ಆ್ಯಪ್ನಗರ

ಮಕ್ಕಳ ಆಟ ಕಂಡು ಖುಷಿಪಟ್ಟ ಎಸ್‌ಪಿ

ಧಾರವಾಡ: ನಗರದ ಪೊಲೀಸ್‌ ಹೆಡ್‌ಕ್ವಾರ್ಟರ್ಸ್‌ನಲ್ಲಿರುವ ಪೊಲೀಸ್‌ ಮಕ್ಕಳ ಅಂಗನವಾಡಿ ಕೇಂದ್ರಕ್ಕೆ ಶುಕ್ರಾವಾರ ಭೇಟಿ ನೀಡಿದ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌ ಮಕ್ಕಳ ಆಟ ಮತ್ತು ಪಾಠಕ್ಕಾಗಿ ಹೊಸ ಆಟಿಕೆ ಹಾಗೂ ಇತರೆ ಸಾಮಾಗ್ರಿಗಳನ್ನು ವಿತರಿಸಿದರು.

Vijaya Karnataka 1 Feb 2020, 5:00 am
ಧಾರವಾಡ: ನಗರದ ಪೊಲೀಸ್‌ ಹೆಡ್‌ಕ್ವಾರ್ಟರ್ಸ್‌ನಲ್ಲಿರುವ ಪೊಲೀಸ್‌ ಮಕ್ಕಳ ಅಂಗನವಾಡಿ ಕೇಂದ್ರಕ್ಕೆ ಶುಕ್ರಾವಾರ ಭೇಟಿ ನೀಡಿದ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌ ಮಕ್ಕಳ ಆಟ ಮತ್ತು ಪಾಠಕ್ಕಾಗಿ ಹೊಸ ಆಟಿಕೆ ಹಾಗೂ ಇತರೆ ಸಾಮಾಗ್ರಿಗಳನ್ನು ವಿತರಿಸಿದರು.
Vijaya Karnataka Web sp who enjoyed playing with children
ಮಕ್ಕಳ ಆಟ ಕಂಡು ಖುಷಿಪಟ್ಟ ಎಸ್‌ಪಿ


ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳಿಗೆ ಕುದುರೆ ಗಾಡಿ, ಸೈಕಲ್‌, ಪ್ಲಾಸ್ಟಿಕ್‌ ಚೆಂಡುಗಳು, ಪಿರಮಿಡ್‌ ಆಟಿಕೆ, ಫ್ಲಾಯಿಂಗ್‌ ಡಿಸ್ಕ್‌$್ಸ, ಎಬಿಸಿಡಿ ಜೋಡಣೆಗಳು, ಮಕ್ಕಳ ಹಾಜರಿ ಪುಸ್ತಕ, ಚಾಕ್‌ಪೀಸ್‌ ಮತ್ತು ಡಸ್ಟರ್‌, ಎಬಿಸಿಡಿ ಅಂಕಿಗಳ ಚಾಟ್ರ್ಸ, ಬಳಪದ ಡಬ್ಬಿ, ಬಕೇಟ್‌ ಮತ್ತು ಮಗ್‌ಗಳನ್ನು ಸ್ವತಃ ನೀಡಿದರು. ಕೆಲ ಸಮಯ ಮಕ್ಕಳೊಂದಿಗೆ ಇದ್ದು, ಮಕ್ಕಳ ಆಟ ನೋಡಿ ಖುಷಿಪಟ್ಟರು.

ಹಿರಿಯ ಐಪಿಎಸ್‌ ಅಧಿಕಾರಿ ಅಮರ್‌ಕುಮಾರ ಪಾಂಡೆ ಅವರ ಪತ್ನಿ ಅಂಜಲಿ ಪಾಂಡೆ ಅವರು ಅ.27.1996 ರಲ್ಲಿಪೊಲೀಸ್‌ ಹೆಡ್‌ಕ್ವಾಟರ್ಸ್‌ದಲ್ಲಿರುವ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳ ಮಕ್ಕಳ ಕಲಿಕೆಗಾಗಿ ಬಾಲವಾಡಿ ಕೇಂದ್ರವನ್ನು ಆರಂಭಿಸಿದ್ದರು. ಪ್ರತಿ ವರ್ಷ ಸುಮಾರು 30ರಿಂದ 40 ಮಕ್ಕಳು ಈ ಬಾಲವಾಡಿ ಕೇಂದ್ರಕ್ಕೆ ಪ್ರವೇಶ ಪಡೆಯುತ್ತಾರೆ. ಪೊಲೀಸ್‌ ಕಲ್ಯಾಣ ನಿಧಿಯಿಂದ ಈ ಬಾಲವಾಡಿ ಕೇಂದ್ರವನ್ನು ಮುನ್ನಡಿಸಲಾಗುತ್ತದೆ ಎಂದರು. ಆರ್‌ಪಿಐ ಜಿ.ಸಿ ಡೂಗನವರ, ಆರ್‌ಎಸ್‌ಐ ಬಿ.ಆರ್‌. ಚೆನ್ನಮನವರ, ರಾಜು ಗುಡನಟ್ಟಿ, ಬರಹಗಾರರಾದ ಸಚಿನ ಬಣಕಾರ, ವಿಜಯ್‌ ನಾಟೀಕಾರ, ಶಿಕ್ಷಕಿ ಭಾರತಿ ಗಣಪತಿ, ಸಹಾಯಕಿ ಕಸ್ತೂರಿ ಹಡಪದ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ