ಆ್ಯಪ್ನಗರ

ಎಸ್ಪಿ ಕಚೇರಿ ಮಾರ್ಗ ಗ್ರಾಮೀಣ ಬಸ್‌ ಬಿಡಿ

ಧಾರವಾಡ: ಧಾರವಾಡದ ಹಳೆ ಎಸ್ಪಿ ಕಚೇರಿ ಮಾರ್ಗದ ಮೂಲಕ ಗ್ರಾಮೀಣ ಬಸ್‌ಗಳು ಸಂಚರಿಸಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

Vijaya Karnataka 16 Oct 2019, 5:00 am
ಧಾರವಾಡ: ಧಾರವಾಡದ ಹಳೆ ಎಸ್ಪಿ ಕಚೇರಿ ಮಾರ್ಗದ ಮೂಲಕ ಗ್ರಾಮೀಣ ಬಸ್‌ಗಳು ಸಂಚರಿಸಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
Vijaya Karnataka Web sp route leave rural bus
ಎಸ್ಪಿ ಕಚೇರಿ ಮಾರ್ಗ ಗ್ರಾಮೀಣ ಬಸ್‌ ಬಿಡಿ


ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಸಂಘದ ಪದಾಧಿಕಾರಿಗಳು, ಈ ಹಿಂದೆ ಹಳೆ ಎಸ್ಪಿ ಕಚೇರಿ ಮಾರ್ಗವಾಗಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಸದ್ಯ ಜುಬ್ಲಿವೃತ್ತದಿಂದ ಸಂಚರಿಸುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಮತ್ತೆ ಹಳೆ ಎಸ್‌ಪಿ ಕಚೇರಿ ಮಾರ್ಗದಿಂದ ಬಸ್‌ಗಳನ್ನು ಸಂಚರಿಸುವಂತೆ ಸೂಕ್ತ ಕ್ರಮಕೈಗೊಳಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಜಯಕರ್ನಾಟಕ ಸಂಘಟನೆ ರಾಜ್ಯ ಜಂಟಿ ಕಾರ್ಯದರ್ಶಿ ಮುತ್ತು ಬೆಳ್ಳಕ್ಕಿ, ಮಲ್ಲಿಕಾರ್ಜುನ್‌ ಹಳೆಮನಿ, ಪ್ರಭು ಭಜಂತ್ರಿ, ಕಮಲು ಫೂಲ್‌ವಾಲೆ, ಮಾಂತೇಶ ಗುಡಿಕಟ್ಟಿ, ಪ್ರವೀಣ ಸಿರಸಂಗಿ, ಕೃಷ್ಣಾ ಹುಬ್ಬಳ್ಳಿ, ಅರುಣ ಸುತಾರೆ, ಚಂದ್ರು ಸಿಂಧೆಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ