ಆ್ಯಪ್ನಗರ

ಶಾಸಕರ ಪುತ್ರನ ಜತೆ ಮಾತನಾಡಿದ್ದು ನಾನೇ: ಬಿಎಸ್‌ವೈ

ಹುಬ್ಬಳ್ಳಿ : ಆಪರೇಷನ್‌ ಕಮಲ ಆಡಿಯೊ ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿಎಂ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಶನಿವಾರ ಶಪಥ ಮಾಡುತ್ತಿದ್ದಂತೆ ಇತ್ತ ತಮ್ಮ ರಾಗ ಬದಲಿಸಿರುವ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಗುರುಮಿಟ್ಕಲ್‌ ಜೆಡಿಎಸ್‌ ಶಾಸಕ ನಾಗನಗೌಡ ಪಾಟೀಲ ಕಂದಕೂರ ಅವರ ಪುತ್ರ ಶರಣಗೌಡನ ಜತೆಗೆ ತಾವು ಮಾತನಾಡಿದ್ದು ನಿಜ ಎಂದು ಹೇಳಿದ್ದಾರೆ.

Vijaya Karnataka 11 Feb 2019, 5:00 am
ಹುಬ್ಬಳ್ಳಿ : ಆಪರೇಷನ್‌ ಕಮಲ ಆಡಿಯೊ ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿಎಂ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಶನಿವಾರ ಶಪಥ ಮಾಡುತ್ತಿದ್ದಂತೆ ಇತ್ತ ತಮ್ಮ ರಾಗ ಬದಲಿಸಿರುವ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಗುರುಮಿಟ್ಕಲ್‌ ಜೆಡಿಎಸ್‌ ಶಾಸಕ ನಾಗನಗೌಡ ಪಾಟೀಲ ಕಂದಕೂರ ಅವರ ಪುತ್ರ ಶರಣಗೌಡನ ಜತೆಗೆ ತಾವು ಮಾತನಾಡಿದ್ದು ನಿಜ ಎಂದು ಹೇಳಿದ್ದಾರೆ.
Vijaya Karnataka Web speaking to the legislators son i am bsy
ಶಾಸಕರ ಪುತ್ರನ ಜತೆ ಮಾತನಾಡಿದ್ದು ನಾನೇ: ಬಿಎಸ್‌ವೈ


ಮುಖ್ಯಮಂತ್ರಿ ಆಡಿಯೊ ಬಿಡುಗಡೆ ಮಾಡುತ್ತಿದ್ದಂತೆ ಅದೊಂದು ಫೇಕ್‌ ಆಡಿಯೊ. ತಾವು ಯಾರ ಜತೆಯೂ ಮಾತನಾಡಿಲ್ಲ. ಸಿನಿಮಾ ರಂಗದ ಕುಮಾರಸ್ವಾಮಿ ಎಡಿಟಿಂಗ್‌ ಮೂಲಕ ಆಡಿಯೊ ಸೃಷ್ಟಿಸಿದ್ದಾರೆ ಎಂದು ಹೇಳಿದ್ದ ಯಡಿಯೂರಪ್ಪ ಇದೀಗ, ''ಶಾಸಕರ ಪುತ್ರನ ಜತೆ ಮಾತನಾಡಿರುವುದು ನಾನೇ'' ಎಂದು ಹೇಳುವ ಮೂಲಕ ಯು ಟರ್ನ್‌ ಹೊಡೆದಿದ್ದಾರೆ.

ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ದೇವದುರ್ಗದ ಪ್ರವಾಸಿ ತಾಣದಲ್ಲಿ ತಂಗಿದ್ದಾಗ ಶಾಸಕರ ಪುತ್ರ ಶರಣಗೌಡ ಬಂದದ್ದು ನಿಜ. ನನ್ನ ಜೊತೆಗೆ ಮಾತನಾಡಿದ್ದು ನಿಜ. ನನ್ನ ಬಳಿಯೂ ಆ ಆಡಿಯೊ ಇದೆ. ಅಲ್ಲಿ ಎನು ನಡೆಯಿತು ಎಂಬುದನ್ನು ಆನಂತರ ನೋಡೋಣ. ಈ ಬಗ್ಗೆ ನಾಳೆ ಸದನದಲ್ಲೇ ಬಹಿರಂಗ ಪಡಿಸುತ್ತೇನೆ'' ಎಂದು ತಿಳಿಸಿದರು.

ಸಿಎಂ ಬ್ಲ್ಯಾಕ್‌ಮೇಲ್‌ ರಾಜಕಾರಣ:

''ಸಿಎಂ ಕುಮಾರಸ್ವಾಮಿ ಬ್ಲ್ಯಾಕ್‌ಮೇಲ್‌ ಹಾಗೂ ದುಸ್ಸಾಹಸದ ರಾಜಕಾರಣ ಮಾಡುತ್ತಿದ್ದಾರೆ. ತಮಗೆ ಬೇಕಾದನ್ನು ಮಾತ್ರ ಬಳಸಿಕೊಂಡು ಉಳಿದದ್ದನ್ನು ಮರೆಮಾಚುತ್ತಿದ್ದಾರೆ. ಇದರ ಮುಂದುವರೆದ ಭಾಗವನ್ನು ಸೋಮವಾರ ಸದನದಲ್ಲಿ ಪ್ರಸ್ತಾಪಿಸುತ್ತೇನೆ'' ಎಂದರು.

''ಸಿಎಂ ಇಂತಹ ಕೆಳಮಟ್ಟಕ್ಕೆ ಇಳಿದಿರುವುದು ನೋಡಿದರೆ ಅವರ ನೀಚ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಿಎಂ ಅವರೇ ಕುತಂತ್ರ ಮಾಡಿ ಮೊದಲೇ ಒಂದು ರಣತಂತ್ರ ರೂಪಿಸಿ ನನ್ನ ಬಳಿ ಕಳುಹಿಸಿರುವುದು ದುರಂತ. ಇದು ಎಷ್ಟರ ಮಟ್ಟಿಗೆ ಸರಿ'' ಎಂದು ಪ್ರಶ್ನಿಸಿದರು.

ತನಿಖೆಗೆ ಸಿದ್ಧ

ನಾನು ಆಡಿಯೊ ಕುರಿತು ಯಾವುದೇ ತನಿಖೆಗೆ ಸಿದ್ದ. ವಿಜುಗೌಡ ಪಾಟೀಲ್‌ಗೆ ವಿಧಾನ ಪರಿಷತ್‌ ಸದಸ್ಯ ಸ್ಥಾನ ನೀಡಲು 25 ಕೋಟಿ ಬೇಡಿಕೆ ಇಟ್ಟ ಆಡಿಯೊ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಸೂಟ್‌ಕೇಸ್‌ ರಾಜಕಾರಣದ ಬಗ್ಗೆಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಬಾಯಿ ಬಿಡಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ