಿ ಅವರ ಹಾಲಿ ಚಲವಲನಗಳ ಬಗ್ಗೆ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಕಿಶೋರ ಬಾಬು ಅವರು ವಿಚಾರಣೆ ಮಾಡಿ ರೌಡಿ ಶೀಟರಗಳಿಗೆ ಎಚ್ಚರಿಕೆ ನೀಡಿದರು.

Vijaya Karnataka 11 Oct 2019, 5:00 am
ಧಾರವಾಡ: ನಗರದ ಜಿಲ್ಲಾಪೋಲಿಸ್‌ ಡಿಎಆರ್‌ ಮೈದಾನದಲ್ಲಿಜಿಲ್ಲೆಯ ಎಲ್ಲಾಠಾಣೆ ಸರಹದ್ದಿನಲ್ಲಿರುವ ರೌಡಿಶೀಟರಗಳನ್ನು ಗುರುವಾರ ಕರೆಯಿಸಿ ಅವರ ಹಾಲಿ ಚಲವಲನಗಳ ಬಗ್ಗೆ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಕಿಶೋರ ಬಾಬು ಅವರು ವಿಚಾರಣೆ ಮಾಡಿ ರೌಡಿ ಶೀಟರಗಳಿಗೆ ಎಚ್ಚರಿಕೆ ನೀಡಿದರು.
Vijaya Karnataka Web sp kishorebabu khadak warning to routesheeters
ರೌಡಿಶೀಟರ್‌ಗಳಿಗೆ ಎಸ್ಪಿ ಕಿಶೋರಬಾಬು ಖಡಕ್‌ ಎಚ್ಚರಿಕೆ


ಜಿಲ್ಲೆಯ ಮಹಾನಗರ ವ್ಯಾಪ್ತಿ ಹೊರತು ಪಡಿಸಿ, ಎಲ್ಲಾಠಾಣೆಗಳ ವ್ಯಾಪ್ತಿಯಲ್ಲಿಕೊಲೆ, ಸುಲಿಗೆ, ದರೋಡೆ, ಮಟ್ಕಾ, ಇಸ್ಪಿಟ್‌ ಹಾಗೂ ದೊಂಬಿ ಪ್ರಕರಣಗಳಲ್ಲಿಭಾಗಿಯಾಗಿದ್ದ ಸುಮಾರು 150 ಜನ ರೌಡಿಗಳನ್ನು ಎಸ್‌.ಪಿ. ಕಿಶೋರ ಬಾಬು, ಗ್ರಾಮೀಣ ಉಪ ವಿಭಾಗದ ಡಿಎಸ್‌ಪಿ ರಾಮನಗೌಡ ಹಟ್ಟಿ ಹಾಗೂ ಜಿಲ್ಲೆಯ ಇತರೆ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿವಿಚಾರಣೆಗೆ ಒಳಪಡಿಸಿದರು.

ಈ ವೇಳೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿತೊಡಗದಂತೆ, ಅಕ್ರಮ ಬಡ್ಡಿ ವ್ಯವಹಾರ, ರಿಯಲ್‌ ಎಸ್ಟೇಟ್‌ ದಂಧೆಗಳಲ್ಲಿತೊಡಗದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ಯಾವುದೇ ಅಹಿತಕರ ಘಟನೆಗಳಲ್ಲಿಭಾಗಿಯಾದಲ್ಲಿಗಡಿಪಾರು ಅಥವಾ ಗೂಂಡಾ ಕಾಯ್ದೆ ಮೂಲಕ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್‌ಪಿ ಕಿಶೋರ ಬಾಬು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ