ಆ್ಯಪ್ನಗರ

ಇಷ್ಟಾರ್ಥ ಪೂರೈಸುವ ಶ್ರೀರಾಮಲಿಂಗ ಕಾಮದೇವರು

ನವಲಗುಂದ : ಎಲ್ಲಿ ನೋಡಿದಲ್ಲಿ ಭಕ್ತ ಸಾಗರ, ಪಟ್ಟಣದ ತುಂಬೆಲ್ಲಾ ಜಾತ್ರೆ ವಾತಾವರಣ,ರಾಮಲಿಂಗ ಕಾಮದೇವರ ದರ್ಶನ ಪಡೆದ ಧನ್ಯತಾ ಭಾವದ ಭಕ್ತರ ಸಂಭ್ರಮ. ಇದು ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ರಾಮಲಿಂಗನ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಿಂಗ ಕಾಮದೇವರ ಪ್ರಭಾವ.

Vijaya Karnataka 21 Mar 2019, 5:00 am
ನವಲಗುಂದ : ಎಲ್ಲಿ ನೋಡಿದಲ್ಲಿ ಭಕ್ತ ಸಾಗರ, ಪಟ್ಟಣದ ತುಂಬೆಲ್ಲಾ ಜಾತ್ರೆ ವಾತಾವರಣ,ರಾಮಲಿಂಗ ಕಾಮದೇವರ ದರ್ಶನ ಪಡೆದ ಧನ್ಯತಾ ಭಾವದ ಭಕ್ತರ ಸಂಭ್ರಮ. ಇದು ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ರಾಮಲಿಂಗನ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಿಂಗ ಕಾಮದೇವರ ಪ್ರಭಾವ.
Vijaya Karnataka Web DRW-20-NVL-1
ನವಲಗುಂದದಲ್ಲಿ ಹೋಳಿ ಹಬ್ಬದ ನಿಮಿತ್ತ ಪ್ರತಿಷ್ಠಾಪಿಸಲಾಗಿರುವ ರಾಮಲಿಂಗ ಕಾಮದೇವರು.


ಕೆಲವು ವರ್ಷಗಳ ಹಿಂದೆ ಹೋಳಿ ಹುಣ್ಣಿಮೆ ದಿನದಂದು ಮಾತ್ರ ಪಟ್ಟಣದಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗುತ್ತಿತ್ತು, ಆದರೆ ಪ್ರತಿವರ್ಷ ರಾಮಲಿಂಗ ಕಾಮದೇವರ ದರ್ಶನಕ್ಕೆ ಬರುವ ಭಕ್ತರು ಹೆಚ್ಚಿಗೆಯಾಗುತ್ತಿರುವುದರಿಂದ ಕಾಮದೇವರ ಪ್ರತಿಷ್ಠಾಪನೆ ದಿನದಿಂದ ಕಾಮದಹನದವಾಗುವರೆಗೆ 5ದಿನಗಳೂ ಈಗ ಪಟ್ಟಣದಲ್ಲಿ ಜಾತ್ರೆ ಸಂಭ್ರಮ ಹೆಚ್ಚಿಸಿದೆ.

ಈ 5 ದಿನಗಳಲ್ಲಿ ಲಕ್ಷಾಂತರ ಭಕ್ತ ಸಮೂಹ ರಾಮಲಿಂಗ ಕಾಮದೇವರ ದರ್ಶನಕ್ಕೆ ಆಗಮಿಸಿ ಆರೋಗ್ಯ ಭಾಗ್ಯಕ್ಕಾಗಿ ಬೆಳ್ಳಿ ಕುದುರೆ,ಕಂಕಣ ಭಾಗ್ಯಕ್ಕಾಗಿ ಬೆಳ್ಳಿ ಬಾಸಿಂಗ,ಸಂತಾನ ಭಾಗ್ಯಕ್ಕಾಗಿ ಬೆಳ್ಳಿ ತೊಟ್ಟಿಲು ಸೇರಿದಂತೆ ಸಮಸ್ಯೆಗಳ ಪರಿಹಾರ ನಿವಾರಣೆಗಾಗಿ ಭಕ್ತರು ಹರಕೆ ರೂಪದಲ್ಲಿ ಈ ಬೆಳ್ಳಿ ಪರಿಕರಗಳನ್ನು ಕೊಂಡೊಯ್ಯುವುದು ಸಾಮಾನ್ಯ. ಅದೇ ರಿತಿ ಹರಕೆ ಈಡೇರಿದ ನಂತರ ಪುನ: ಮುಂದಿನ ವರ್ಷ ಭಕ್ತರು ತಾವು ಕೋಡೊಯ್ದ ಬೆಳ್ಳಿ ಪರಿಕರದೊಂದಿಗೆ ಭಕ್ತಿ ರೂಪವಾಗಿ ಮತ್ತೊಂದು ಬೆಳ್ಳಿ ಪರಿಕರ ನೀಡಿ ಹರಕೆಯನ್ನು ಪೂರೈಸುವುದು ವಾಡಿಕೆ.

ಹೀಗಾಗಿ ಇಷ್ಟಾರ್ಥ ಸಿದ್ಧಿ ಪ್ರದಾಯಕನೆಂದೇ ಕರೆಯಲ್ಪಡುವ ರಾಮಲಿಂಗ ಕಾಮದೇವರಿಗೆ ಬರುವ ಭಕ್ತರಿಗೆ ಜಾತಿ,ಮತಗಳ ಕಟ್ಟುಪಾಡುಗಳಿಲ್ಲ. ಹೀಗಾಗಿ ಎಲ್ಲ ಜನಾಂಗದವರು ಸೌಹಾರ್ದದಿಂದ ಭಕ್ತಿ ಸಮೇತ ಹೋಳಿ ಹಬ್ಬವನ್ನು ಆಚರಿಸುತ್ತಿರುವುದಕ್ಕೆ ರಾಮಲಿಂಗ ಕಾಮದೇವರ ಆರಾಧನೆಯೇ ಸಾಕ್ಷಿ.

ಇಂದು ಹುಣ್ಣಿಮೆ

ವು.21 ರ ಗುರುವಾರ ಹುಣ್ಣಿಮೆ ಆಚರಣೆಯಾಗುತ್ತಿದ್ದು ಅಂದು ಕಾಮದೇವರನ್ನು ವಿಶೇಷವಾಗಿ ಅಂಲಂಕರಿಸಿರುತ್ತಾರೆ. ಬರುವ ಭಕ್ತರು ಹಣ್ಣು,ಹೂವು ಹಾಗೂ ಪೇಪರ್‌ನಿಂದ ತಯಾರಿಸಿದ ಬಾಸಿಂಗಗಳನ್ನೂ ಸಮರ್ಪಿಸುತ್ತಾರೆ. ಈ ದಿನ ಲಕ್ಷ ಕ್ಕೂ ಹೆಚ್ಚು ಭಕ್ತರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದು ಕಾಮದೇವರ ದರ್ಶನ ಪಡೆಯುತ್ತಾರೆ.

ಮಾ. 22ರ ಶುಕ್ರವಾರ ಬಣ್ಣದ ಓಕುಳಿ ಜರುಗುತ್ತಿದೆ ಅಂದು ಕೂಡ ರಾತ್ರಿ 9 ರವರೆಗೆ ದೇವಸ್ಥಾನದಲ್ಲಿಯೇ ರಾಮಲಿಂಗಕಾಮದೇವರು ದರ್ಶನಕ್ಕೆ ಲಭ್ಯ, ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಹಾಗೂ ಪೂಜೆಗಳು ನಡೆಯುತ್ತವೆ.ಬಣ್ಣದ ಓಕುಳಿ ಇದ್ದರೂ ಬೇರೆ ಊರುಗಳಿಂದ ಬರುವ ಭಕ್ತರಿಗೆ ಯಾರೂ ಬಣ್ಣ ಎರಚದಿರುವುದು ಪಟ್ಟಣದ ವಿಶೇಷ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ