ಆ್ಯಪ್ನಗರ

ಜಲಧಾರೆ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ

ಧಾರವಾಡ : ಮಳೆಗಾಲದ ನಿಮಿತ್ತ ಜಲಧಾರೆಗಳ ವೀಕ್ಷ ಣೆಗೆ ಧಾರವಾಡದಿಂದ ವಿಶೇಷ ಸಾರಿಗೆ ಸೌಲಭ್ಯ ಜು. 27, 28, ಆ. 4, 10, 11, 12, 15, 18, 24 ಹಾಗೂ 25 ರಂದು ಒದಗಿಸಲಾಗಿದೆ.

Vijaya Karnataka 21 Jul 2019, 5:00 am
ಧಾರವಾಡ : ಮಳೆಗಾಲದ ನಿಮಿತ್ತ ಜಲಧಾರೆಗಳ ವೀಕ್ಷ ಣೆಗೆ ಧಾರವಾಡದಿಂದ ವಿಶೇಷ ಸಾರಿಗೆ ಸೌಲಭ್ಯ ಜು. 27, 28, ಆ. 4, 10, 11, 12, 15, 18, 24 ಹಾಗೂ 25 ರಂದು ಒದಗಿಸಲಾಗಿದೆ.
Vijaya Karnataka Web special transportation for waterfront viewing
ಜಲಧಾರೆ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ


ಪ್ಯಾಕೇಜ್‌ ಟೂರ್‌ ಅವತಾರ ಟಿಕೇಟ್‌ ಕೌಂಟರ್‌ಗಳಲ್ಲಿ ಹಾಗೂ ಡಿಡಿಡಿ.ks್ಟಠ್ಚಿ.ಜ್ಞಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮುಖಾಂತರ ಆಸನ ಕಾಯ್ದಿರಿಸಬಹುದು. ಸಾರ್ವಜನಿಕರು ಸಾರಿಗೆ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬಹುದು.

ಪ್ಯಾಕೇಜ್‌-1 : ಬೆಳಗ್ಗೆ 7.30ಕ್ಕೆ ಧಾರವಾಡ ಹೊಸ ಬಸ್‌ ನಿಲ್ದಾಣದಿಂದ ಹೊರಟು ನವಿಲುತೀರ್ಥ ಡ್ಯಾಮ್‌, ಸೊಗಲ ಕ್ಷೇತ್ರ, ಗೋಕಾಕ ಫಾಲ್ಸ್‌, ಗೊಡಚಿನಮಲ್ಕಿ ಫಾಲ್ಸ್‌ ವೀಕ್ಷಿಸಿ ಧಾರವಾಡಕ್ಕೆ ಸಂಜೆ 7ಕ್ಕೆ ಹಿಂದಿರುಗುವುದು.

ಪ್ಯಾಕೇಜ್‌-2: ಬೆಳಗ್ಗೆ 7.30ಕ್ಕೆ ಧಾರವಾಡ ಹೊಸ ಬಸ್‌ ನಿಲ್ದಾಣದಿಂದ ಹೊರಟು ದಾಂಡೇಲಿ ಮೊಸಳೆ ಪಾರ್ಕ್‌, ಮೌಳಂಗಿ ಫಾಲ್ಸ್‌, ಕೂಳಗಿ ನೇಚರ್‌, ಉಳವಿ ದೇವಸ್ಥಾನ ವೀಕ್ಷಿಸಿ ಧಾರವಾಡಕ್ಕೆ ಸಂಜೆ 7ಕ್ಕೆ ಹಿಂದಿರುಗುವುದು.

ಪ್ಯಾಕೇಜ್‌-3: ಬೆಳಗ್ಗೆ 7.45ಕ್ಕೆ ಹೊಸ ಬಸ್‌ ನಿಲ್ದಾಣದಿಂದ ನಾಗರತಾಸ ಜಲಧಾರೆ, ಹಿರಣ್ಯಕೇಶಿ ನದಿ ಉಗಮಸ್ಥಾನ, ಅಂಬೋಲಿ ಜಲಧಾರೆ ವೀಕ್ಷಿಸಿ ಧಾರವಾಡಕ್ಕೆ ರಾತ್ರಿ 7.45ಕ್ಕೆ ಬರುವುದು ಎಂದು ಧಾರವಾಡ ವಿಭಾಗದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ