ಆ್ಯಪ್ನಗರ

ಮಾರುತಿ ದೇವರಿಗೆ ವಿಶೇಷ ಕುಂಕುಮಾರ್ಚನೆ

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ಶ್ರೀ ಸಮರ್ಥ ರಾಮದಾಸರು ಪ್ರತಿಷ್ಠಾಪಿಸಿದ ಶ್ರೀ ಮಾರುತಿ ದೇವರಿಗೆ ದೀಪಾವಳಿ ಹಬ್ಬ ನಿಮಿತ್ತ ಮಂಗಳವಾರ ವಿಶೇಷ ಕುಂಕುಮಾರ್ಚನೆ ಪೂಜೆ ನೆರವೇರಿಸಲಾಯಿತು.

Vijaya Karnataka 30 Oct 2019, 5:00 am
ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ಶ್ರೀ ಸಮರ್ಥ ರಾಮದಾಸರು ಪ್ರತಿಷ್ಠಾಪಿಸಿದ ಶ್ರೀ ಮಾರುತಿ ದೇವರಿಗೆ ದೀಪಾವಳಿ ಹಬ್ಬ ನಿಮಿತ್ತ ಮಂಗಳವಾರ ವಿಶೇಷ ಕುಂಕುಮಾರ್ಚನೆ ಪೂಜೆ ನೆರವೇರಿಸಲಾಯಿತು.
Vijaya Karnataka Web special saffron to the god of maruthi
ಮಾರುತಿ ದೇವರಿಗೆ ವಿಶೇಷ ಕುಂಕುಮಾರ್ಚನೆ


ಬೆಳಗ್ಗೆ ಮಾರುತಿ ದೇವರಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಶ್ರೀಗಂಧಲೇಪನ, ರಜತ ಮುಖವಾಡ ಅಲಂಕಾರ, ಕುಂಕುಮಾರ್ಚನೆ, ಗೆಜ್ಜೆವಸ್ತ್ರ, ಹೂಮಾಲೆ ಅರ್ಪಿಸಿ, ನೈವೇದ್ಯದ ನಂತರ ಮಹಾಮಂಗಳಾರತಿ ಮಾಡಲಾಯಿತು. ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿನಾಡಿನ ಜನತೆಯ ಸಂಕಷ್ಟಗಳನ್ನು ನಿವಾರಿಸುವಂತೆ ಹಾಗೂ ನಾಡು ಸುಭಿಕ್ಷವಾಗಿರುವಂತೆ ಆಂಜನೇಯ ದೇವನಲ್ಲಿವಿಶೇಷ ಪ್ರಾರ್ಥನೆಯನ್ನು ದೇವಸ್ಥಾನದ ಟ್ರಸ್ಟ್‌ ವತಿಯಿಂದ ಸಲ್ಲಿಸಲಾಯಿತು. ದೇವಸ್ಥಾನದಲ್ಲಿಹನುಮಂತ ದೇಶಕುಲಕರ್ಣಿ ಅವರು ಪೂಜಾ ಕೈಂಕರ್ಯ ನೇರವೇರಿಸಿದರು. ಈ ಸಂದರ್ಭದಲ್ಲಿಮಧುಸೂದನ ದೇಶಕುಲಕರ್ಣಿ, ರಾಮಚಂದ್ರ ದೇಶಕುಲಕರ್ಣಿ, ಬಸಪ್ಪ ಕುರಬರ, ಗುರುರಾಜ ದೇಶಕುಲಕರ್ಣಿ, ಬಿ.ಕೆ. ದೇಶಕುಲಕರ್ಣಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ