ಆ್ಯಪ್ನಗರ

ಶ್ರೀ ನಾಗಸ್ವಾಮಿ ರಥೋತ್ಸವ ಇಂದು

ನವಲಗುಂದ : ತಾಲೂಕಿನ ಅಮರಗೋಳ ಗ್ರಾಮದ ಶ್ರೀ ನಾಗ ಸ್ವಾಮಿ ರಥೋತ್ಸವ ಆ.5 ರಂದು ಸಂಜೆ 5ಕ್ಕೆ ನಡೆಯಲಿದೆ.

Vijaya Karnataka 5 Aug 2019, 5:00 am
ನವಲಗುಂದ : ತಾಲೂಕಿನ ಅಮರಗೋಳ ಗ್ರಾಮದ ಶ್ರೀ ನಾಗ ಸ್ವಾಮಿ ರಥೋತ್ಸವ ಆ.5 ರಂದು ಸಂಜೆ 5ಕ್ಕೆ ನಡೆಯಲಿದೆ.
Vijaya Karnataka Web sri nagaswamy rathotsava today
ಶ್ರೀ ನಾಗಸ್ವಾಮಿ ರಥೋತ್ಸವ ಇಂದು


ಯಾವುದೇ ಹಾವು ಕಚ್ಚಿದರೂ ನಾಗಸ್ವಾಮಿ ಮಂದಿರಕ್ಕೆ ಕರೆತಂದು ಮಂದಿರದಲ್ಲಿನ ತೀರ್ಥ, ಅಂಗಾರ ಸೇವಿಸಿದರೆ ಸರ್ಪ ವಿಷ ಬಾಧೆ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯು ದೇವಾಲಯದ ಹೆಗ್ಗಳಿಕೆಯಾಗಿದೆ.

ಮಹಾರಾಷ್ಟ್ರದ ಇಬ್ಬರು ಸಂತರು ಯಮನೂರಿನ ಚಾಂಗದೇವ ಮಹಾರಾಜರ ಪರಂಪರೆಯ ಅನುಯಾಯಿಗಳು. ಇವರು ಕರ್ನಾಟಕದಲ್ಲಿ ಸಂಚರಿಸುತ್ತ ತಾಲೂಕಿನ ಯಮನೂರಿನ ಚಾಂಗದೇವ ಮಹಾರಾಜರ ದರ್ಶನ ಪಡೆದು ಅಮರಗೋಳ ಗ್ರಾಮಕ್ಕೆ ಆಗಮಿಸಿದರು. ಅಲ್ಲಿಯೇ ಚಿಕ್ಕದೊಂದು ಆಶ್ರಯ ನಿರ್ಮಿಸಿಕೊಂಡು ನೆಲೆಸಿದರು. ಭಕ್ತರಿಗೆ ಅಧ್ಯಾತ್ಮಿಕ ಸಂದೇಶ ನೀಡುತ್ತ ಭಕ್ತರ ಸಂಕಷ್ಟ ನಿವಾರಣೆಗೆ ನೆರವಾಗುತ್ತಿದ್ದರು.

ಅಮರಗೋಳ ಗ್ರಾಮವು ಆಗ ಜಾಲಿಕಂಟಿಗಳಿಂದ ಆವೃತ್ತಗೊಂಡಿತ್ತು. ಹೀಗಾಗಿ ಹಾವುಗಳ ಹಾವಳಿ ಹೆಚ್ಚಿತ್ತು. ಇದನ್ನರಿತ ಈ ಸಂತರು ಗದ್ದುಗೆ ನಿರ್ಮಿಸಿ ಗದ್ದುಗೆ ಹಾಗೂ ಬೆಣ್ಣಿಹಳ್ಳದ ನೀರಿಗೆ ತಪೋಸಿದ್ಧಿಯಿಂದ ತೀರ್ಥ ಸ್ವರೂಪ ನೀಡಿ ಸರ್ಪ ವಿಷ ನಿವಾರಣೆಗೆ ಔಷಧ ಕಂಡುಹಿಡಿದರು ಎಂದು ಹೇಳಲಾಗುತ್ತದೆ. ಹಾವು ಕಚ್ಚಿದ ವ್ಯಕ್ತಿಗಳು ಮಂದಿರದಲ್ಲಿನ ತೀರ್ಥ, ಅಂಗಾರ ಸೇವಿಸಿ ಗುಣಮುಖವಾದ ಹಲವು ಪ್ರಕರಣಗಳಿಗೆ ಗ್ರಾಮಸ್ಥರೇ ಸಾಕ್ಷಿಯಾಗಿದ್ದಾರೆ.

ಸಂತರು ಸಮಾಧಿಸ್ಥರಾದ ನಂತರ ಅವರ ಗದ್ದುಗೆಗಳನ್ನು ನಿರ್ಮಿಸಿ ಅದಕ್ಕೆ ಶ್ರೀ ನಾಗಸ್ವಾಮೀ ಎಂಬ ಹೆಸರಿನೊಂದಿಗೆ ಚಿಕ್ಕ ಗುಡಿ ಕಟ್ಟಲಾಗಿದೆ. ಹಾವು ಕಚ್ಚಿಸಿಕೊಂಡವರು ಯಾವುದೇ ಬೇರೆ ಔಷಧೋಪಚಾರ ಪಡೆಯದೆ ನಾಗಸ್ವಾಮಿ ಮೊರೆ ಹೋಗಬೇಕು. ಈ ಕ್ಷೇತ್ರವು ದಶಕಗಳಿಂದ ಸರ್ಪ ವಿಷ ಹಾರ ಕ್ಷೇತ್ರವೆಂದೇ ಆರಾಧಿಸಲ್ಪಡುತ್ತಿದೆ.

ಅಮರಗೋಳ ಗ್ರಾಮದ ಶ್ರೀ ನಾಗಸ್ವಾಮಿ ಜಾತ್ರೆ ಪ್ರತಿವರ್ಷ ನಾಗರ ಪಂಚಮಿಯಂದು ವೈಭವಪೂರ್ಣವಾಗಿ ನಡೆಯುತ್ತದೆ. ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ನಾಗಸ್ವಾಮಿಯನ್ನು ಆರಾಧಿಸಿ ಅಂಗಾರದ ರಕ್ಷ ಣೆ ಪಡೆದು ಕೊಂಡೋಯ್ಯುತ್ತಾರೆ. ಅಂದು ಅಮರಗೋಳದಲ್ಲಿ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ನಾಗಸ್ವಾಮಿಯ ದರ್ಶನಾಶೀರ್ವಾದ ಪಡೆದು ಕೃತಾರ್ಥರಾಗುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ