ಆ್ಯಪ್ನಗರ

ಕಳಪೆ ಕಟ್ಟಡಗಳ ಪತ್ತೆಗೆ ವಿಶೇಷ ತಂಡ

ಧಾರವಾಡ : ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಅಕ್ರಮ ಮತ್ತು ಕಳಪೆ ಕಾಮಾಗರಿಯಿಂದ ತಲೆ ಎತ್ತಿದ ಕಟ್ಟಡಗಳ ಮಾಹಿತಿ ಪಡೆಯಲು ವಿಶೇಷ ತಂಡ ರಚಿಸುವುದಾಗಿ ಜಿಲ್ಲಾಧಿಕಾರಿ ಎಂ.ದೀಪಾ ಹೇಳಿದರು.

Vijaya Karnataka 26 Mar 2019, 5:00 am
ಧಾರವಾಡ : ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಅಕ್ರಮ ಮತ್ತು ಕಳಪೆ ಕಾಮಾಗರಿಯಿಂದ ತಲೆ ಎತ್ತಿದ ಕಟ್ಟಡಗಳ ಮಾಹಿತಿ ಪಡೆಯಲು ವಿಶೇಷ ತಂಡ ರಚಿಸುವುದಾಗಿ ಜಿಲ್ಲಾಧಿಕಾರಿ ಎಂ.ದೀಪಾ ಹೇಳಿದರು.
Vijaya Karnataka Web special team to detect poor buildings
ಕಳಪೆ ಕಟ್ಟಡಗಳ ಪತ್ತೆಗೆ ವಿಶೇಷ ತಂಡ


ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಕಟ್ಟಡಗಳ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಅಂತಹ ಕಟ್ಟಡಗಳ ಮಾಲೀಕರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ ತೀವ್ರನಿಗಾ ಘಟಕದಲ್ಲಿದ್ದು, ಉಳಿದವರ ಆರೋಗ್ಯ ಚೇತರಿಸಿಕೊಂಡಿದೆ. ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ ನೀಡಲಾಗಿದ್ದು, ಹೆಚ್ಚಿನ ಪರಿಹಾರಕ್ಕೆ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಜತೆಗೆ ಸಂತ್ರಸ್ತರಿಗೂ ಪರಿಹಾರ ನೀಡುವ ಕೆಲಸ ಮಾಡಲಾಗುದು. ನಷ್ಟದ ವರದಿ ಕಟ್ಟಡದಲ್ಲಿ ದಿವಾಳಿಯಾದ ಜನರಿಗೂ ಪರಿಹಾರ ವಿತರಿಸಿ, ಅದನ್ನೂ ಮಾಲೀಕರಿಂದ ವಸೂಲಿ ಮಾಡಲಾಗುವುದು. ದುರಂತಕ್ಕೆ ಕಾರಣರಾದ ಆರೋಪಿಗಳಿಗೆ ಹಾಗೂ ಅಧಿಕಾರಿಗಳಿಗೆ ಶಿಕ್ಷೆ ಆಗಲಿದೆ ಎಂದು ಹೇಳಿದರು.

ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಉಪ ಆರಕ್ಷ ಕ ಮಹಾನೀರಿಕ್ಷ ಕ ಡಾ. ಬಿ.ಆರ್‌.ರವಿಕಾಂತೇಗೌಡ ಮಾತನಾಡಿ, ಮನುಷ್ಯ ನಿರ್ಮಿತ ದುರಂತ ಇದಾಗಿದ್ದು, ಇಷ್ಟು ಪ್ರಮಾಣದಲ್ಲಿ ಜೀವಗಳು ಉಳಿದ ಉದಾಹರಣೆ ಇರಲಿಲ್ಲ. ಕಾರ್ಯಾಚರಣೆ ತಂಡಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. ರಾಜ್ಯದಲ್ಲಿ ಸಕಲ ಸೌಲಭ್ಯ ಒಳಗೊಂಡ 11 ರೆಸ್ಕ್ಯೂ ವಾಹನಗಳಿವೆ. ಇಂಥ ವೇಳೆ ಗಾಯಗೊಂಡ ಸಿಬ್ಬಂದಿಗೆ 30 ಲಕ್ಷ ದ ವರೆಗೆ ವಿಮೆ ಸಿಗಲಿದೆ ಎಂದರು.

ಉತ್ತಮ ಸಂಬಂಧ

ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ ಮಾತನಾಡಿ, ಘಟನೆ ನಡೆದ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಿರುವುದು ಕಾರ್ಯಾಚರಣೆಗೆ ಸಹಕಾರಿಯಾಯಿತು. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಗೃಹರಕ್ಷ ಕ ಸಿಬ್ಬಂದಿ, ಉತ್ತಮ ಹೊಂದಾಣಿಕೆæಯೊಂದಿಗೆ ಕಾರ್ಯಾಚರಣೆ ನಡೆಸಿವೆ ಎಂದು ಶ್ಲಾಘಿಸಿದರು.

ಘಟನೆ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು, ಎಂಜನಿಯರ್‌ ಸೇರಿದಂತೆ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಡಿಸಿಪಿ ಎಲ್‌.ನಾಗೇಶ , ಹಿರಿಯ ಅಧಿಕಾರಿ ಕಮಲಪಂತ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಶಿಸ್ತಿನ ಕ್ರಮ ಜರುಗಿಸಿ 19 ಜನರ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ನಮ್ಮ ಸಿಬ್ಬಂದಿಗೆ ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ಸಾರ್ವಜನಿಕರ ಸಹಕಾರವನ್ನು ನಾನು ಎಂದು ಮರೆಯುವುದಿಲ್ಲ ಎಂದು ಎನ್‌ಡಿಆರ್‌ಎಫ್‌ ಕಮಾಂಡೆಂಟ್‌ ಜಾಹೀದ್‌ ಖಾನ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಅಗ್ನಿಶಾಮಕ ದಳದ ಡಿಡಿ ವರ್ಧರಾಜನ್‌, ಅಗ್ನಿಶಾಮಕಕ ದಳದ ಜಿ.ಎಚ್‌.ರವಿಶಂಕರ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ