ಸಚಿವರ ಊರಿಗೆ ವಿಶೇಷ ರೈಲು
ಹುಬ್ಬಳ್ಳಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರ ವಹಿಸಿಕೊಂಡ ತಿಂಗಳೊಳಗೆ ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ ಆರಂಭಗೊಳ್ಳಲಿದೆ.
Vijaya Karnataka 26 Jun 2019, 5:00 am
ಹುಬ್ಬಳ್ಳಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರ ವಹಿಸಿಕೊಂಡ ತಿಂಗಳೊಳಗೆ ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ ಆರಂಭಗೊಳ್ಳಲಿದೆ.
ಉದ್ದೇಶಿತ ಬೆಳಗಾವಿ-ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸಪ್ರೆಸ್ ರೈಲು ಜೂ. 29ರಿಂದ ಸಂಚಾರ ಆರಂಭಿಸಲಿದ್ದು, ಕೇವಲ ಆರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಬೆಂಗಳೂರು ನಿಲ್ದಾಣದಿಂದ ರಾತ್ರಿ 9ಕ್ಕೆ ಹೊರಡುವ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಧಾರವಾಡ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಬೆಳಗಾವಿಗೆ ಬೆಳಗ್ಗೆ 7.30ಕ್ಕೆ ತಲುಪಲಿದೆ. ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 4.40ಕ್ಕೆ ಆಗಮಿಸಲಿದೆ. ಇದೇ ರೈಲು ಬೆಳಗಾವಿಯಿಂದ ರಾತ್ರಿ 9ಕ್ಕೆ ಹೊರಟು, ಹುಬ್ಬಳ್ಳಿಗೆ ರಾತ್ರಿ 11.55ಕ್ಕೆ ಹಾಗೂ ಬೆಂಗಳೂರಿಗೆ ಬೆಳಗ್ಗೆ 7.30ಕ್ಕೆ ತಲುಪಲಿದೆ. ಒಟ್ಟು 14 ಬೋಗಿಗಳು ಇರಲಿವೆ.
ವಿಚಿತ್ರ ಎಂದರೆ ರಾಣಿ ಚೆನ್ನಮ್ಮ ಎಕ್ಸಪ್ರೆಸ್ ರೈಲು ಬೆಂಗಳೂರು ನಿಲ್ದಾಣದಿಂದ 9.15ಕ್ಕೆ ಹೊರಟು ಬೆಳಗಾವಿಗೆ 8.28ಕ್ಕೆ ಆಗಮಿಸುವುದು. ಸಚಿವರ ಸೂಚನೆ ಮೇರೆಗೆ ಈ ವಿಶೇಷ ರೈಲು ಓಡಿಸಲಾಗುತ್ತಿದ್ದು, ಇದುವರೆಗೂ ರೈಲು ನಂಬರ್ ಗೊತ್ತುಪಡಿಸಲಾಗಿಲ್ಲ.
ಉದ್ದೇಶಿತ ಬೆಳಗಾವಿ-ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸಪ್ರೆಸ್ ರೈಲು ಜೂ. 29ರಿಂದ ಸಂಚಾರ ಆರಂಭಿಸಲಿದ್ದು, ಕೇವಲ ಆರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಬೆಂಗಳೂರು ನಿಲ್ದಾಣದಿಂದ ರಾತ್ರಿ 9ಕ್ಕೆ ಹೊರಡುವ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಧಾರವಾಡ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಬೆಳಗಾವಿಗೆ ಬೆಳಗ್ಗೆ 7.30ಕ್ಕೆ ತಲುಪಲಿದೆ. ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 4.40ಕ್ಕೆ ಆಗಮಿಸಲಿದೆ. ಇದೇ ರೈಲು ಬೆಳಗಾವಿಯಿಂದ ರಾತ್ರಿ 9ಕ್ಕೆ ಹೊರಟು, ಹುಬ್ಬಳ್ಳಿಗೆ ರಾತ್ರಿ 11.55ಕ್ಕೆ ಹಾಗೂ ಬೆಂಗಳೂರಿಗೆ ಬೆಳಗ್ಗೆ 7.30ಕ್ಕೆ ತಲುಪಲಿದೆ. ಒಟ್ಟು 14 ಬೋಗಿಗಳು ಇರಲಿವೆ.
ವಿಚಿತ್ರ ಎಂದರೆ ರಾಣಿ ಚೆನ್ನಮ್ಮ ಎಕ್ಸಪ್ರೆಸ್ ರೈಲು ಬೆಂಗಳೂರು ನಿಲ್ದಾಣದಿಂದ 9.15ಕ್ಕೆ ಹೊರಟು ಬೆಳಗಾವಿಗೆ 8.28ಕ್ಕೆ ಆಗಮಿಸುವುದು. ಸಚಿವರ ಸೂಚನೆ ಮೇರೆಗೆ ಈ ವಿಶೇಷ ರೈಲು ಓಡಿಸಲಾಗುತ್ತಿದ್ದು, ಇದುವರೆಗೂ ರೈಲು ನಂಬರ್ ಗೊತ್ತುಪಡಿಸಲಾಗಿಲ್ಲ.